ಜಾನ್ ಕೀಟ್ಸ್ ನ ಮೌನರಾಗ.....
ಭಾಗ ೧
ಜಾನ್ ಕೀಟ್ಸ್ ಕಾವ್ಯದ ಮಹಾವ್ಯಸನಿ.ಆತ ಕಂಡಿದ್ದು,ಉಂಡಿದ್ದು, ಅಲೆದಾಡಿದ್ದು,ಮಲಗಿದ್ದು, ಕುಡಿದದ್ದು,ಜಗಳವಾಡಿದ್ದು,ಪ್ರೀತಿಸಿದ್ದು,ಕುಣಿದದ್ದು,ನಡೆದದ್ದು ನುಡಿದದ್ದು , ಅನುಭವಿಸಿದ್ದು,ಜೀವಿಸಿದ್ದು, ಉಸಿರಾಡಿದ್ದೆಲ್ಲವೂ ಕಾವ್ಯವೇ.
ಬದುಕಿದ ಅಲ್ಪಾಯುಷ್ಯದಲ್ಲಿಯೇ ಶತಮಾನಗಳಿಡೀ ಫಲ ಕೊಡುವಷ್ಟು ಕಾವ್ಯದ ಬೀಜಗಳನ್ನು ಬಿತ್ತಿ ಹೋಗಿದ್ದಾನೆ.ಹೀಗೆ ಬಿತ್ತಿದ್ದರಿಂದಲೋ ಏನೋ , ಪ್ರಥಮ ದರ್ಜೆ ಕಾವ್ಯಗಳಾಗಿದ್ದರೂ ,ಇವನ ಕಾವ್ಯಬೀಜಗಳು ವಿಮರ್ಶಕರ ದೃಷ್ಟಿಗೆ ಸ್ಪಷ್ಟವಾಗಿ ಗೋಚರವಾಗಲಿಲ್ಲ.ಗೋಚರಿಸಿದರೂ ಆ ಕಾಲದ ಮೌಲಿಕ ಕಾವ್ಯಗಳಾಗಿಲ್ಲ ವೆಂದು,ನಿರ್ಲಕ್ಷ್ಯಕ್ಕೊಳಗಾದ ದುರಂತ ಕವಿ ಜಾನ್ ಕೀಟ್ಸ್.
ಡಾ.ರಾಜಶೇಖರ ಮಠಪತಿಯವರು "ಜಾನ್ಕೀಟ್ಸ್ - ನೀರ ಮೇಲೆ ನೆನಪು ಬರದು.."ಎಂಬ ಕೃತಿಯ ಮೂಲಕ. ಇಂತಿಪ್ಪ ಜಾನ್ ಕೀಟ್ಸ್ ಜೀವನದ ಮೇಲೆ ಬೆಳಕು ಚೆಲ್ಲಿದ್ದಾರೆ. ತನ್ನ ಬದುಕಿನ ಸುಖ, ದು:ಖ , ಸ್ನೇಹ, ಪ್ರೀತಿ,ವಾತ್ಸಲ್ಯ, ಕೋಪ,ಕರುಣೆ,ಪ್ರವಾಸ, ಸಂಬಂಧ ,ನಿರ್ಲಕ್ಷ್ಯ,ಆಸಕ್ತಿ,ಮೃತ್ಯು, ಕಾಯಕ, ತವಕ, ತಲ್ಲಣಗಳಿಗೂ , ಕಾವ್ಯದಲ್ಲಿಯೇ ಮುಕ್ತಿಯನ್ನು ಕಂಡುಕೊಂಡು ಆದರ್ಶ ಕವಿ ಗಳ ಸಾಲಿನಲ್ಲಿ ನಿಲ್ಲಬೇಕಾದ ,ಅವನಿಗೆ ದಕ್ಕಬೇಕಾದ ಸ್ಥಾನವನ್ನು ತಪ್ಪಿಸಿ, ಅಂದಿನ ಮಹಾಮಹಿಮ ವಿಮರ್ಶಕರು ಕವಿತೆಯ ಸಾವಿನ ಮೇಲೆ ಷರಾ ಬರೆದ ಹಾಗೆ,
"ಕೀಟ್ಸ್ ನಿಗೆ ಕಾವ್ಯ ಬರೆಯುವ, ಕಾವ್ಯಕೃಷಿಯಲ್ಲಿ ಮುಂದುವರಿಯುವ ಅರ್ಹತೆಗಳಿಲ್ಲ "
ಎಂದು ಮರಣ ಶಾಸನ ಬರೆದು ಆತನ ನಿಸ್ವಾರ್ಥ, ನಿಶಾಂತ ,ನಿರ್ಮಲ, ಕಾವ್ಯ ಕನ್ನಿಕೆಯ ಸಹಜ ಸೌಂದರ್ಯವನ್ನು ಅಲ್ಲಗಳೆದರು. ಅಲ್ಲಿಗೆ, ಸಹಜವಾಗಿ ಅರಳಬಹುದಾಗಿದ್ದ ಕವಿ ಕಮಲವೊಂದು ಒತ್ತಾಸೆಯ ಜಲಧಾರೆಯಿಲ್ಲದೆ ಸೊರಗಬೇಕಾಯಿತು.
"ನಿಂದಕರಿರಬೇಕು,ಜಗದಲಿ ನಿಂದಕರಿರಬೇಕು."ಎಂಬ ದಾಸವಾಣಿಯಂತೆ, "ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಬಂದೆಡೆ ಸಮಾಧಾನಿಯಾಗಿರಬೇಕು " ಎಂಬ ಅಕ್ಕಮಹಾದೇವಿಯ ವಚನದಂತೆ ಆತ ಎಲ್ಲವನ್ನು ಸಹಿಸಿಕೊಂಡು ತನ್ನ ಜೀವನಾಡಿಯಾಗಿದ್ದ ಕಾವ್ಯಸರಸ್ವತಿಯನ್ನು ಕೊರಗಲು ಬಿಡಲಿಲ್ಲ.ಇಂಥವನ ಬದುಕನ್ನು ಕುರಿತು ರಾಗಂ ರವರ ವ್ಯಾಖ್ಯಾನ
" ಗಾಢ ಸ್ನೇಹ,ಹುಚ್ಚು ಪ್ರೀತಿ ಮತ್ತು ಸಕಾಲಿಕ ಮೃತ್ಯುಗಳ ಒಟ್ಟು ಮೊತ್ತವೇ ಜಾನ್ ಕೀಟ್ಸ್ ನ ಬದುಕು."
ಕೀಟ್ಸ್ ಇಂಗ್ಲೆಂಡಿನ ಲಂಡನ್ ನಲ್ಲಿ ಥಾಮಸ್ ಹಾಗೂ ಫ್ರಾನ್ಸಸ್ ಜಿನ್ನಿಂಗ್ಸ್ ರ ಮಗನಾಗಿ ೧೭೯೫ ರಲ್ಲಿ ಜನಿಸಿದ.೧೮೧೦ ರಲ್ಲಿ ತಾಯಿಯನ್ನು ಕಳೆದುಕೊಂಡು ಸಿಡಿಮಿಡಿಗೊಂಡಿದ್ದ.
ಹೈಡನ್ ಗೆ ಬರೆದ ಪತ್ರದಲ್ಲಿ
"ಬಾಳಿನುದ್ದಕ್ಕೂ ನಾವು ಹೆಣಗಾಡಿ ಸಾಧಿಸುವ ಪ್ರಸಿದ್ಧಿ
ನಮ್ಮ ಸಮಾಧಿಗಳ ಮೇಲೆ ಸುವರ್ಣಾಕ್ಷರಗಳಲ್ಲಿ ಸ್ಥಾಪನೆಯಾಗಲಿ ಸಾವಾಗಿ ಹರಸಲಿ ಅಲ್ಲಿಂದಲೇ ನಮ್ಮ ಹೆಣಗಳನ್ನು "
FANNY BRAWNE |
ತಾಯಿ ಸರಸ್ವತಿ ನಿಮ್ಮಲ್ಲಿ ನೆಲಸಲಿ ಸರ್, ಶುಭವಾಗಲಿ
ReplyDelete