Total Pageviews
Monday 25 May 2020
ಭೃಂಗದ ಬೆನ್ನೇರಿ...
ಭೃಂಗದ ಬೆನ್ನೇರಿ...
ಒಂದು ಶುಭೋದಯದಲ್ಲಿ ಮನೆಯಂಗಳದಲ್ಲಿ ಬೆಳೆದು ನಿಂತ ಬೇವು, ಮಾವು, ಬದಾಮಿ, ಕಣಗಿಲೆ, ಜಾಜಿ, ಮಲ್ಲಿಗೆ, ಹಲಸಿನ ಸಸಿಗಳೊಂದಿಗೆ ಕುಶಲೋಪರಿಗಿಳಿದು ಮಾತನಾಡುತ್ತಿದ್ದೆ. ಬೇಸಿಗೆಯಾದ್ದರಿಂದ ಹಿಂದಿನ ದಿನವೆಲ್ಲಾ ನೆತ್ತಿ ಸುಡುವ ಉರಿಬಿಸಿಲಿನಲ್ಲಿ ತಲೆಯಾದಿಯಾಗಿ ಅಂಗಾಂಗಳನ್ನೆಲ್ಲಾ ಕಾಯಿಸಿಕೊಂಡು ಸುಸ್ತಾದಂತಿದ್ದ ಸಸ್ಯಗಳ ಕೈಹಿಡಿದು ಸವರಿ, ಸಂತೈಸುತ್ತಾ, ರಾತ್ರಿಯೆಲ್ಲಾ ತಂಗಾಳಿಯಲ್ಲಿ ನೆನೆದು ತಂಪಾದ ಬೆಳದಿಂಗಳ ಅನುಭವಗಳನ್ನು ಹೆಕ್ಕಿ ತೆಗೆದು ತರುಲತೆಗಳ ಮನಸ್ಸನ್ನು ಮುದಗೊಳಿಸಬೇಕೆನ್ನಿಸಿ, ಒಂದೊಂದರ ಹತ್ತಿರವೂ ನಿಂತು, ರಂಬೆ, ಕೊಂಬೆ, ಎಲೆ, ಚಿಗುರು, ಹೂಗಳ ಮೈದಡವಿ ನೇವರಿಸುತ್ತಾ, ತಣಿರಸದಂತಿದ್ದ ತಂಪು ನೀರನ್ನೆರೆದು ಸಲ್ಲಾಪಕ್ಕಿಳಿದೆ. ಸಾವರಿಸಿಕೊಂಡು ಬಾಗಿ ಅಪ್ಪಿಕೊಳ್ಳುತ್ತಿರುವಂತೆ, ಬೀಸುತ್ತಿರುವ ಮರುಳ ಸುಳಿಗಾಳಿಗೆ ತಮ್ಮ ಅಂಗಾಂಗಳನ್ನೆಲ್ಲಾ ಮುಂದೆ ಚಾಚಿ ಧನ್ಯವಾದಗಳನ್ನು ಹೇಳುತ್ತಿರುವಂತೆ ಭಾಸವಾಗಿ, ಧನ್ಯತೆಯಿಂದ ಕಣ್ತುಂಬಿಕೊಂಡೆ. ಇಬ್ಬನಿಯಿಲ್ಲದೇ ಶುಷ್ಕವಾದಂತಿದ್ದ ವಾತಾವರಣಕ್ಕೀಗ, ಕರುಳಕುಡಿಯಂತಿದ್ದ ಸಸ್ಯಗಳ ಈ ಪ್ರೀತಿಯ ರೀತಿ ಕಂಡಾಗ, ಗೊತ್ತಿಲ್ಲದೇ ನನ್ನೊಳಗೆ ಹುಟ್ಟಿದ ಆನಂದಭಾಷ್ಪಗಳು ಸೇರಿಕೊಂಡು ಸನ್ನಿವೇಶವನ್ನು ಆರ್ದ್ರವಾಗಿಸಿತು. ಕ್ಷಣ ಹೊತ್ತು ಭಾವುಕನಾದೆ. ಆ ಬಗೆ ಬಗೆಯ ಫಲ-ಪುಷ್ಪ ಸಸಿಗಳ ಬೇರಿಗೆರೆದ ಜಲಾಮೃತ ನಿಧಾನವಾಗಿ ಇಂಗಿ ಹೋಗುವಂತೆ, ಕ್ರಮೇಣ ಕಣ್ಣಹನಿಗಳೂ ಎದೆಯೊಳಗಿಳಿದು ಹಾಗೇ ಬತ್ತಿಹೋದವು. ಮತ್ತೆ ಶುಭೋದಯದ ಅಂಗಣಕ್ಕಿಳಿದೆ. ನೇಸರನ ಕಿರಣಗಳ ರಂಗೋಲಿ, ಅಂಗಳದಲ್ಲಿನ ಸಸ್ಯಸಂಕುಲ, ಕುಸುಮಗಳ ಸುತ್ತವೇ ನೆರೆದು ಮಧುವನ್ನರಸಿ ಹೊರಟ ದುಂಬಿಗಳ ಬಳಗ, ರಂಗುರಂಗಿನ ಚಾಮರದಂತಿದ್ದ ಚಿಟ್ಟೆಯ ರೆಕ್ಕೆಗಳ ಬೀಸುವಿಕೆ, ಗಿಳಿ, ಕೋಗಿಲೆ, ಗುಬ್ಬಿಗಳ ಉದಯಗಾನ, ಹೀಗೆ ಎಲ್ಲವೂ, ಎಲ್ಲರನ್ನೂ ಆಮಂತ್ರಿಸಿ, ಕರೆದು ಮೇಳೈಸಿದಂತಿತ್ತು ಆ ಶುಭೋದಯದ ದಿಬ್ಬಣಕ್ಕೆ. ಬಹುಶಃ ನಾವೆಲ್ಲರೂ ಆಚರಿಸುವ ಯೋಜಿತ ಹಬ್ಬ, ಉತ್ಸವಗಳಲ್ಲಿಯೂ ಈ ಮಟ್ಟದ ಪ್ರಕೃತಿ ಸಹಜ ಮೇಳೈಸುವಿಕೆ ಅಸಾಧ್ಯವೇನೋ ? ಅಂತೂ, ಪ್ರಕೃತಿಯ ಮೆರವಣಿಗೆಯ ಸಂಭ್ರಮ ಮನೆ ಮಾಡಿತು. ಆಕಸ್ಮಾತ್ ಆಗಿ ಅಂದು ಸರಿಯಾದ ಸಮಯಕ್ಕೆ ದಾಂಗುಡಿಯಿಟ್ಟ ಮಂಗಗಳಿಂದಾಗಿ, ಅದು ಮಂಗಣ್ಞನ ಮದುವೆಯ ದಿಬ್ಬಣವಾಗಿ ಪರಿವರ್ತನೆಯೂ ಆಗಿಹೋಯಿತು. ಮಂಗಗಳ ಚೆಲ್ಲಾಟದ ಮದುವೆಯೆಂದರೆ ಕೇಳಬೇಕೆ ? ಎಲೆ, ಹೂ, ಹಣ್ಣು, ಕಾಯಿ, ತಾಂಬೂಲಗಳನ್ನು ಸಂಗ್ರಹಿಸುವುದೇ ಬೇಡ. ಆಗಸದಲ್ಲಿ ನಿಂತು ಆಶೀರ್ವದಿಸುತ್ತಿರುವ ದೇವತೆಗಳ ಕೈಯ್ಯಿಂದ ಉದುರುತ್ತಿರುವಂತೆ, ಸಕಲ ಮಂಗಳ ಪರಿಕರಗಳೆಲ್ಲವೂ ಧರೆಗೆ ಇಳಿಯಹತ್ತಿದವು. ಕೆಲವೊಮ್ಮೆ ಏಕಕಾಲಕ್ಕೆ, ಮತ್ತೊಮ್ಮೆ ಒಂದಾದ ನಂತರವೊಂದರಂತೆ. ಆಂಜನೇಯನ ಕಾಟದಿಂದ ಬೇಸತ್ತು ಹೀಗೆ ಒಲ್ಲದ ಮನಸ್ಸಿನಿಂದ, ಕಿರುಕುಳದ ಮುನಿಸಿನಿಂದ, ಒತ್ತಾಯಪೂರ್ವಕವಾಗಿ, ತಮ್ಮಲ್ಲಿರುವ ಪರ್ಣಫಲಪುಷ್ಪಗಳ ಚೀಲ ಬರಿದಾಗುವವರೆಗೂ ಮಂತ್ರಾಕ್ಷತೆಯನ್ನು ಸಲ್ಲಿಸಿ ಸಂಭ್ರಮಪಟ್ಟಂತೆ ಶುಭಾಶಯ ಹೇಳಿ ಸುಮ್ಮನಾಗಿಬಿಟ್ಟವು ಗಿಡಮರ, ಕೀಟ, ಪಕ್ಷಿ ಸಂಕುಲಗಳು.
Sunday 24 May 2020
ಸಾವಿನ ದಾರಿ..
ಸಾವಿನ ದಾರಿ
ಸ್ಮಶಾನವಾಗುತಿವೆ ಹೆದ್ದಾರಿ
ತನ್ನೊಳಗೆ ಬರುವುದೆಲ್ಲವನೂ ನುಂಗಿ ತೇಗಿ
ಅಳಿಲು, ಕುರಿ, ಕೋಳಿ, ನಾಯಿ ಬೆಕ್ಕುಗಳ
ಜೀವಗಳಿಗಂತೂ ಬೆಲೆಯೇ ಇಲ್ಲ
ಮನುಷ್ಯನ ಪ್ರಾಣಕೂ ಹಾತೊರೆಯುತಿದೆಯಲ್ಲ
ಕಪ್ಪು ರಾಕ್ಷಸನೇ ಸರಿ
ಹಿರಿದಾರಿಯೆಂದೆನಿಕೊಂಡರೂ
ವಾಹನಗಳೇ ಮೃಷ್ಟಾನ್ನ ಭೋಜನ
ಚಾಚಿದ ಕರಿನಾಲಗೆಗೆ ಹರಿಯುವ
ನೆತ್ತರು ಚಪ್ಪರಿಸುವ ಉಪ್ಪಿನಕಾಯಿ
ಹಸಿಮಾಂಸವೇ ರುಚಿಕಟ್ಟಾದ
ಭೋಗವಾಸನೆಯ ಮುದ್ದೆ
ತಿಂದು ತೇಗುವುದೊಂದೇ
ಹೊರಟ ದಾರಿಯ ನಿತ್ಯಕಾಯಕ
ಉಂಡು ಬೀಗುವುದಕೆ ಯಮಧರ್ಮನೇ ನಾಯಕ
ಯಾವ ಕಿಂದರಿಜೋಗಿ ಕರೆದೊಯ್ಯುವನೋ
ರಸ್ತೆಗಳೆಲ್ಲಾ ಜಾಮ್ ಜಾಮ್......
ಮೈದುಂಬಿಕೊಂಡ ಕಪ್ಪು ವಸ್ತ್ರದ ಮೇಲೆ
ಹರಿಯುವ ವಾಹನಗಳ ಕೋಟಿನ ಬಲೆ
ಕುಣಿಯುತ್ತ ಕಿನ್ನರಿಯನೂದುತ
ಹೊರಟ ಬಂಡಿಗಳು ಲೆಕ್ಕಕೂ ನಿಲುಕಲಾಗದ ಸೆಲೆ
ದಿಕ್ಕುತಪ್ಪಿದರೂ ಮರಳಲೇಬೇಕು
ಹೊರಳಿ ಮತ್ತೆ ಸಾವಿನ ಹಾದಿಗೆ
ಮರ ಗಿಡ ಬಳ್ಳಿ ತುಂಬಿದ ಕಾಡು
ಕಡಿದು ಕಟ್ಟಿದ ರೆಸಾರ್ಟಿನಲ್ಲಿ
ಕಂಠದವರೆಗೂ ಕುಡಿದು ಕಟ್ಟಿಕೊಂಡ ಮಹಾಪಾಪ
ಬೆನ್ನು ಬಿಡುವುದೆಲ್ಲಿ ಕೊರಗಿ
ಕರಗುತ್ತಿರುವ ಪ್ರಕೃತಿಯ ಮಹಾಶಾಪ
ಮರಗಿಡಗಳ ಮಾರಣಹೋಮ
ಮಾರ್ಗವೊಂದರ ಪ್ರತಿಷ್ಠಾಪನೆಗೆ
ಬೆಲೆಕಟ್ಟಲಾಗದ ಜನುಮಹಾನಿ
ಉಣ್ಣಲೇಬೇಕಲ್ಲವೇ ಮಾಡಿದಡುಗೆ
ಬೇವು ಬಿತ್ತಿ ಮಾವು ಕೊಂಬುವ
ದುರಾಸೆಗೆ ಬಲಿಯಿನ್ನೆಷ್ಟೋ
ಒರಗಿಹೋದ ಜೀವಗಳ ಕೊರಳಿನ ಆರ್ತನಾದಗಳೆಷ್ಟೋ
ಕುಣಿದು ಕುಪ್ಪಳಿಸುವ ಪ್ರಗತಿಯ
ದಾರಿಯೆಂದು ಬೀಗುವ ಬಾಂಧವರೇ
ಕಣ್ಣರಳಿಸಿ ತುಂಬಿಕೊಳ್ಳಿ ಸಾವಿನ ಮೆರವಣಿಗೆಯನು;
ಕರಗುತ್ತಲೇ ಕುಸಿಯುತ್ತಿರುವ ಘಟ್ಟಗಳ
ಮೈಮೇಲಿನ ಹಸಿಹಸಿಯಾದ ಗಾಯಗಳನ್ನು
ವ್ರಣಗಳಿಂದುಂಟಾದ ಕುಳಿಗಳಲ್ಲಿ ಮಡುಗಟ್ಟಿರುವ
ರಕ್ತಕಣ್ಣೀರಿನ ಹೊಳೆಯನ್ನೊಮ್ಮೆ ಹರಿಯಬಿಡಿ
ನಿಂತು ಹೋಗಲಿ ಒಮ್ಮೆ ನಿಮ್ಮ
ಮಿಡಿಯಲೊಲ್ಲದ ಪಾಪದ ಜೀವನಾಡಿ
ಹೆದ್ದಾರಿಯ ಹೆಮ್ಮಾರಿಗೆ ಜೀವಗಳ
ಕರುಳ ಹಾರಗಳಲಂಕಾರ
ಪುಟಿಯುತಿರುವ ಹೊರಬಿದ್ದ ಮೆದುಳು
ಮಿಡಿಯುತಿರುವ ಅನಾಥವಾದ ಹೃದಯದಳು
ನಡೆಸಿದಂತೆ ವಾದ್ಯಗೋಷ್ಠಿ
ಜವರಾಯನ ಆಗಮನಕೆ
ಶೋಕಗೀತೆ ಚೀರಾಟ; ಭಜನೆ ಮೇಳ ಕೂಗಾಟ
ಸಂಗೀತದ ಮಹಾವೈಭವ!!!
ದಾರಿ ತುಂಬಿಕೊಂಡ ಸುಳ್ಳಾದ ಹರಕೆ;
ಆಯುಷ್ಮಾನುಭವ! ಆಯುಷ್ಮಾನುಭವ!
Friday 8 May 2020
ಮಧುಮೀಮಾಂಸೆ
ಕೈಯ್ಯಲ್ಲಿ ಕೋವಿ ಹಿಡಿದು ಬಾಗಿಲ ಬಳಿ ಬಲಿಗಾಗಿ ಕಾಯುತ್ತಿರುವ ಕೋವಿಡ್ - 19 ಮಹಾಮಾರಿಯ ಚೆಲ್ಲಾಟದ ಮಧ್ಯೆ ಕವಿಚಿಂತಕ ನಿಸಾರ್ ಅಹಮ್ಮದ್ ರವರನ್ನು ಕಳೆದುಕೊಂಡ ಪ್ರಾಣಸಂಕಟವನ್ನು ಎದೆಯಲ್ಲಿಯೇ ಅದುಮಿ ಹಿಡಿದುಕೊಂಡು ಮನೆಯ ತಾರಸಿಯ ಮೇಲೆ ನಿಂತು ಗಾಳಿಪಟವನ್ನು ಹಾರಿಸುವ ಹುಚ್ಚು ಸಾಹಸಕ್ಕಿಳಿದಿತ್ತು ಮನಸು.ಕವಿ ನಿಸಾರರೇ ಸಂಕಲಿಸಿದ ಹಾಗೆ ಮನಸೊಂದು ಗಾಂಧಿ ಬಜಾರು. ಕಾರಣವಿದೆ. ಮುದ್ದಿನ ಕರುಳ ಕುಡಿಗಳು ಬೆನ್ನು ಬಿದ್ದು, ಕೊರೊನಾ ಹಿಮ್ಮೆಟ್ಟಿಸಿಯಾದರೂ ಗಾಳಿಪಟಗಳನ್ನು ತಂದುಕೊಡಲೇಬೇಕು ಎಂದು ಹಠವಿಡಿದು, ಕಣ್ಣೀರಿನಿಂದ ತೊಯ್ದ ಅವರ ಕೆನ್ನೆಗಳು ಒಣಗಿದ ಹಾಳೆಯಂತಾಗಿ, ಮೂರು ದಿನಗಳು ಕಳೆದುಹೋಗಿದ್ದವು. ಇಲ್ಲವೆನ್ನಲಾಗಲಿಲ್ಲ ಮುಗ್ಧ ಮುಖಗಳನ್ನು ನೋಡಿ. ಮದ್ಯದಂಗಡಿಯ ಮುಂದೆ ಸಾಮಾಜಿಕ ಅಂತರ ಕಾಪಾಡಿಕೊಂಡು ತಾಳ್ಮೆಯಿಂದ ನಿಂತು ಕಾದಂತೆ, ಗಾಳಿಪಟದ ಅಂಗಡಿಯ ಮುಂದೆಯೂ ತುದಿಗಾಲಲ್ಲಿ ನಿಂತು ಕಾದೆ. ಹಾವಿನ ಬಾಲದಂತೆ ರಸ್ತೆಯುದ್ದಕ್ಕೂ ಚಾಚಿದ ಸಾಲಿನಿಂದ ನನ್ನ ಸರದಿ ಬಂದು ಅಂಗಡಿಯವನು ಗಾಳಿಪಟವನ್ನು ಕೈಗಿತ್ತಾಗ ಮಧುಪಾತ್ರೆಯನ್ನು ಕೈಚೀಲದೊಳಗಿಟ್ಟುಕೊಂಡಷ್ಟೇ ಖುಷಿಯಾಗಿತ್ತು ನನಗೆ. ಲಂಗುಲಗಾಮಿಲ್ಲದೇ ನಶೆಯೇರಿಸುವ ಮದಿರೆಗೂ, ಸೂತ್ರವಿಡಿದು ಮೇಲೇರುವ ಗಾಳಿಪಟಕ್ಕೂ ಎತ್ತಣಿಂದೆತ್ತ ಸಂಬಂಧವಯ್ಯ? ಎಂದು ಮೂಗುಮುರಿಯದಿರಿ. ಡಾ. ಗುರುದೇವಿ ಹುಲೆಪ್ಪನವರಮಠ ರವರು ಈ ಮೂಗು ಮುರಿಯುವ ಪ್ರಹಸನವನ್ನು ಕುರಿತೇ ಒಂದು ದೀರ್ಘ ಪ್ರಬಂಧವನ್ನೇ ಬರೆದಿದ್ದಾರೆ. ತರಗತಿಯಲ್ಲೊಮ್ಮೆ ಈ ಪ್ರಬಂಧದ ಚರ್ಚೆ ಮಾಡುವಾಗ, ನಾನು ವಿದ್ಯಾರ್ಥಿಗಳನ್ನು " ಯಾರು ಯಾರು ಯಾವಾಗ ಮೂಗು ಮುರಿಯುತ್ತಾರೆ ? " ಎಂದು ಕೇಳಿದೆ. ವಿದ್ಯಾರ್ಥಿಯೊಬ್ಬ ಎದ್ದು ನಿಂತವನೇ ತಡವಾದರೆ ಎಲ್ಲಿ ತನ್ನ ಉತ್ತರ ಪಂಚ್ ನ್ನು ಕಳೆದುಕೊಂಡುಬಿಡುತ್ತದೋ ಎಂಬ ಧಾವಂತದಲ್ಲಿ " ಸರ್, ಹುಡುಗಿಯರೇ ಮೂಗುಮುರಿಯುವವರು. ಅವರಿಗೆ ಕೋಪ ಬಂದಾಗ, ಮುನಿಸುಂಟಾದಾಗ, ತಿರಸ್ಕಾರದ ಭೂತ ಹೆಗಲೇರಿದಾಗ ಖಂಡಿತವಾಗಿಯೂ ಮೂಗುಮುರಿದೇ ತಮ್ಮ ಸಿಟ್ಟನ್ನು ತೀರಿಸಿಕೊಳ್ಳುತ್ತಾರೆ.." ಎಂದುಬಿಟ್ಟ. ಗೆಳೆಯನೊಬ್ಬ ಎದ್ದು ಉತ್ತರ ಹೇಳುತ್ತಿದ್ದಾನೆಂದರೆ, ಯಾವುದಾದರೊಂದು ಪಂಚ್ ಸಿಕ್ಕೇ ಸಿಗುತ್ತದೆಂಬ ಖಾತ್ರಿಯಲ್ಲಿ ಬಕ ಪಕ್ಷಿಯಂತೆ ಕಾಯುತ್ತಾ ಕುಳಿತ ಹುಡುಗರೆಲ್ಲಾ ಗೊಳ್ ಎಂದು ನಕ್ಕರೂ ಇವನದೇನು ಮಹಾ ಉತ್ತರ ? ಎಂದು ಒಳಗೊಳಗೆ ಮೂಗುಮುರಿದದ್ದು ಮಾತ್ರ ಯಾರಿಗೂ ಕಾಣಲೇ ಇಲ್ಲ. ಹುಡುಗರೆಲ್ಲಾ ಮಾನದ ವಿಷಯವೆಂದು ತೋರ್ಪಡಿಸದೇ ಮುಸಿ ಮುಸಿ ನಗುತ್ತಿದ್ದಾಗ, ಹುಡುಗಿಯರ ಕಡೆಯಿಂದ " ಇಲ್ಲ.. ಇಲ್ಲ....ಅನ್ಯಾಯ...ಸರ್..." ಎಂದು ಯುದ್ಧದ ಪ್ರಾರಂಭಕ್ಕೆ ಮಾಡುವ ಜೋರಾದ ಕಹಳೆಯ ಸದ್ದಿನಂತೆ ಎಚ್ಚರಿಕೆಯ ಧ್ವನಿವ್ಯೂಹವೊಂದು ಹೊರಟಿತು." ಸಮಾಧಾನ..... ಸಮಾಧಾನ...." ಎಂದು ಕೈಯ್ಯೆತ್ತಿ ತಡೆದಾಗ ಕೋಪದಿಂದಲೇ ಶಾಂತವಾದ ಹುಡುಗಿಯರ ಪಟಾಲಂ ನಿಂದ ವಿದ್ಯಾರ್ಥಿನಿಯೊಬ್ಬಳು ತಕ್ಷಣ ಎದ್ದು ನಿಂತು " ಮೂಗು ಮುರಿಯುವುದರಲ್ಲಿ ಗಂಡು ಹೆಣ್ಣೆಂಬ ಭೇದ ಭಾವವಿಲ್ಲ ಸರ್ ....ಎಲ್ಲರೂ ಒಂದಿಲ್ಲೊಂದು ಕಾರಣಕ್ಕೆ ಮೂಗುಮುರಿಯುವವರೇ. ಇವರೂ ಕ್ವಚಿತ್ತಾಗಿಯಾದರೂ ಮೂಗು ಮುರಿದವರೇ....ಎಂದು ಹುಡುಗರತ್ತ ಬೆರಳು ತೋರಿಸಿ ವಾಗ್ವಾದಕ್ಕಿಳಿದು ಮೂಗುಮುರಿದಳು. ಅಷ್ಟರಲ್ಲಿ ಮಧ್ಯಪ್ರವೇಶಿಸಿದ ನಾನು " ಹೌದಮ್ಮ ...ಹೌದು..ಲೇಖಕಿಯರ ಅಭಿಪ್ರಾಯವೂ ಇದೇ ಆಗಿದೆ....ಈ ಬಗ್ಗೆ ಚರ್ಚಿಸೋಣವೇ.." ಎಂದು ಸಮಾಧಾನ ಮಾಡಲು ಪ್ರಯತ್ನಿಸಿದೆ. ಅದಾಗಲೇ ಕೊನೆಯ ಬೆಂಚಿನಿಂದ ಎದ್ದುನಿಂತಿದ್ದ ಹುಡುಗನೊಬ್ಬ " ಅಯ್ಯೋ... ನೀವು ಸ್ತ್ರೀವಾದಿಗಳೇ ಹೀಗೆ... ನೀವೇ ಕಾರಣ ಎಂದರೆ ನಾವಲ್ಲ ಎನ್ನುತ್ತೀರಿ ನೀವು ಕಾರಣರಲ್ಲ ಎಂದರೆ ಎಲ್ಲವೂ ನಮ್ಮಿಂದಲೇ ಎಂದು ಬೀಗುತ್ತೀರಿ ....." ಎಂದು ಹುಡುಗಿಯರತ್ತ ಕೈ ಬೆರಳು ತೋರಿ ಕಿಡಿ ಹೊತ್ತಿಸಿದ. ಹೋಮಕ್ಕೆ ಅಗ್ನಿಸ್ಪರ್ಶ ಮಾಡಿದ ಮೇಲೆ ಇನ್ನೇನು ಕೆಲಸ ? ಮಂತ್ರ, ಶ್ಲೋಕಗಳು ಪ್ರಾರಂಭವಾಗುವ ಮುನ್ಸೂಚನೆ ದೊರೆಯಿತೆಂದೇ ಅರ್ಥ.
ನನಗೆ ಪ್ರತಿಭಾ ನಂದಕುಮಾರ ರವರ "ಹುಡುಗಿಯರೇ ಹೀಗೆ" ಕವಿತೆ ನೆನಪಾಯಿತು.-
“ಏನೇನೋ ವಟಗುಟ್ಟಿದರೂ
ಹೇಳಬೇಕಾದ್ದನ್ನು ಹೇಳದೆ
ಏನೇನೆಲ್ಲಾ ಅನುಭವಿಸಿ ಸಾಯುತ್ತೇವೆ
ಜುಮ್ಮೆನ್ನಿಸುವ ಆಲೋಚನೆಗಳನ್ನೆಲ್ಲಾ
ಹಾಗೇ ಡಬ್ಬಿಯೊಳಗೆ ಹಿಟ್ಟು ಒತ್ತಿದಂತೆ
ಒತ್ತಿ ಒತ್ತಿ ಗಟ್ಟಿ ಮಾಡುತ್ತೇವೆ”
ಈ ಸಾಲುಗಳು ಸುಳ್ಳೆನಿಸಿದವು ನಮ್ಮ ವಿದ್ಯಾರ್ಥಿನಿಯರ ಧೈರ್ಯದ ಮುಂದೆ. ನನ್ನ ಉಲ್ಲೇಖವೆಲ್ಲಿ ಉರಿಯುತ್ತಿರುವ ಅಗ್ನಿಗೆ ತುಪ್ಪ ಸುರಿದಂತಾಗುತ್ತದೋ ಎಂದು ಹೆದರಿದೆ! ಆದರೂ ಎರಡೂ ಬದಿಯಿಂದ ಕೂಗಾಟ ರೇಗಾಟಗಳು ಜೋರಾಗಿಯೇ ನಡೆದವು ಎದುರುಬದುರಾಗಿ ಕುಳಿತು ಸ್ಪರ್ಧೆಗೆ ಬಿದ್ದು ಮಂತ್ರ ಹೇಳುವ ದೇವರ್ಷಿಗಳಂತೆ. ಇರಲಿ ಬಿಡಿ. ಪಾಪ ಮಕ್ಕಳು ಎಷ್ಟು ದಿವಸವಾಗಿತ್ತೋ ಹೀಗೆ ಜಗಳವಾಡದೇ ಎಂದು ತುಸು ಹೊತ್ತು ಸುಮ್ಮನಿದ್ದೆ . ಆಮೇಲೆ ನಾನು ಈ ಕದನ ಹೋಮವನ್ನು ತಡೆಯುವ ವರುಣನ ಪಾತ್ರವನ್ನು ಮಾಡಲೇಬೇಕಾಯಿತು. ತಣ್ಣನೆಯ ಮಾತುಗಳ ಜಡಿಮಳೆಯನ್ನು ಸುರಿಸಿದೆ. ಕದನ ವಿರಾಮ ಘೋಷಣೆಯಾಗಿ ಸ್ವಲ್ಪ ತಣ್ಣಗಾದಂತೆ ಕಂಡರೂ ಒಳಗಿನ್ನೂ ನಿಗಿನಿಗಿ ಕೆಂಡದಿಂದ ಹೊಗೆಯಾಡುತ್ತಲೇ ಇತ್ತು. ಕೊನೆಗೆ ಆಲಿಕಲ್ಲಿನ ವರ್ಷಧಾರೆಯನ್ನೇ ಪಟಪಟನೆ ಹನಿಸಬೇಕಾಗಿ ಬಂತು. ಬಿಸಿರಕ್ತದ ತಲೆಗಳ ಮೇಲೆ ಆಲಿಕಲ್ಲುಗಳನ್ನಿಟ್ಟರೆ ತಣ್ಣಗಾಗಲಾರವೇ ? ಆಗ ಎಲ್ಲವೂ ನೀರವ... ನಿಶಾಂತ.... ಸಮಾಧಿಮೌನ...ಲಕ್ಷ್ಮಣನ ಮುಂದೆ ಹಾರಾಡಿ ಅಬ್ಬರಿಸುತ್ತಿದ್ದ ಶೂರ್ಪನಖಿಯ ಮೂಗು ಮುರಿದಂತಾಗಿತ್ತು. ಇನ್ನೆಲ್ಲಿ ಮೂಗುಮುರಿಯುವುದು ? ಈಗ ಮೂಗುಮುರಿದು ಎಲ್ಲರನ್ನೂ ಎಚ್ಚರಿಸುವ ಸರದಿ ನನ್ನದಾಯಿತು. ಓಹೋ, ನನ್ನ ಬರಹ ಹಾದಿ ತಪ್ಪಿ ಸೀಮೋಲ್ಲಂಘನ ಮಾಡಿತೇ? ಕ್ಷಮಿಸಿ. ಅಬ್ಧಿಯುಮೊರ್ಮೆ ಕಾಲವಶದಿಂ ಮರ್ಯಾದೆಯಂ ದಾಂಟದೇ? ( ಕಾಲವಶದಿಂದ ಸಾಗರವೂ ಒಮ್ಮೊಮ್ಮೆ ಮೇರೆಯನ್ನು ದಾಟುತ್ತದೆಯಲ್ಲವೇ ) ಎಂದು ಮಹಾಮಹಿಮ ಜೈನಶಲಾಕಾ ಪುರುಷ ಹಾಗೂ ಪ್ರತಿವಾಸುದೇವನಾಗಿದ್ದ ರಾವಣನ ಚಂಚಲತೆಗೆ, ನಾಗಚಂದ್ರನೇ ಸಮರ್ಥನೆಯನ್ನು ಕೊಟ್ಟಿರುವಾಗ ನಮ್ಮಂತಹ ಹುಲುಮಾನವರ ಬರಹಕ್ಕಿನ್ನೆಲ್ಲಿಯ ಸೀಮೆಯಲ್ಲವೇ?. ಸೀತಾಪಹರಣದ ನಂತರವೂ ರಾವಣ ಕ್ಷಮೆ ಕೇಳಲಿಲ್ಲ. ನಾನಿಲ್ಲಿ ಕ್ಷಮಿಸಿ ಎನ್ನುತ್ತಿದ್ದೇನೆ. ಮತ್ತೆ ಗಾಳಿಪಟಕ್ಕೆ ಬರೋಣ. ಗಾಳಿಪಟಕ್ಕೂ ಮದ್ಯಕ್ಕೂ ಅದೆಂತಹ ಸಹಸಂಬಂಧವೆಂದು ಹೀಗಳೆಯದಿರಿ. ಮನಸಿಟ್ಟು ಮಧು ಹೀರಿ ಎದೆ ಹಗುರಾಗಿಸಿಕೊಂಡು ಉಯ್ಯಾಲೆಯಾಡುವ ಮಧುಪ್ರಿಯರಿಗೂ, ಮನಸು ಬಿಚ್ಚಿ ಮುಗಿಲೆತ್ತರಕೆ ಹಾರುವ ಗಾಳಿಪಟಕ್ಕೂ ಅವಿನಾಭವ ಸಂಬಂಧವೊಂದಿದೆ ಹೇಳುತ್ತೇನೆ ಕೇಳಿಬಿಡಿ. ಅಗಸದಲ್ಲಿ ಹರಿದಾಡುವ ಮೇಘಗಳಿಗೆ ಚುಂಬಿಸುವ ತೆರದಿ ಗಾಳಿಯನ್ನು ಕುಡಿದು ಓಲಾಡುತ್ತಾ ಹಾರುವ ಗಾಳಿಪಟ ಮನಬಂದಂತೆ ತೇಲಿ ಹಾರಾಡಿ ನಲಿಯುವುದನ್ನು ಕಣ್ಣಾರೆ ಕಂಡಿದ್ದೇವೆ. ಮಧುಪ್ರಿಯರೂ ಅಷ್ಟೇ ಒಡಲೊಳಗಳಿದ ಮಧುವಿನ ಮಹಿಮೆಯಿಂದ ರಸ್ತೆ, ಮನೆ, ಉದ್ಯಾನವನಗಳೆನ್ನದೇ, ತುಂಬೆಲ್ಲಾ ಹರಿದಾಡಿ ಹೊರಳಾಡಿ ನಿಂತಲ್ಲಿಯೇ ಅನಂತದಲ್ಲಿ ತೇಲುವುದಿಲ್ಲವೇ ?. ವ್ಯತ್ಯಾಸವೆಂದರೆ, ಮಧುಪ್ರಿಯರಿಗೆ ಭೌತಿಕವಾಗಿ ಕಾಣುವ ಬಾಲವಿಲ್ಲ. ಆದರೂ ಸಾಧ್ಯವಿರುವಷ್ಟು ಕಾಣದಂತೆ ಅವಕಾಶವಿರುವೆಡೆಯಲ್ಲೆಲ್ಲಾ ಬಿಚ್ಚುತ್ತಲೇ ಇರುತ್ತಾರೆ. ಗಾಳಿಪಟಕ್ಕೆ ಜೀವವಿಲ್ಲ. ಆದರೂ ಅಮಲನ್ನೇರಿಸಿಕೊಂಡು ಆಗಸಕ್ಕೆ ಚುಂಬಿಸಬೇಕೆಂದು ಜೀವವೂ ನಾಚುವಂತಹ ಉತ್ಸಾಹ ಪರವಶತೆಯಿಂದ ಹವಣಿಸುತ್ತಲೇ ಇರುತ್ತದೆ. ಅದೃಷ್ಟವಶಾತ್ ಗಾಳಿಪಟವನ್ನು ಸೂತ್ರದಿಂದಲಾದರೂ ಬಂಧಿಸಿ ನಿಗದಿತ ಏರಿಯಾದಲ್ಲಿ ಮಾತ್ರ ಹಾರಾಡುವಂತೆ ಮಾಡಬಹುದು. ಆದರೆ ಮಧುಪ್ರಿಯರ ಚಲನಶೀಲತೆ, ಜವ , ವೇಗಗಳನ್ನೆಲ್ಲಾ ದೇವನೇ ಬಲ್ಲ. ಕೊರೊನಾ ಕಾರಣದಿಂದ ಅಂಗಡಿಯ ಮುಂದೆ ಕೊಳ್ಳಲು ನಿಂತಾಗಲμÉ್ಟೀ ಮೂರಡಿಯ ಅಂತರದ ಸಾಲು. ಕೊಂಡ ನಂತರ ಅಂತರವೆಲ್ಲವೂ ಮಣ್ಣುಪಾಲು. ಇವರನ್ನು ಹೇಗೆ ನಿಯಂತ್ರಿಸಬಹುದು ಎಂಬುದಕ್ಕೆ ಉತ್ತರಗಳಿನ್ನೂ ಸಂಶೋಧನೆಯ ಹಂತದಲ್ಲಿಯೇ ಉಳಿದುಹೋಗಿವೆ. ಗಾಳಿಯನ್ನು ಹೀರುತ್ತಲೇ ನಿಧಾನವಾಗಿ ಮೇಲೇರಿದ ಗಾಳಿಪಟಕ್ಕೆ ಕೆಳಗಿರುವ ಭುವಿಯೇ ನಗಣ್ಯ. ಮಧುಪ್ರಿಯರ ಒಡಲೊಳಗೆ ಇಳಿದಂತೆ ಒಳಗಿರುವ ನಶೆಯ ಪಟವೂ ನೆತ್ತಿಯನ್ನೇರಿ ದಾಟಿ ಹೊರಡುವುದಕ್ಕೆ ಅಣಿಯಾಗುತ್ತದೆ. ಆಗ ಇವರಿಗೂ ಭೂಮಿ ಒಂದು ಕಾಲ್ಚೆಂಡು ಅμÉ್ಟೀ. ಒದೆಯಲದೆಷ್ಟು ವ್ಯರ್ಥ ಪ್ರಯತ್ನ ಮಾಡುವರೋ ಎಂಬುದನ್ನು ಕಣ್ತುಂಬಿಕೊಂಡೇ ಸುಖಪಡಬೇಕು. ಗಾಳಿಯನ್ನೊಮ್ಮೆ ಮನಸಾರೆ ಇಂಗಿಸಿಕೊಂಡ ಮೇಲೆ ಸಾಕಾಗುವವರೆಗೂ ಓಲಾಡಿ ತೇಲುವ ಕಥೆ ಗಾಳಿಪಟದ್ದಾದರೆ, ಮಧುಶಾಲೆಯೊಳಗೆ ಕುಳಿತು ಮನದನಿಯೆ ಸೋಮರಸವನ್ನೊಮ್ಮೆ ಗುಟುಕು ಗುಟುಕಾಗಿ ಹೀರಿದರೆ ಸಾಕು. ಅಬ್ಬಾ! ಸಮಯ ಹೋಗಿದ್ದೇ ಗೊತ್ತಾಗುವುದಿಲ್ಲ ಮಧುಚಂದ್ರರಿಗೆ. ಅಮಲಿನ ರಾಕೆಟ್ ಬಳಸಿ ಅಂತರಿಕ್ಷ ಯಾತ್ರಿಗಳಂತೆ ಮೇಲೇರಿದ್ದೇ ಏರಿದ್ದು. ನವಗ್ರಹಗಳನ್ನೂ ಒಮ್ಮೆ ಸುತ್ತಾಡಿ ಸುಸ್ತಾದ ಮೇಲೆ ಎಚ್ಚರವಾದಾಗಲೇ ಗೊತ್ತಾಗುವುದು ಭುವಿಗೆ ಬಂದಿಳಿದಿರುವುದು. ಗಾಳಿಪಟವೂ ಹಾಗೆಯೇ ಕುಡಿದ ಗಾಳಿಯ ನಶೆಯಿಳಿದ ಮೇಲೆಯೇ ಅಲ್ಲವೇ ಕೆಳಗಿಳಿದು ಧೊಪ್ಪನೆ ಬಾಲಮುದುರಿಕೊಂಡು ಬೀಳುವುದು.
ಈ ಮಧುಮೀಮಾಂಸೆಯನ್ನು ಕುರಿತು ಹರಿವಂಶರಾಯ್ ಬಚ್ಚನ್ ರವರ ಕವಿತೆಯನ್ನು ಕೇಳಿ-
"ಭಾವ ಮಧುವನದ
ಮದಿರೆಯನು ಕಸಿದು ತಂದಿದ್ದೇನೆ
ಯಾರೆಷ್ಟೇ ಕುಡಿದರೂ, ತುಟಿ ಕಚ್ಚಿ ಎಳೆದರೂ
ಖಾಲಿಯಾಗದು ಪ್ಯಾಲೆ ಎಂದು ನಂಬಿದ್ದೇನೆ."
ಮದಿರೆ, ಗಾಳಿಪಟ, ತಂಗಾಳಿ, ಕಾವ್ಯ, ಚಂದಿರ, ಬೆಳದಿಂಗಳು ಇವು ಜಗತ್ತಿನ ಮರೆಯಲಾಗದ ಅತ್ಯದ್ಭುತ ಸಾಂಗತ್ಯಗಳು. ಬದುಕಿನ ವ್ಯಾಖ್ಯಾನವನ್ನೇ ತಮ್ಮೊಳಗಡಗಿಸಿಕೊಂಡಿರುವ ಈ ಭುವಿಯ ವಿಸ್ಮಯಗಳಿವು. ನಾಗಚಂದ್ರನೂ ಕೂಡ ತನ್ನ "ರಾಮಚಂದ್ರಚರಿತಪುರಾಣ" ಕಾವ್ಯದಲ್ಲಿ ಹಾರಮರೀಚಿಮಂಜರಿ (ರತ್ನದ ಹಾರಗಳ ಕಿರಣ ಕಾಂತಿ), ಸುಧಾಂಶುಲೇಖೆ (ಬೆಳದಿಂಗಳ ಪುತ್ಥಳಿ), ಸುಧಾರಸಧಾರೆ( ಅಮೃತಧಾರೆ), ಕರ್ಪೂರ ಶಲಾಕೆ ಗಳಷ್ಟು ದೃಷ್ಟಿಗೆ ತಂಪನ್ನೆರೆದು ತಣಿಸಿ ಮೀರಿಸುವ ಬೇರೊಂದು ವಸ್ತು ಭುವನದಲ್ಲಿಯೇ ಇಲ್ಲವೆಂದು ಹೇಳುತ್ತಾ ಸೀತೆಯ ಸೌಂದರ್ಯವನ್ನು ಇವೆಲ್ಲವುಗಳಿಗಿಂತ ಮಿಗಿಲಾದದ್ದು ಎಂದು ಬಣ್ಣಿಸುತ್ತಾನೆ. ಸಂದರ್ಭೋಚಿತವಾಗಿ ಇವುಗಳು ಒಂದರೊಡನೊಂದು ಸೇರಿದಾಗಲಂತೂ ಕ್ಷೀರಸಾಗರದಿಂದ ಉದ್ಭವಿಸಿದ ಅಮೃತವನ್ನೂ ಮೀರಿದ ಮಹಾರಸಾಯನವೇ ಸೃಷ್ಟಿಯಾಗಿಬಿಡುತ್ತದೆ.
ಗಾಲಿಬ್ ಪ್ರೀತಿಸಿದ ಸೋಮರಸವೇ ಅವನ ಕಾವ್ಯಗಳಿಗೊಂದು ಘಮಲು ಅಮಲನ್ನು ನೀಡಿತೆಂಬುದಕ್ಕೆ ಆತ ರಚಿಸಿದ ದ್ವಿಪದಿಗಳು ಸಾಕ್ಷಿಯಾಗುತ್ತವೆ. ಮಹಾಕವಿಗಳಾದಿಯಾಗಿ ಭುವನದ ಭಾಗ್ಯವಂತರನ್ನು ಕಾಡಿದ ಮಧುಪಾತ್ರೆ ಜಗತ್ತು ಮೈಮರೆಯುವಂತೆ ಮಾಡಬಲ್ಲ ಕಾವ್ಯ ಸಾಹಿತ್ಯ ಸೃಷ್ಟಿಗೆ ತನ್ನ ಅಮಲನ್ನೆರೆದಿದೆ. ಸಾಹಿತ್ಯ, ಸಂಗೀತ, ಲಲಿತಕಲೆಗಳ ಲೋಕದಲ್ಲಿ ಮಧುವಿನದ್ದು ಕಡೆಗಣಿಸಲಾಗದ ಲೀಲಾವಿಲಾಸ. ಹಾಗೆ ಒಂದು ಸಂಜೆ ನಾನು ಹಾರಿಸಿದ ಗಾಳಿಪಟಕ್ಕೆ ಬೆರಗಾಗಿ ಚಂದಿರನೂ ಚುಂಬಿಸುತಲಿದ್ದ. ತನಗಿಷ್ಟು ನಶೆಯಿರಲಿ ಎಂದು ಅಮಲನ್ನು ಹೀರುತ್ತಲಿದ್ದ. ಚಂದ್ರಲೋಕಕ್ಕೆ ಏರಿ ಹಾರಿದ್ದ ಗಾಳಿಪಟ ಈಗ ನಶೆಯನ್ನಿಳಿಸಿಕೊಂಡು ಬಾಲವನ್ನು ಅಲ್ಲಾಡಿಸುತ್ತಲೇ ಕೆಳಗಿಳಿದಿತ್ತು. ಆಗ ಕತ್ತಲಾಗಿತ್ತು. ವಿರಹವೇದನೆಯಲ್ಲಿ ನರಳಿದ ಚಂದಿರ ಬೆಳದಿಂಗಳನ್ನೆಲ್ಲಾ ತಾನೇ ಕುಡಿದು ತೇಲಿಬಿಟ್ಟ. ಕಾಯುತ್ತಾ ಕುಳಿತಿದ್ದ ಚಕೋರಿ ಮಾತ್ರ ಬಾಯಾರಿ ಬೆಳದಿಂಗಳ ಅಮಲಿಗಾಗಿ ಕಾದು ಬಿಕ್ಕಳಿಸುತಲಿತ್ತು. ಜಗವು ಮುಕ್ಕಳಿಸುತ್ತಿತ್ತು. ಹರಿವಂಶರಾಯ್ ಬಚ್ವನ್ ರವರ ಕೊನೆಯ ಗುಟುಕು
" ನನ್ನ ಶೆರೆಯಲ್ಲಿ ಒಂದೊಂದು
ಹನಿ ಒಬ್ಬೊಬ್ಬರಿಗೂ
ನನ್ನ ಪ್ಯಾಲೆಯೊಳಗೆ
ಒಂದೊಂದು ಗುಟುಕು ಎಲ್ಲರಿಗೂ
ನನ್ನ ಸಾಕಿಯೊಳಗೆ
ಅವರವರ ಸಾಕಿಯರ ಸುಖ ಎಲ್ಲರಿಗೂ
ಯಾರಿಗೆ ಯಾವ ಹಂಬಲವೋ
ಹಾಗೇ ಕಂಡಳು ನನ್ನ ಮಧುಶಾಲಾ".
ನನಗೆ ಪ್ರತಿಭಾ ನಂದಕುಮಾರ ರವರ "ಹುಡುಗಿಯರೇ ಹೀಗೆ" ಕವಿತೆ ನೆನಪಾಯಿತು.-
“ಏನೇನೋ ವಟಗುಟ್ಟಿದರೂ
ಹೇಳಬೇಕಾದ್ದನ್ನು ಹೇಳದೆ
ಏನೇನೆಲ್ಲಾ ಅನುಭವಿಸಿ ಸಾಯುತ್ತೇವೆ
ಜುಮ್ಮೆನ್ನಿಸುವ ಆಲೋಚನೆಗಳನ್ನೆಲ್ಲಾ
ಹಾಗೇ ಡಬ್ಬಿಯೊಳಗೆ ಹಿಟ್ಟು ಒತ್ತಿದಂತೆ
ಒತ್ತಿ ಒತ್ತಿ ಗಟ್ಟಿ ಮಾಡುತ್ತೇವೆ”
ಈ ಮಧುಮೀಮಾಂಸೆಯನ್ನು ಕುರಿತು ಹರಿವಂಶರಾಯ್ ಬಚ್ಚನ್ ರವರ ಕವಿತೆಯನ್ನು ಕೇಳಿ-
"ಭಾವ ಮಧುವನದ
ಮದಿರೆಯನು ಕಸಿದು ತಂದಿದ್ದೇನೆ
ಯಾರೆಷ್ಟೇ ಕುಡಿದರೂ, ತುಟಿ ಕಚ್ಚಿ ಎಳೆದರೂ
ಖಾಲಿಯಾಗದು ಪ್ಯಾಲೆ ಎಂದು ನಂಬಿದ್ದೇನೆ."
" ನನ್ನ ಶೆರೆಯಲ್ಲಿ ಒಂದೊಂದು
ಹನಿ ಒಬ್ಬೊಬ್ಬರಿಗೂ
ನನ್ನ ಪ್ಯಾಲೆಯೊಳಗೆ
ಒಂದೊಂದು ಗುಟುಕು ಎಲ್ಲರಿಗೂ
ನನ್ನ ಸಾಕಿಯೊಳಗೆ
ಅವರವರ ಸಾಕಿಯರ ಸುಖ ಎಲ್ಲರಿಗೂ
ಯಾರಿಗೆ ಯಾವ ಹಂಬಲವೋ
ಹಾಗೇ ಕಂಡಳು ನನ್ನ ಮಧುಶಾಲಾ".
ಕೈಯ್ಯಲ್ಲಿ ಕೋವಿ ಹಿಡಿದು ಬಾಗಿಲ ಬಳಿ ಬಲಿಗಾಗಿ ಕಾಯುತ್ತಿರುವ ಕೋವಿಡ್ - 19 ಮಹಾಮಾರಿಯ ಚೆಲ್ಲಾಟದ ಮಧ್ಯೆ ಕವಿಚಿಂತಕ ನಿಸಾರ್ ಅಹಮ್ಮದ್ ರವರನ್ನು ಕಳೆದುಕೊಂಡ ಪ್ರಾಣಸಂಕಟವನ್ನು ಎದೆಯಲ್ಲಿಯೇ ಅದುಮಿ ಹಿಡಿದುಕೊಂಡು ಮನೆಯ ತಾರಸಿಯ ಮೇಲೆ ನಿಂತು ಗಾಳಿಪಟವನ್ನು ಹಾರಿಸುವ ಹುಚ್ಚು ಸಾಹಸಕ್ಕಿಳಿದಿತ್ತು ಮನಸು.ಕವಿ ನಿಸಾರರೇ ಸಂಕಲಿಸಿದ ಹಾಗೆ ಮನಸೊಂದು ಗಾಂಧಿ ಬಜಾರು. ಕಾರಣವಿದೆ. ಮುದ್ದಿನ ಕರುಳ ಕುಡಿಗಳು ಬೆನ್ನು ಬಿದ್ದು, ಕೊರೊನಾ ಹಿಮ್ಮೆಟ್ಟಿಸಿಯಾದರೂ ಗಾಳಿಪಟಗಳನ್ನು ತಂದುಕೊಡಲೇಬೇಕು ಎಂದು ಹಠವಿಡಿದು, ಕಣ್ಣೀರಿನಿಂದ ತೊಯ್ದ ಅವರ ಕೆನ್ನೆಗಳು ಒಣಗಿದ ಹಾಳೆಯಂತಾಗಿ, ಮೂರು ದಿನಗಳು ಕಳೆದುಹೋಗಿದ್ದವು. ಇಲ್ಲವೆನ್ನಲಾಗಲಿಲ್ಲ ಮುಗ್ಧ ಮುಖಗಳನ್ನು ನೋಡಿ. ಮದ್ಯದಂಗಡಿಯ ಮುಂದೆ ಸಾಮಾಜಿಕ ಅಂತರ ಕಾಪಾಡಿಕೊಂಡು ತಾಳ್ಮೆಯಿಂದ ನಿಂತು ಕಾದಂತೆ, ಗಾಳಿಪಟದ ಅಂಗಡಿಯ ಮುಂದೆಯೂ ತುದಿಗಾಲಲ್ಲಿ ನಿಂತು ಕಾದೆ. ಹಾವಿನ ಬಾಲದಂತೆ ರಸ್ತೆಯುದ್ದಕ್ಕೂ ಚಾಚಿದ ಸಾಲಿನಿಂದ ನನ್ನ ಸರದಿ ಬಂದು ಅಂಗಡಿಯವನು ಗಾಳಿಪಟವನ್ನು ಕೈಗಿತ್ತಾಗ ಮಧುಪಾತ್ರೆಯನ್ನು ಕೈಚೀಲದೊಳಗಿಟ್ಟುಕೊಂಡμÉ್ಟೀ ಖುಷಿಯಾಗಿತ್ತು ನನಗೆ. ಲಂಗುಲಗಾಮಿಲ್ಲದೇ ನಶೆಯೇರಿಸುವ ಮದ್ಯಕ್ಕೂ , ಸೂತ್ರವಿಡಿದು ಮೇಲೇರುವ ಗಾಳಿಪಟಕ್ಕೂ ಎತ್ತಣಿಂದೆತ್ತ ಸಂಬಂಧವಯ್ಯ ? ಎಂದು ಮೂಗುಮುರಿಯದಿರಿ. ಡಾ. ಗುರುದೇವಿ ಹುಲೆಪ್ಪನವರಮಠ ರವರು ಈ ಮೂಗು ಮುರಿಯುವ ಪ್ರಹಸನವನ್ನು ಕುರಿತೇ ಒಂದು ದೀರ್ಘ ಪ್ರಬಂಧವನ್ನೇ ಬರೆದಿದ್ದಾರೆ. ತರಗತಿಯಲ್ಲೊಮ್ಮೆ ಈ ಪ್ರಬಂಧದ ಚರ್ಚೆ ಮಾಡುವಾಗ, ನಾನು ವಿದ್ಯಾರ್ಥಿಗಳನ್ನು " ಯಾರು ಯಾರು ಯಾವಾಗ ಮೂಗು ಮುರಿಯುತ್ತಾರೆ ? " ಎಂದು ಕೇಳಿದೆ. ವಿದ್ಯಾರ್ಥಿಯೊಬ್ಬ ಎದ್ದು ನಿಂತವನೇ ತಡವಾದರೆ ಎಲ್ಲಿ ತನ್ನ ಉತ್ತರ ಪಂಚ್ ನ್ನು ಕಳೆದುಕೊಂಡುಬಿಡುತ್ತದೋ ಎಂಬ ಧಾವಂತದಲ್ಲಿ " ಸರ್, ಹುಡುಗಿಯರೇ ಮೂಗುಮುರಿಯುವವರು. ಅವರಿಗೆ ಕೋಪ ಬಂದಾಗ, ಮುನಿಸುಂಟಾದಾಗ, ತಿರಸ್ಕಾರದ ಭೂತ ಹೆಗಲೇರಿದಾಗ ಖಂಡಿತವಾಗಿಯೂ ಮೂಗುಮುರಿದೇ ತಮ್ಮ ಸಿಟ್ಟನ್ನು ತೀರಿಸಿಕೊಳ್ಳುತ್ತಾರೆ.." ಎಂದುಬಿಟ್ಟ. ಗೆಳೆಯನೊಬ್ಬ ಎದ್ದು ಉತ್ತರ ಹೇಳುತ್ತಿದ್ದಾನೆಂದರೆ, ಯಾವುದಾದರೊಂದು ಪಂಚ್ ಸಿಕ್ಕೇ ಸಿಗುತ್ತದೆಂಬ ಖಾತ್ರಿಯಲ್ಲಿ ಬಕ ಪಕ್ಷಿಯಂತೆ ಕಾಯುತ್ತಾ ಕುಳಿತ ಹುಡುಗರೆಲ್ಲಾ ಗೊಳ್ ಎಂದು ನಕ್ಕರೂ ಇವನದೇನು ಮಹಾ ಉತ್ತರ ? ಎಂದು ಒಳಗೊಳಗೆ ಮೂಗುಮುರಿದದ್ದು ಮಾತ್ರ ಯಾರಿಗೂ ಕಾಣಲೇ ಇಲ್ಲ. ಹುಡುಗರೆಲ್ಲಾ ಮಾನದ ವಿಷಯವೆಂದು ತೋರ್ಪಡಿಸದೇ ಮುಸಿ ಮುಸಿ ನಗುತ್ತಿದ್ದಾಗ, ಹುಡುಗಿಯರ ಕಡೆಯಿಂದ " ಇಲ್ಲ.. ಇಲ್ಲ....ಅನ್ಯಾಯ...ಸರ್..." ಎಂದು ಯುದ್ಧದ ಪ್ರಾರಂಭಕ್ಕೆ ಮಾಡುವ ಜೋರಾದ ಕಹಳೆಯ ಸದ್ದಿನಂತೆ ಎಚ್ಚರಿಕೆಯ ಧ್ವನಿವ್ಯೂಹವೊಂದು ಹೊರಟಿತು." ಸಮಾಧಾನ..... ಸಮಾಧಾನ...." ಎಂದು ಕೈಯ್ಯೆತ್ತಿ ತಡೆದಾಗ ಕೋಪದಿಂದಲೇ ಶಾಂತವಾದ ಹುಡುಗಿಯರ ಪಟಾಲಂ ನಿಂದ ವಿದ್ಯಾರ್ಥಿನಿಯೊಬ್ಬಳು ತಕ್ಷಣ ಎದ್ದು ನಿಂತು " ಮೂಗು ಮುರಿಯುವುದರಲ್ಲಿ ಗಂಡು ಹೆಣ್ಣೆಂಬ ಭೇದ ಭಾವವಿಲ್ಲ ಸರ್ ....ಎಲ್ಲರೂ ಒಂದಿಲ್ಲೊಂದು ಕಾರಣಕ್ಕೆ ಮೂಗುಮುರಿಯುವವರೇ. ಇವರೂ ಕ್ವಚಿತ್ತಾಗಿಯಾದರೂ ಮೂಗು ಮುರಿದವರೇ....ಎಂದು ಹುಡುಗರತ್ತ ಬೆರಳು ತೋರಿಸಿ ವಾಗ್ವಾದಕ್ಕಿಳಿದು ಮೂಗುಮುರಿದಳು. ಅಷ್ಟರಲ್ಲಿ ಮಧ್ಯಪ್ರವೇಶಿಸಿದ ನಾನು " ಹೌದಮ್ಮ ...ಹೌದು..ಲೇಖಕಿಯರ ಅಭಿಪ್ರಾಯವೂ ಇದೇ ಆಗಿದೆ....ಈ ಬಗ್ಗೆ ಚರ್ಚಿಸೋಣವೇ.." ಎಂದು ಸಮಾಧಾನ ಮಾಡಲು ಪ್ರಯತ್ನಿಸಿದೆ. ಅದಾಗಲೇ ಕೊನೆಯ ಬೆಂಚಿನಿಂದ ಎದ್ದುನಿಂತಿದ್ದ ಹುಡುಗನೊಬ್ಬ " ಅಯ್ಯೋ... ನೀವು ಸ್ತ್ರೀವಾದಿಗಳೇ ಹೀಗೆ... ನೀವೇ ಕಾರಣ ಎಂದರೆ ನಾವಲ್ಲ ಎನ್ನುತ್ತೀರಿ ನೀವು ಕಾರಣರಲ್ಲ ಎಂದರೆ ಎಲ್ಲವೂ ನಮ್ಮಿಂದಲೇ ಎಂದು ಬೀಗುತ್ತೀರಿ ....." ಎಂದು ಹುಡುಗಿಯರತ್ತ ಕೈ ಬೆರಳು ತೋರಿ ಕಿಡಿ ಹೊತ್ತಿಸಿದ. ಹೋಮಕ್ಕೆ ಅಗ್ನಿಸ್ಪರ್ಶ ಮಾಡಿದ ಮೇಲೆ ಇನ್ನೇನು ಕೆಲಸ ? ಮಂತ್ರ, ಶ್ಲೋಕಗಳು ಪ್ರಾರಂಭವಾಗುವ ಮುನ್ಸೂಚನೆ ದೊರೆಯಿತೆಂದೇ ಅರ್ಥ. ನನಗೆ ಪ್ರತಿಭಾ ನಂದಕುಮಾರ ರವರ "ಹುಡುಗಿಯರೇ ಹೀಗೆ" ಕವಿತೆ ನೆನಪಾಯಿತು.-
“ಏನೇನೋ ವಟಗುಟ್ಟಿದರೂ
ಹೇಳಬೇಕಾದ್ದನ್ನು ಹೇಳದೆ
ಏನೇನೆಲ್ಲಾ ಅನುಭವಿಸಿ ಸಾಯುತ್ತೇವೆ
ಜುಮ್ಮೆನ್ನಿಸುವ ಆಲೋಚನೆಗಳನ್ನೆಲ್ಲಾ
ಹಾಗೇ ಡಬ್ಬಿಯೊಳಗೆ ಹಿಟ್ಟು ಒತ್ತಿದಂತೆ
ಒತ್ತಿ ಒತ್ತಿ ಗಟ್ಟಿ ಮಾಡುತ್ತೇವೆ”
ಈ ಸಾಲುಗಳು ಸುಳ್ಳೆನಿಸಿದವು ನಮ್ಮ ವಿದ್ಯಾರ್ಥಿನಿಯರ ಧೈರ್ಯದ ಮುಂದೆ. ನನ್ನ ಉಲ್ಲೇಖವೆಲ್ಲಿ ಉರಿಯುತ್ತಿರುವ ಅಗ್ನಿಗೆ ತುಪ್ಪ ಸುರಿದಂತಾಗುತ್ತದೋ ಎಂದು ಹೆದರಿದೆ! ಆದರೂ ಎರಡೂ ಬದಿಯಿಂದ ಕೂಗಾಟ ರೇಗಾಟಗಳು ಜೋರಾಗಿಯೇ ನಡೆದವು ಎದುರುಬದುರಾಗಿ ಕುಳಿತು ಸ್ಪರ್ಧೆಗೆ ಬಿದ್ದು ಮಂತ್ರ ಹೇಳುವ ದೇವರ್ಷಿಗಳಂತೆ. ಇರಲಿ ಬಿಡಿ. ಪಾಪ ಮಕ್ಕಳು ಎಷ್ಟು ದಿವಸವಾಗಿತ್ತೋ ಹೀಗೆ ಜಗಳವಾಡದೇ ಎಂದು ತುಸು ಹೊತ್ತು ಸುಮ್ಮನಿದ್ದೆ . ಆಮೇಲೆ ನಾನು ಈ ಕದನ ಹೋಮವನ್ನು ತಡೆಯುವ ವರುಣನ ಪಾತ್ರವನ್ನು ಮಾಡಲೇಬೇಕಾಯಿತು. ತಣ್ಣನೆಯ ಮಾತುಗಳ ಜಡಿಮಳೆಯನ್ನು ಸುರಿಸಿದೆ. ಕದನ ವಿರಾಮ ಘೋಷಣೆಯಾಗಿ ಸ್ವಲ್ಪ ತಣ್ಣಗಾದಂತೆ ಕಂಡರೂ ಒಳಗಿನ್ನೂ ನಿಗಿನಿಗಿ ಕೆಂಡದಿಂದ ಹೊಗೆಯಾಡುತ್ತಲೇ ಇತ್ತು. ಕೊನೆಗೆ ಆಲಿಕಲ್ಲಿನ ವರ್ಷಧಾರೆಯನ್ನೇ ಪಟಪಟನೆ ಹನಿಸಬೇಕಾಗಿ ಬಂತು. ಬಿಸಿರಕ್ತದ ತಲೆಗಳ ಮೇಲೆ ಆಲಿಕಲ್ಲುಗಳನ್ನಿಟ್ಟರೆ ತಣ್ಣಗಾಗಲಾರವೇ ? ಆಗ ಎಲ್ಲವೂ ನೀರವ... ನಿಶಾಂತ.... ಸಮಾಧಿಮೌನ...ಲಕ್ಷ್ಮಣನ ಮುಂದೆ ಹಾರಾಡಿ ಅಬ್ಬರಿಸುತ್ತಿದ್ದ ಶೂರ್ಪನಖಿಯ ಮೂಗು ಮುರಿದಂತಾಗಿತ್ತು. ಇನ್ನೆಲ್ಲಿ ಮೂಗುಮುರಿಯುವುದು ? ಈಗ ಮೂಗುಮುರಿದು ಎಲ್ಲರನ್ನೂ ಎಚ್ಚರಿಸುವ ಸರದಿ ನನ್ನದಾಯಿತು. ಓಹೋ, ನನ್ನ ಬರಹ ಹಾದಿ ತಪ್ಪಿ ಸೀಮೋಲ್ಲಂಘನ ಮಾಡಿತೇ? ಕ್ಷಮಿಸಿ. ಅಬ್ಧಿಯುಮೊರ್ಮೆ ಕಾಲವಶದಿಂ ಮರ್ಯಾದೆಯಂ ದಾಂಟದೇ? ( ಕಾಲವಶದಿಂದ ಸಾಗರವೂ ಒಮ್ಮೊಮ್ಮೆ ಮೇರೆಯನ್ನು ದಾಟುತ್ತದೆಯಲ್ಲವೇ ) ಎಂದು ಮಹಾಮಹಿಮ ಜೈನಶಲಾಕಾ ಪುರುಷ ಹಾಗೂ ಪ್ರತಿವಾಸುದೇವನಾಗಿದ್ದ ರಾವಣನ ಚಂಚಲತೆಗೆ, ನಾಗಚಂದ್ರನೇ ಸಮರ್ಥನೆಯನ್ನು ಕೊಟ್ಟಿರುವಾಗ ನಮ್ಮಂತಹ ಹುಲುಮಾನವರ ಬರಹಕ್ಕಿನ್ನೆಲ್ಲಿಯ ಸೀಮೆಯಲ್ಲವೇ?. ಸೀತಾಪಹರಣದ ನಂತರವೂ ರಾವಣ ಕ್ಷಮೆ ಕೇಳಲಿಲ್ಲ. ನಾನಿಲ್ಲಿ ಕ್ಷಮಿಸಿ ಎನ್ನುತ್ತಿದ್ದೇನೆ. ಮತ್ತೆ ಗಾಳಿಪಟಕ್ಕೆ ಬರೋಣ. ಗಾಳಿಪಟಕ್ಕೂ ಮದ್ಯಕ್ಕೂ ಅದೆಂತಹ ಸಹಸಂಬಂಧವೆಂದು ಹೀಗಳೆಯದಿರಿ. ಮನಸಿಟ್ಟು ಮಧು ಹೀರಿ ಎದೆ ಹಗುರಾಗಿಸಿಕೊಂಡು ಉಯ್ಯಾಲೆಯಾಡುವ ಮಧುಪ್ರಿಯರಿಗೂ, ಮನಸು ಬಿಚ್ಚಿ ಮುಗಿಲೆತ್ತರಕೆ ಹಾರುವ ಗಾಳಿಪಟಕ್ಕೂ ಅವಿನಾಭವ ಸಂಬಂಧವೊಂದಿದೆ ಹೇಳುತ್ತೇನೆ ಕೇಳಿಬಿಡಿ. ಅಗಸದಲ್ಲಿ ಹರಿದಾಡುವ ಮೇಘಗಳಿಗೆ ಚುಂಬಿಸುವ ತೆರದಿ ಗಾಳಿಯನ್ನು ಕುಡಿದು ಓಲಾಡುತ್ತಾ ಹಾರುವ ಗಾಳಿಪಟ ಮನಬಂದಂತೆ ತೇಲಿ ಹಾರಾಡಿ ನಲಿಯುವುದನ್ನು ಕಣ್ಣಾರೆ ಕಂಡಿದ್ದೇವೆ. ಮಧುಪ್ರಿಯರೂ ಅμÉ್ಟೀ. ಒಡಲೊಳಗಳಿದ ಮಧುವಿನ ಮಹಿಮೆಯಿಂದ ರಸ್ತೆ, ಮನೆ, ಉದ್ಯಾನವನಗಳೆನ್ನದೇ, ತುಂಬೆಲ್ಲಾ ಹರಿದಾಡಿ ಹೊರಳಾಡಿ ನಿಂತಲ್ಲಿಯೇ ಅನಂತದಲ್ಲಿ ತೇಲುವುದಿಲ್ಲವೇ ?. ವ್ಯತ್ಯಾಸವೆಂದರೆ, ಮಧುಪ್ರಿಯರಿಗೆ ಭೌತಿಕವಾಗಿ ಕಾಣುವ ಬಾಲವಿಲ್ಲ. ಆದರೂ ಸಾಧ್ಯವಿರುವಷ್ಟು ಕಾಣದಂತೆ ಅವಕಾಶವಿರುವೆಡೆಯಲ್ಲೆಲ್ಲಾ ಬಿಚ್ಚುತ್ತಲೇ ಇರುತ್ತಾರೆ. ಗಾಳಿಪಟಕ್ಕೆ ಜೀವವಿಲ್ಲ. ಆದರೂ ಅಮಲನ್ನೇರಿಸಿಕೊಂಡು ಆಗಸಕ್ಕೆ ಚುಂಬಿಸಬೇಕೆಂದು ಜೀವವೂ ನಾಚುವಂತಹ ಉತ್ಸಾಹ ಪರವಶತೆಯಿಂದ ಹವಣಿಸುತ್ತಲೇ ಇರುತ್ತದೆ. ಅದೃಷ್ಟವಶಾತ್ ಗಾಳಿಪಟವನ್ನು ಸೂತ್ರದಿಂದಲಾದರೂ ಬಂಧಿಸಿ ನಿಗದಿತ ಏರಿಯಾದಲ್ಲಿ ಮಾತ್ರ ಹಾರಾಡುವಂತೆ ಮಾಡಬಹುದು. ಆದರೆ ಮಧುಪ್ರಿಯರ ಚಲನಶೀಲತೆ, ಜವ , ವೇಗಗಳನ್ನೆಲ್ಲಾ ದೇವನೇ ಬಲ್ಲ. ಕೊರೊನಾ ಕಾರಣದಿಂದ ಅಂಗಡಿಯ ಮುಂದೆ ಕೊಳ್ಳಲು ನಿಂತಾಗಲμÉ್ಟೀ ಮೂರಡಿಯ ಅಂತರದ ಸಾಲು. ಕೊಂಡ ನಂತರ ಅಂತರವೆಲ್ಲವೂ ಮಣ್ಣುಪಾಲು. ಇವರನ್ನು ಹೇಗೆ ನಿಯಂತ್ರಿಸಬಹುದು ಎಂಬುದಕ್ಕೆ ಉತ್ತರಗಳಿನ್ನೂ ಸಂಶೋಧನೆಯ ಹಂತದಲ್ಲಿಯೇ ಉಳಿದುಹೋಗಿವೆ. ಗಾಳಿಯನ್ನು ಹೀರುತ್ತಲೇ ನಿಧಾನವಾಗಿ ಮೇಲೇರಿದ ಗಾಳಿಪಟಕ್ಕೆ ಕೆಳಗಿರುವ ಭುವಿಯೇ ನಗಣ್ಯ. ಮಧುಪ್ರಿಯರ ಒಡಲೊಳಗೆ ಇಳಿದಂತೆ ಒಳಗಿರುವ ನಶೆಯ ಪಟವೂ ನೆತ್ತಿಯನ್ನೇರಿ ದಾಟಿ ಹೊರಡುವುದಕ್ಕೆ ಅಣಿಯಾಗುತ್ತದೆ. ಆಗ ಇವರಿಗೂ ಭೂಮಿ ಒಂದು ಕಾಲ್ಚೆಂಡು ಅμÉ್ಟೀ. ಒದೆಯಲದೆಷ್ಟು ವ್ಯರ್ಥ ಪ್ರಯತ್ನ ಮಾಡುವರೋ ಎಂಬುದನ್ನು ಕಣ್ತುಂಬಿಕೊಂಡೇ ಸುಖಪಡಬೇಕು. ಗಾಳಿಯನ್ನೊಮ್ಮೆ ಮನಸಾರೆ ಇಂಗಿಸಿಕೊಂಡ ಮೇಲೆ ಸಾಕಾಗುವವರೆಗೂ ಓಲಾಡಿ ತೇಲುವ ಕಥೆ ಗಾಳಿಪಟದ್ದಾದರೆ, ಮಧುಶಾಲೆಯೊಳಗೆ ಕುಳಿತು ಮನದನಿಯೆ ಸೋಮರಸವನ್ನೊಮ್ಮೆ ಗುಟುಕು ಗುಟುಕಾಗಿ ಹೀರಿದರೆ ಸಾಕು. ಅಬ್ಬಾ! ಸಮಯ ಹೋಗಿದ್ದೇ ಗೊತ್ತಾಗುವುದಿಲ್ಲ ಮಧುಚಂದ್ರರಿಗೆ. ಅಮಲಿನ ರಾಕೆಟ್ ಬಳಸಿ ಅಂತರಿಕ್ಷ ಯಾತ್ರಿಗಳಂತೆ ಮೇಲೇರಿದ್ದೇ ಏರಿದ್ದು. ನವಗ್ರಹಗಳನ್ನೂ ಒಮ್ಮೆ ಸುತ್ತಾಡಿ ಸುಸ್ತಾದ ಮೇಲೆ ಎಚ್ಚರವಾದಾಗಲೇ ಗೊತ್ತಾಗುವುದು ಭುವಿಗೆ ಬಂದಿಳಿದಿರುವುದು. ಗಾಳಿಪಟವೂ ಹಾಗೆಯೇ ಕುಡಿದ ಗಾಳಿಯ ನಶೆಯಿಳಿದ ಮೇಲೆಯೇ ಅಲ್ಲವೇ ಕೆಳಗಿಳಿದು ಧೊಪ್ಪನೆ ಬಾಲಮುದುರಿಕೊಂಡು ಬೀಳುವುದು. ಈ ಮಧುಮೀಮಾಂಸೆಯನ್ನು ಕುರಿತು ಹರಿವಂಶರಾಯ್ ಬಚ್ಚನ್ ರವರ ಕವಿತೆಯನ್ನು ಕೇಳಿ-
"ಭಾವ ಮಧುವನದ
ಮದಿರೆಯನು ಕಸಿದು ತಂದಿದ್ದೇನೆ
ಯಾರೆμÉ್ಟೀ ಕುಡಿದರೂ, ತುಟಿ ಕಚ್ಚಿ ಎಳೆದರೂ
ಖಾಲಿಯಾಗದು ಪ್ಯಾಲೆ ಎಂದು ನಂಬಿದ್ದೇನೆ."
ಮದಿರೆ, ಗಾಳಿಪಟ, ತಂಗಾಳಿ, ಕಾವ್ಯ, ಚಂದಿರ, ಬೆಳದಿಂಗಳು ಇವು ಜಗತ್ತಿನ ಮರೆಯಲಾಗದ ಅತ್ಯದ್ಭುತ ಸಾಂಗತ್ಯಗಳು. ಬದುಕಿನ ವ್ಯಾಖ್ಯಾನವನ್ನೇ ತಮ್ಮೊಳಗಡಗಿಸಿಕೊಂಡಿರುವ ಈ ಭುವಿಯ ವಿಸ್ಮಯಗಳಿವು. ನಾಗಚಂದ್ರನೂ ಕೂಡ ತನ್ನ "ರಾಮಚಂದ್ರಚರಿತಪುರಾಣ" ಕಾವ್ಯದಲ್ಲಿ ಹಾರಮರೀಚಿಮಂಜರಿ (ರತ್ನದ ಹಾರಗಳ ಕಿರಣ ಕಾಂತಿ), ಸುಧಾಂಶುಲೇಖೆ (ಬೆಳದಿಂಗಳ ಪುತ್ಥಳಿ), ಸುಧಾರಸಧಾರೆ( ಅಮೃತಧಾರೆ), ಕರ್ಪೂರ ಶಲಾಕೆ ಗಳಷ್ಟು ದೃಷ್ಟಿಗೆ ತಂಪನ್ನೆರೆದು ತಣಿಸಿ ಮೀರಿಸುವ ಬೇರೊಂದು ವಸ್ತು ಭುವನದಲ್ಲಿಯೇ ಇಲ್ಲವೆಂದು ಹೇಳುತ್ತಾ ಸೀತೆಯ ಸೌಂದರ್ಯವನ್ನು ಇವೆಲ್ಲವುಗಳಿಗಿಂತ ಮಿಗಿಲಾದದ್ದು ಎಂದು ಬಣ್ಣಿಸುತ್ತಾನೆ. ಸಂದರ್ಭೋಚಿತವಾಗಿ ಇವುಗಳು ಒಂದರೊಡನೊಂದು ಸೇರಿದಾಗಲಂತೂ ಕ್ಷೀರಸಾಗರದಿಂದ ಉದ್ಭವಿಸಿದ ಅಮೃತವನ್ನೂ ಮೀರಿದ ಮಹಾರಸಾಯನವೇ ಸೃಷ್ಟಿಯಾಗಿಬಿಡುತ್ತದೆ.
ಗಾಲಿಬ್ ಪ್ರೀತಿಸಿದ ಸೋಮರಸವೇ ಅವನ ಕಾವ್ಯಗಳಿಗೊಂದು ಘಮಲು ಅಮಲನ್ನು ನೀಡಿತೆಂಬುದಕ್ಕೆ ಆತ ರಚಿಸಿದ ದ್ವಿಪದಿಗಳು ಸಾಕ್ಷಿಯಾಗುತ್ತವೆ. ಮಹಾಕವಿಗಳಾದಿಯಾಗಿ ಭುವನದ ಭಾಗ್ಯವಂತರನ್ನು ಕಾಡಿದ ಮಧುಪಾತ್ರೆ ಜಗತ್ತು ಮೈಮರೆಯುವಂತೆ ಮಾಡಬಲ್ಲ ಕಾವ್ಯ ಸಾಹಿತ್ಯ ಸೃಷ್ಟಿಗೆ ತನ್ನ ಅಮಲನ್ನೆರೆದಿದೆ. ಸಾಹಿತ್ಯ, ಸಂಗೀತ, ಲಲಿತಕಲೆಗಳ ಲೋಕದಲ್ಲಿ ಮಧುವಿನದ್ದು ಕಡೆಗಣಿಸಲಾಗದ ಲೀಲಾವಿಲಾಸ. ಹಾಗೆ ಒಂದು ಸಂಜೆ ನಾನು ಹಾರಿಸಿದ ಗಾಳಿಪಟಕ್ಕೆ ಬೆರಗಾಗಿ ಚಂದಿರನೂ ಚುಂಬಿಸುತಲಿದ್ದ. ತನಗಿಷ್ಟು ನಶೆಯಿರಲಿ ಎಂದು ಅಮಲನ್ನು ಹೀರುತ್ತಲಿದ್ದ. ಚಂದ್ರಲೋಕಕ್ಕೆ ಏರಿ ಹಾರಿದ್ದ ಗಾಳಿಪಟ ಈಗ ನಶೆಯನ್ನಿಳಿಸಿಕೊಂಡು ಬಾಲವನ್ನು ಅಲ್ಲಾಡಿಸುತ್ತಲೇ ಕೆಳಗಿಳಿದಿತ್ತು. ಆಗ ಕತ್ತಲಾಗಿತ್ತು. ವಿರಹವೇದನೆಯಲ್ಲಿ ನರಳಿದ ಚಂದಿರ ಬೆಳದಿಂಗಳನ್ನೆಲ್ಲಾ ತಾನೇ ಕುಡಿದು ತೇಲಿಬಿಟ್ಟ. ಕಾಯುತ್ತಾ ಕುಳಿತಿದ್ದ ಚಕೋರಿ ಮಾತ್ರ ಬಾಯಾರಿ ಬೆಳದಿಂಗಳ ಅಮಲಿಗಾಗಿ ಕಾದು ಬಿಕ್ಕಳಿಸುತಲಿತ್ತು. ಜಗವು ಮುಕ್ಕಳಿಸುತ್ತಿತ್ತು. ಹರಿವಂಶರಾಯ್ ಬಚ್ವನ್ ರವರ
ಕೊನೆಯ ಗುಟುಕು
" ನನ್ನ ಶೆರೆಯಲ್ಲಿ ಒಂದೊಂದು
ಹನಿ ಒಬ್ಬೊಬ್ಬರಿಗೂ
ನನ್ನ ಪ್ಯಾಲೆಯೊಳಗೆ
ಒಂದೊಂದು ಗುಟುಕು ಎಲ್ಲರಿಗೂ
ನನ್ನ ಸಾಕಿಯೊಳಗೆ
ಅವರವರ ಸಾಕಿಯರ ಸುಖ ಎಲ್ಲರಿಗೂ
ಯಾರಿಗೆ ಯಾವ ಹಂಬಲವೋ
ಹಾಗೇ ಕಂಡಳು ನನ್ನ ಮಧುಶಾಲಾ.
Subscribe to:
Posts (Atom)
ಉಳುಕು ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು ...
-
ಕುಲದ ನೆಲೆಯನರಸುತ್ತಾ.... ನಮ್ಮ ನಾಡಿನ ಖ್ಯಾತ ಸಾಹಿತಿಗಳು, ಚಿಂತಕರಾದ ಡಾ.ಗುರುಲಿಂಗ ಕಾಪಸೆ ಯವರು " ಪಂಪ ರನ್ನ ರಂತಹ ವ...
-
ಅರ್ಧಾಂಗಿ ಪುರಾಣ! ನಾನು ಎಂದಿನಂತೆ ನಿತ್ಯಕರ್ಮಗಳ ಮುಗಿಸಿ ಕರ್ತವ್ಯಕ್ಕಾಗಿ ಸಿದ್ಧವಾಗುತ್ತಿರುವಾಗ ಕೇಳಿದಳು ಸಾಕಿಯೊಮ್ಮೆ - " ಈ ಹಳೆಯ ಅಂಗಿಯನ್ನ ಹಾಕ್ಕೋ...
-
ಉಳುಕು ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು ಕತ್ತಲೆಯ ಧಿಮಾಕನ್ನೊರೆಯಲು ಸಾಕು ಉಬ್ಬಿದ ಅಸ್ಥಿ ಮಜ್ಜೆಗಳು ಜಾ...