Total Pageviews

Friday 24 November 2023

 ಉಳುಕು


                    ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು 
                    ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು
                    ಕತ್ತಲೆಯ ಧಿಮಾಕನ್ನೊರೆಯಲು ಸಾಕು ಉಬ್ಬಿದ ಅಸ್ತಿ ಮಜ್ಜೆಗಳು
                    ಜಾರಿದ ಪಾದಗಳಿಗೆ ರೂಢಿಯಿಲ್ಲದ ದಿಗ್ಭ್ರಮೆ
        ಬಿದ್ದ ನಂತರ ಕಳಚುವುದೆಲ್ಲ ಕಟ್ಟಿಕೊಂಡ ವಿಭ್ರಮೆ
        ಬಲು ನಾಜೂಕು; ಧಾವಂತಗಳು ನೂಕಿ ನಡೆಯುವ ಜಗದೊಳು
        ದಿಟ್ಟಿಸಿದರೆ ನಾನು ಅತ್ತಿಯ ಹಣ್ಣಿನೊಳಗಿನ ಯಕಃಶ್ಚಿತ ಹುಳು
        ಏಳುಬೀಳುಗಳೇ ಆತ್ಮವನ್ನೆಚ್ಚರಿಸುವ  ಪ್ರೇಮ ಸಂಗಾತಿಗಳು
                    ಬೆನ್ನು ಹತ್ತುತ್ತೇವೆ ಬರೀ ಮೇಲೇರಿ ನೆಲೆಯೂರಬೇಕೆಂಬ ಧೂಳು
                    ಬಲು ಹಿತ ; ನೋವು ನೋವೆನ್ನುವುದರ ನಾಮಸ್ಮರಣೆ
                    ಹೊಳೆಯುವ ಟೈಲುಗಳಿಗೆಲ್ಲಿದೆ ಹೆಜ್ಜೆ ನೆನಪಿಡಬೇಕೆನ್ನುವ ಕರುಣೆ
                    ಕೊಟ್ಟುಬಿಡಬೇಕಷ್ಟೇ ಬರಹಕ್ಕಾಗಿ ಕಲ್ಲಿನ ಕೈಗಳಿಗೆ ಹಣೆ
        ಸೌಭಾಗ್ಯ ಗೀಚಿದರೆ ನಮಗಿನ್ನು ಆಯುಷ್ಯದ ಹೊಣೆ
        ಪಾದ ಅಲುಗಿಸಿದಾಗೊಮ್ಮೆ ಮಧುರ ಯಾತನೆ
        ಹಿತವೋ ಹಿತ ಮಸಾಜಿನ ತೈಲದ ಸುವಾಸನೆ
        ನೋವಿನೊಳಗೊಂದು ಕಾಣದ ಪರಮಾನಂದದ ಗೂಡು
                    ಹೃದಯಕ್ಕೊಂದು ಮರೆಯಲಾಗದ  ಕಾವಿನ ಹಾಡು
                    ಜಗವೆಲ್ಲಾ ತುಂಬಿತುಳುಕುತಿರುವ ಥಳಕು ಬಳುಕು
                    ತೆಗೆಯುವವರಾರು ಹೂತು ಹಾಕಿರುವ ನೆಲದೊಳಗಿನ ಹೆಜ್ಜೆಗಳ                             ಹುಳುಕು
                    ಜಾರಿ ಬೀಳುವುದರ ಹಿಂದಿರಬೇಕು ನುಂಗಿಬಿಡಬೇಕೆನ್ನುವ ಪಾಪದ                         ಕೊಂಕು
                    ಸುರುಳಿ ಸುರುಳಿಯೊಳಗಡಗಿದೆ ಕಾಲನ ನಿಗೂಢ ಚುಳುಕು
x

 ಉಳುಕು
ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು 
ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು
ಕತ್ತಲೆಯ ಧಿಮಾಕನ್ನೊರೆಯಲು ಸಾಕು ಉಬ್ಬಿದ ಅಸ್ಥಿ
 ಮಜ್ಜೆಗಳು
ಜಾರಿದ ಪಾದಗಳಿಗೆ ರೂಢಿಯಿಲ್ಲದ ದಿಗ್ಭ್ರಮೆ
ಬಿದ್ದ ನಂತರ ಕಳಚುವುದೆಲ್ಲ ಕಟ್ಟಿಕೊಂಡ ವಿಭ್ರಮೆ

ಬಲು ನಾಜೂಕು; ಧಾವಂತಗಳು ನೂಕಿ ನಡೆಯುವ ಜಗದೊಳು
ದಿಟ್ಟಿಸಿದರೆ ನಾನು ಅತ್ತಿಯ ಹಣ್ಣಿನೊಳಗಿನ ಯಕಃಶ್ಚಿತ ಹುಳು
ಏಳುಬೀಳುಗಳೇ ಆತ್ಮವನ್ನೆಚ್ಚರಿಸುವ  ಪ್ರೇಮ ಸಂಗಾತಿಗಳು
ಬೆನ್ನು ಹತ್ತುತ್ತೇವೆ ಬರೀ ಮೇಲೇರಿ ನೆಲೆಯೂರಬೇಕೆಂಬ ಧೂಳು

ಬಲು ಹಿತ ; ನೋವು ನೋವೆನ್ನುವುದರ ನಾಮಸ್ಮರಣೆ
ಹೊಳೆಯುವ ಟೈಲುಗಳಿಗೆಲ್ಲಿದೆ ಹೆಜ್ಜೆ ನೆನಪಿಡಬೇಕೆನ್ನುವ ಕರುಣೆ
ಕೊಟ್ಟುಬಿಡಬೇಕಷ್ಟೇ ಬರಹಕ್ಕಾಗಿ ಕಲ್ಲಿನ ಕೈಗಳಿಗೆ ಹಣೆ
ಸೌಭಾಗ್ಯ ಗೀಚಿದರೆ ನಮಗಿನ್ನು ಆಯುಷ್ಯದ ಹೊಣೆ

ಪಾದ ಅಲುಗಿಸಿದಾಗೊಮ್ಮೆ ಮಧುರ ಯಾತನೆ
ಹಿತವೋ ಹಿತ ಮಸಾಜಿನ ತೈಲದ ಸುವಾಸನೆ
ನೋವಿನೊಳಗೊಂದು ಕಾಣದ ಪರಮಾನಂದದ ಗೂಡು
ಹೃದಯಕ್ಕೊಂದು ಮರೆಯಲಾಗದ  ಕಾವಿನ ಹಾಡು

ಜಗವೆಲ್ಲಾ ತುಂಬಿತುಳುಕುತಿರುವ ಥಳಕು ಬಳುಕು
ಹೆಕ್ಕಿ ತೆಗೆಯುವವರಾರು ಹೂತು ಹಾಕಿರುವ ನೆಲದೊಳಗಿನ ಹೆಜ್ಜೆಗಳ ಹುಳುಕು
ಜಾರಿ ಬೀಳುವುದರ ಹಿಂದಿರಬೇಕು ನುಂಗಿಬಿಡಬೇಕೆನ್ನುವ ಪಾಪದ ಕೊಂಕು
ಸುರುಳಿ ಸುರುಳಿಯೊಳಗಡಗಿದೆ ಕಾಲನ ನಿಗೂಢ ಚುಳುಕು

ಉಳುಕು



ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು 
ಸತ್ಯದ ರ‍್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು
ಕತ್ತಲೆಯ ಧಿಮಾಕನ್ನೊರೆಯಲು ಸಾಕು ಉಬ್ಬಿದ ಅಸ್ತಿ ಮಜ್ಜೆಗಳು
ಜಾರಿದ ಪಾದಗಳಿಗೆ ರೂಢಿಯಿಲ್ಲದ ದಿಗ್ಭ್ರಮೆ
ಬಿದ್ದ ನಂತರ ಕಳಚುವುದೆಲ್ಲ ಕಟ್ಟಿಕೊಂಡ ವಿಭ್ರಮೆ

ಬಲು ನಾಜೂಕು; ಧಾವಂತಗಳು ನೂಕಿ ನಡೆಯುವ ಜಗದೊಳು
ದಿಟ್ಟಿಸಿದರೆ ನಾನು ಅತ್ತಿಯ ಹಣ್ಣಿನೊಳಗಿನ ಯಕಃಶ್ಚಿತ ಹುಳು
ಏಳುಬೀಳುಗಳೇ ಆತ್ಮವನ್ನೆಚ್ಚರಿಸುವ  ಪ್ರೇಮ ಸಂಗಾತಿಗಳು
ಬೆನ್ನು ಹತ್ತುತ್ತೇವೆ ಬರೀ ಮೇಲೇರಿ ನೆಲೆಯೂರಬೇಕೆಂಬ ಧೂಳು

ಬಲು ಹಿತ ; ನೋವು ನೋವೆನ್ನುವುದರ ನಾಮಸ್ಮರಣೆ
ಹೊಳೆಯುವ ಟೈಲುಗಳಿಗೆಲ್ಲಿದೆ ಹೆಜ್ಜೆ ನೆನಪಿಡಬೇಕೆನ್ನುವ ಕರುಣೆ
ಕೊಟ್ಟುಬಿಡಬೇಕಷ್ಟೇ ಬರಹಕ್ಕಾಗಿ ಕಲ್ಲಿನ ಕೈಗಳಿಗೆ ಹಣೆ
ಸೌಭಾಗ್ಯ ಗೀಚಿದರೆ ನಮಗಿನ್ನು ಆಯುಷ್ಯದ ಹೊಣೆ

ಪಾದ ಅಲುಗಿಸಿದಾಗೊಮ್ಮೆ ಮಧುರ ಯಾತನೆ
ಹಿತವೋ ಹಿತ ಮಸಾಜಿನ ತೈಲದ ಸುವಾಸನೆ
ನೋವಿನೊಳಗೊಂದು ಕಾಣದ ಪರಮಾನಂದದ ಗೂಡು
ಹೃದಯಕ್ಕೊಂದು ಮರೆಯಲಾಗದ  ಕಾವಿನ ಹಾಡು

ಜಗವೆಲ್ಲಾ ತುಂಬಿತುಳುಕುತಿರುವ ಥಳಕು ಬಳುಕು
ಹೆಕ್ಕಿ ತೆಗೆಯುವವರಾರು ಹೂತು ಹಾಕಿರುವ ನೆಲದೊಳಗಿನ ಹೆಜ್ಜೆಗಳ ಹುಳುಕು
ಜಾರಿ ಬೀಳುವುದರ ಹಿಂದಿರಬೇಕು ನುಂಗಿಬಿಡಬೇಕೆನ್ನುವ ಪಾಪದ ಕೊಂಕು
ಸುರುಳಿ ಸುರುಳಿಯೊಳಗಡಗಿದೆ ಕಾಲನ ನಿಗೂಢ ಚುಳುಕು

Thursday 17 November 2022

 ದಿಗಂಬರವೇ ದಿವ್ಯಾಂಬರ

ಪಂಪ ರನ್ನ ಜನ್ನರು ಸಾಕು ಅರಿವುದು ಸೌಜನ್ಯ
ಕೋಟಿ ಜೀವರಾಶಿಗಳ ಜಗದಲ್ಲಿ ಮನುಷ್ಯನೇ ವಿಶ್ವಮಾನ್ಯ
ಗ್ಯಾಲಕ್ಸಿಗಳ ಬ್ರಹ್ಮಾಂಡದಲ್ಲಿ ನಾವು ತೃಣ ಸಾಮಾನ್ಯ
ನ್ಯಾಯದ ಗುಡಿಯಿದು ಪರಿಮಳದ ಶ್ರೀಗಂಧದ ಅರಣ್ಯ


ಕೋಮಲವಾಗಿ ಬಳುಕುವ ಬಿಳಿಯಿರುವುದೆಲ್ಲ ಹಾಲಲ್ಲ 
ಎಂದರು ಕುವೆಂಪು ಸಚಿವ ಮಂಡಲವೆಂದೂ ಶಾಶ್ವತವಲ್ಲ
ನಂಬದಿರಿ ಕಿವಿ ಕಚ್ಚಿ ಹಾಡುವ ಹಾಲುಗಲ್ಲ
ಎದುರಾಗುವವರೆಲ್ಲರೂ ಬಾಗುವ ಸಣ್ಣತನಗಳ ಜಾಳಲ್ಲ


ತಲ್ಲಣಿಸದಿರು ಕಂಡ್ಯ ತಾಳು ಮನವೆಂದರು ದಾಸರು
ಹೊರಡುವ ಹಾದಿಯೊಂದೇ ನಾವು ಭಗವಂತನ ದಾಸರು
ಭುವನ ಗೆದ್ದ ತಥಾಗತನಿಗೆ ಹೆಸರು ಮಂದಹಾಸರು
ಕಾಯಕವೇ ಕೈಲಾಸ ಬೇಕೆ ಹಂಗಿನರಮನೆಯ ಹೆಸರು?


ವಿಚಾರಿಸಿದರೆ ತಪ್ಪು ಒಪ್ಪುಗಳ ಪ್ರಶ್ನೆ  ಅನಂತ
ಆರಾಧಿಸಿದರೆ ಸಾಕು ಸರಸ್ವತಿಯ  ಏಕಾಂತ
ದಿಗಂಬರವೇ ದಿವ್ಯಾಂಬರ ಅಕ್ಕಮಹಾದೇವಿಯ ಪಂಥ
ತಿದ್ದಿ ಬೆಳಕಾಗಬೇಕೆನ್ನುವುದೇ ಭುವನದ ಮನುಜ ಮತ

ದಿಗಂಬರವೇ ದಿವ್ಯಾಂಬರ



ಪಂಪ ರನ್ನ ಜನ್ನರು ಸಾಕು ಅರಿವುದು ಸೌಜನ್ಯ
ಕೋಟಿ ಜೀವರಾಶಿಗಳ ಜಗದಲ್ಲಿ ಮನುಷ್ಯನೇ ವಿಶ್ವಮಾನ್ಯ
 ಸಾವಿರ ಗ್ಯಾಲಕ್ಸಿಗಳ ಬ್ರಹ್ಮಾಂಡದಲ್ಲಿ ನಾವು ತೃಣ ಸಾಮಾನ್ಯ
ನ್ಯಾಯದ ಗುಡಿಯಿದು ಪರಿಮಳದ ಶ್ರೀಗಂಧದ ಅರಣ್ಯ

ಕೋಮಲವಾಗಿ ಬಳುಕುವ ಬಿಳಿಯಿರುವುದೆಲ್ಲವೂ ಹಾಲಲ್ಲ 
ಎಂದರಂದು ಕುವೆಂಪು ಸಚಿವ ಮಂಡಲವೆಂದೂ ಶಾಶ್ವತವಲ್ಲ
ನಂಬದಿರಿ ಕಿವಿ ಕಚ್ಚಿ ಹಾಡುವ ಹಾಲುಗಲ್ಲ
ಎದುರಾಗುವವರೆಲ್ಲರೂ ಬಾಗುವ ಸಣ್ಣತನಗಳ ಜಾಳಲ್ಲ

ತಲ್ಲಣಿಸದಿರು ಕಂಡ್ಯ ತಾಳು ಮನವೆಂದರು ದಾಸರು
ಹೊರಡುವ ಹಾದಿಯೊಂದೇ ನಾವು ಭಗವಂತನ ದಾಸರು
ಭುವನ ಗೆದ್ದ ತಥಾಗತನಿಗೆ ಹೆಸರು ಮಂದಹಾಸರು
ಕಾಯಕವೇ ಕೈಲಾಸ ಬೇಕೆ ಹಂಗಿನರಮನೆಯ ಹೆಸರು ?

ವಿಚಾರಿಸಿದರೆ ತಪ್ಪು ಒಪ್ಪುಗಳ ಪ್ರಶ್ನೆ  ಅನಂತ
ಆರಾಧಿಸಿದರೆ ಸಾಕು ಸರಸ್ವತಿಯ  ಏಕಾಂತ
ದಿಗಂಬರವೇ ದಿವ್ಯಾಂಬರ ಅಕ್ಕಮಹಾದೇವಿಯ ಪಂಥ
ತಿದ್ದಿ ಬೆಳಕಾಗಬೇಕೆನ್ನುವುದೇ ಭುವನದ ಮನುಜ ಮತ

Friday 14 January 2022

ಸಂಕ್ರಮಣ

ಸಂಕ್ರಮಣ



ಸಂಕ್ರಮಣವೆಂದಾರಂಭಿಸಿದ ಆಗಂತುಕ ಪಯಣ
ಅನಂತದವರೆಗೂ ಸೆಳೆದುಕೊಂಡ ಸತ್ಯಗಳ ಅರುಣ 
ಕಂಡ ದಾರಿಯದೋ ಬಲು ಹಿತ ಒಮ್ಮೊಮ್ಮೆ ದಾರುಣ
ಎಲ್ಲಿರುವನೋ ಆವರಿಸಿ ಹಸಿಯಾಗಿಸುವ ಚೈತನ್ಯದ ವರುಣ


ಹೊರಟ ಹಾದಿ ಹೊರಳಿತಲ್ಲ ಕಾಲವೇ ನೀ ಕಾರಣ
ಏರಿದರೂ ಮುಗಿಯದು; ಇದೆಂತಹ ಚಿರ ಚಾರಣ
ತೊಟ್ಟಂತಿಹುದು ಇಳೆಯಿಂದು ಬಿಸಿಲ ಸ್ವರ್ಣದಾಭರಣ
ಕ್ಷಣ ಕ್ಷಣವೂ ಹೊಸದು ; ಕಾಲವೇ ನಿನ್ನ ಪವಿತ್ರ ಚರಣ


ಹೊರಳಿದಾಗೊಮ್ಮೆ ನಿನ್ನಂತಾಗಬೇಕು; ರಹಸ್ಯವೇನು ತರುಣ
ನೇಸರನಿಗೂ ದಯಪಾಲಿಸಿರುವೆ ; ನಿತ್ಯೋತ್ಸವ ಜನನ
ಹಾದಿಯಲ್ಲೊಮ್ಮೆ ಮೈಲುಗಲ್ಲಾದೆ; ತೀರಿಸುವುದೆಂತು ಋಣ
ಜೀವವಿದು ನಿತ್ಯ ಹರಿದು ಪರಿಚಲಿಸುವ ಹೊಂಬಾಣ


ಭುವಿ ತಿರುಗುವ ಸದ್ದೆಲ್ಲಿಹುದೋ ಪುನೀತವಾಗಬೇಕಿವೆ ಕರಣ
ಪ್ರಾಣವೆಲ್ಲವೂ ಅರಿತರಿಯದಂತೆ ನಿನ್ನೊಳಗೆ ಹರಣ
ಕಾಯುವೆಯಾ ಕೊನೆಯವರೆಗೂ; ನಂಬಿದೆ ನಾಗಾಭರಣ
ಉತ್ತರಾಯಣದ ಪ್ರಶ್ನೆಗಳಿಂದರಿತೆ ಸೃಷ್ಟಿಯ ಧಾರಣ


ಬಯಸಿದ ಬೀದಿಯೆಲ್ಲವೂ ವಿಸ್ಮಯದ ಹೂರಣ
ಹಾಡಬೇಕೆನ್ನಿಸಿದೆ ಹಕ್ಕಿಗಳೊಂದಿಗೆ  ರಸರಾಗ ತಾನನ
ಶಿಶುಪುಷ್ಯನಿಗೆಲ್ಲದೆ ನಿತ್ಯ ಭೋಗಿಸುವ ಭಾಗ್ಯದ ಭೋಜನ
ಗಿಡಮರಗಳಿಗೆ ಮೈಸವರುವ ಸಮಯವಿದುವೇ ಅಭ್ಯಂಜನ

Thursday 21 October 2021

ಬೆಳದಿಂಗಳ ಕಾವ್ಯ

ಬೆಳದಿಂಗಳ ಕಾವ್ಯ
ಗಾಲಿಬ್ ಹಾಡುತ್ತಾನೆ ಹೀಗೆ -
"ಮಸೀದಿಯಲ್ಲಿ ಕುಳಿತು ಮದಿರೆಯನ್ನು ಕುಡಿಯಲು ಬಿಡು ಗಾಲಿಬ್
ಇಲ್ಲವಾದರೆ ದೇವರಿಲ್ಲದ ಸ್ಥಳವನ್ನಾದರೂ ಹುಡುಕಿಕೊಡು ಕುಡಿಯಲು ಶರಾಬು"
ಎಂದು ದೇವರಿಲ್ಲದ ಸ್ಥಳವನ್ನು ಶೋಧಿಸುವ ಮಾರ್ಗವಾಗಿ ಕವಿತೆ ಗಾಲೀಬನನ್ನು ಕಾಡಿದರೆ, ಸಂತ ಶಿಶುನಾಳ ಶರೀಫರ ಬದುಕಿನುದ್ದಕ್ಕೂ ಇದೇ ಪ್ರಶ್ನೆ ನಾದವಾಗಿ ಹರಿದಿರುವುದನ್ನು ಅಲ್ಲಗಳೆಯಲಾಗದು. ಕನಕದಾಸರಲ್ಲಿ ಈ ಅಂತರಂಗದ ಶೋಧನೆ ಬಾಳೆಹಣ್ಣಿನ ಪ್ರಸಂಗದ ಮೂಲಕ ಸಾಕಾರವಾಗಿರುವುದನ್ನು ಗಮನಿಸಬೇಕು. ಇದನ್ನೇ ಬಸವಣ್ಣನವರು ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ ಎಂದು ಕೂಡಲಸಂಗಮದೇವನನ್ನೊಲಿಸಿಕೊAಡು ಪರಿಶೋಧಿಸುವ ಮಾರ್ಗವನ್ನಾಗಿ ವ್ಯಾಖ್ಯಾನಿಸುತ್ತಾರೆ. ಜಿ.ಎಸ್. ಶಿವರುದ್ರಪ್ಪನವರಿಗೆ ಕಾವ್ಯ ಕೆಲವು ಉತ್ತರಿಸಲಾಗದ ಪ್ರಶ್ಜೆಗಳ ಸ್ವರೂಪದಲ್ಲಿ ದಕ್ಕಿದರೆ, ಅಡಿಗರಿಗೆ ಹುತ್ತಗಟ್ಟಿದ ಚಿತ್ತದ ಸುಳಿಯಾಗಿ ಆವರಿಸಿದ್ದಿದೆ. ಟಿ. ಎಸ್. ಇಲಿಯಟ್‌ನಿಗೆ ಕಾವ್ಯ ಅವನ ಬದುಕಿನಂತೆ ನೀರ ಮೇಲಿನ ನೆನಪುಗಳಾಗಿ ಹರಡಿಕೊಂಡಿರುವುದು ಅಷ್ಟೇ ವಿಸ್ಮಯವನ್ನುಂಟು ಮಾಡುತ್ತದೆ. ಕಾವ್ಯವೆಂದರೆ ಏನೂ ಅಲ್ಲ ಅದೊಂದು ಬಯಲು  ಎಂದವನು ಅಲ್ಲಮ. ‘ಬಯಲು ಬಯಲನೇ ಬಿತ್ತಿ ಬಯಲು ಬಯಲನೇ ಬೆಳೆದು ಬಯಲು ಬಯಲಾಗಿ ಬಯಲಾಯಿತ್ತಯ್ಯ " ಎಂದು ಹಾಡುತ್ತಲೇ ಕಾವ್ಯದಂತೆ ಬಯಲಾಗಿ ಹೋದ. ಕಾವ್ಯ ಕೇವಲ ರಸಾನಂದಕ್ಕಾಗಿ ಮಾತ್ರವಲ್ಲ. 

“ಕಾವ್ಯಂ ಯಶಸ್ಸೇರ್ಥಕೃತೇ ವ್ಯವಹಾರವಿದೆ
ಶಿವೇತರಕ್ಷತಯೇ ಕಾಂತಾ ಸಮ್ಮಿತತಯೋಪದೇಶಯುಜೆ”
ಎಂದು ಮಮ್ಮಟ ಹೇಳುವ  ಕಾವ್ಯ ಕೀರ್ತಿಗಾಗಿ, ವ್ಯವಹಾರ ಜ್ಞಾನಕ್ಕಾಗಿ, ಧನಾರ್ಜನೆಗಾಗಿ, ಪರಮಾನಂದಕ್ಕಾಗಿ, ಅಮಂಗಳ ನಿವಾರಣೆಗಾಗಿ, ಕಾಂತೆಯAತೆ ಉಪದೇಶಿಸುವುದಕ್ಕಾಗಿ ಸಹಾಯ ಮಾಡಬಲ್ಲದು. ಈ ಕಾವ್ಯ ಪ್ರಯೋಜನಗಳು ಪ್ರಾಚೀನ ಕಾವ್ಯವನ್ನು ಅನುಲಕ್ಷಿಸಿ ಹೇಳಲಾಗಿದೆ. 

ನಡುಗನ್ನಡದ ಕಾವ್ಯದ ಪರಿಣಾಮಗಳು ಇದಕ್ಕಿಂತ ಭಿನ್ನವಾಗಿವೆ. ಪರಂಪರೆಯ ಕಟ್ಟಳೆಯೊಳಗೆ ಬಂಧಿಯಾದ ಅರಮನೆಯ ಹಾಗೂ ಪಂಡಿತರ ಕಾವ್ಯವನ್ನು ಮರಿದು ಕಟ್ಟಿದ ವಚನಕಾರರು ವ್ಯವಹಾರ ಜ್ಞಾನ ಉಪದೇಶಗಳಿಗೆ ಸೀಮಿತವಾಗಿದ್ದ ಕಾವ್ಯಪ್ರಯೋಜನಗಳನ್ನು ಅದೆಷ್ಡರ ಮಟ್ಟಿಗೆ ವಿಸ್ತರಿಸಿದರೆಂದರೆ ವಚನವೆಂದರೆ ಬದುಕು; ಬದುಕೆಂದರೆ ವಚನವೆನ್ನುವಂತಾಯಿತು. 
“ಅಪ್ಪನು ನಮ್ಮ ಮಾದಾರ ಚೆನ್ನಯ್ಯ
ಬೊಪ್ಪನು ನಮ್ಮ ಡೋಹರ ಕಕ್ಕಯ್ಯ
ಚಿಕ್ಕಯ್ಯನೆಮ್ಮಯ್ಯ ಕಾಣಯ್ಯ
ಅಣ್ಣನು ನಮ್ಮ ಕಿನ್ನರಿ ಬೊಮ್ಮಯ್ಯ
ಎನ್ನನೇತಕ್ಕರಿಯರಿ ಕೂಡಲಸಂಗಯ್ಯಾ
ಎನ್ನುವ ಕಾವ್ಯಕ್ಕೆ ಬಿಜ್ಜಳ ಉರುಳಾಗಿ ಪರಿಣಮಿಸಿದ. ಲಕ್ಷದ ತೊಂಭತ್ತಾರು ಸಾವಿರ ಶರಣರ ಮಾರಣಹೋಮವಾದರೂ ಬದುಕಾಗಿದ್ದ ಕಾವ್ಯವನ್ನು ಮಾತ್ರ ತ್ಯಜಿಸಲಿಲ್ಲ ಶರಣರು. ಶ್ರೀಶೈಲ, ಉಳವಿ, ಕೂಡಲಸಂಗಮ ಹೀಗೆ ಬದುಕು ಹರಿದಲ್ಲೆಲ್ಲಾ ಹರಿದರು ನದಿಯಾಗಿ. ಅಂದರೆ ಕಾವ್ಯವೆಂದರೆ ಅದೊಂದು ಸಂಭ್ರಮದ ಕಡಲು ಮಾತ್ರವಲ್ಲ; ಸಂಕಟದ ಹೆರಿಗೆಯೂ ಹೌದು. ಇದನ್ನೇ ರಾಗಂರವರು ಕಾವ್ಯವೆನ್ನುವುದು ಪದರುಡಿಯ ಕೆಂಡವೆನ್ನುತ್ತಾರೆ. ಝಳಪಿಸಿದರೆ ಖಡ್ಗವಾಗಬಲ್ಲ, ಅಪ್ಪಿಕೊಂಡರೆ ಮುಗ್ಧತೆಯ ಮಗುವಾಗಬಲ್ಲ, ಕೆರಳಿದರೆ ಕೆಂಡವಾಗಬಲ್ಲ, ಅರಳಿದರೆ ಕುಸುಮವಾಗಬಲ್ಲ, ಹರಿದರೆ ನದಿಯಾಗಬಲ್ಲ ಜಗತ್ತಿನ ಏಕೈಕ ದಿವ್ಯವೆಂದರೆ ಅದು ಕಾವ್ಯ ಮಾತ್ರ. ಕುವೆಂಪು, ಬೇಂದ್ರೆ, ಪುತಿನರಂತಹ ದಾರ್ಶನಿಕರು ಪ್ರಕೃತಿ, ರಮ್ಯತೆ, ಆದರ್ಶ, ದೇಶಭಕ್ತಿಗಾಗಿ ನವೋದಯವನ್ನು ಹಾಡಿದರೆ, ಗೋಪಾಲಕೃಷ್ಣ ಅಡಿಗರಂತಹ ಮಹನೀಯರು ಸಂಕೀರ್ಣ ಹಾಗೂ ವೈಯಕ್ತಿಕ ಸಂಘರ್ಷಗಳ ನವ್ಯ ಗೀತೆಗಳನ್ನು ಆಲಾಪಿಸಿದರು. ಸಿದ್ಧಲಿಂಗಯ್ಯ, ದೇವನೂರರು ಕ್ರಾಂತಿಯನ್ನೇ ಕಾವ್ಯವಾಗಿಸಿಕೊಂಡರು.

 ಹೀಗೆ ಎಲ್ಲವೂ, ಏನೆಲ್ಲವೂ ಆದ ಕಾವ್ಯವನ್ನು ಆರಾಧಿಸುವುದೆಂದರೆ ಎಲ್ಲಿಲ್ಲದ ಮಹದಾನಂದ. ಬೆಳದಿಂಗಳು, ಕಾವ್ಯ, ಮಗು, ಗುರು, ಇತಿಹಾಸ, ಕುಶಲೋಪರಿ, ತಹತಹಿಕೆಗಳ ಸಮ್ಮಿಲನ, ಹೀಗೆ ಬದುಕಿನ ರಸಾಯನಗಳೆಲ್ಲವೂ ಮೇಳೈಸಿ ಸಂಭವಿಸಿದ ಸಮ್ಮೇಳನವೇ ಈ ಬೆಳದಿಂಗಳ ಕಾವ್ಯಗೋಷ್ಠಿ. ಮಹರ್ಷಿ ವಾಲ್ಮೀಕಿ, ಕೆ.ಎಸ್. ನಿಸಾರ್ ಆಹಮ್ಮದ್, ಗ್ರಾಹಕರ ತಲ್ಲಣಗಳು, ಗಜಲ್, ಭಾವಗೀತೆ, ವಿರಹ, ಪ್ರೇಮ, ಪ್ರಶ್ನೆಗಳು ಹೀಗೆ ವೈವಿಧ್ಯಮಯ ವಸ್ತುಗಳೆಲ್ಲವೂ ಚಂದಿರನ ಮಡಿಲಲ್ಲಿ ಬೆಳದಿಂಗಳ ಕಾವ್ಯಗಳಾಗಿ ಧ್ಯಾನಿಸಿದ ಬಗೆಯನ್ನು ಮೆಲುಕು ಹಾಕುತ್ತಲೇ ಇರಬೇಕೆನಿಸುತ್ತಿದೆ. ಸಹೃದಯರೆಲ್ಲರೂ ಚಕೋರರಾಗಿ ಬೆಳದಿಂಗಳ ಕವಿತೆಯ ಸಾಲುಗಳನ್ನು ಹೀರಿ ತಣಿಯುತ್ತಿದ್ದರೆನ್ನುವುದಕ್ಕೆ ತಲೆದೂಗುತ್ತಿದ್ದ ಪರಿಯೇ ಸಾಕ್ಷಿಯನ್ನೊದಗಿಸಿತ್ತು.  
 

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...