Total Pageviews
Thursday 6 September 2018
ವಾಗ್ಬಾಣಗಳ ಚತುರ ಕವಿ
ಕಾವ್ಯಶಿಲ್ಪಿ ಶ್ರೀ ವಾಜಪೇಯಿ
ರಾಜಕಾರಣಕೆ ಪಾಠ ಹೇಳಿದ
ಸದನದ ಕಲಿ ಭಾರತ ಭೀಷ್ಮ
ಅಸ್ತಂಗತ ಮುತ್ಸದ್ದಿಯ ನೇಸರ
ಯುಗನಾಯಕನೀ ಭಾರತ ಭೂಶಿರ
ಮೊಳಗಿಸಿದೆ ಪಾಂಚಜನ್ಯವ
ಬೆಳಗಿದೆ ದೇಶ ನಿನ್ನಯ ಕಾಂತಿಗೆ
ಹೆಮ್ಮೆಯ ಪುತ್ರ ಭಾರತ ಮಾತೆಗೆ
ಬೆರಗಾಗಿದೆ ಜಗವು ನಿನ್ನಾರ್ಭಟಕೆ
ವಿಸ್ಮಯಗೊಂಡಿದೆ ನಿನ್ನಯ ಶಾಂತಿಗೆ
ಶಕ್ತಿ ಯುಕ್ತಿಗಳ ಸಮನ್ವಯದಾತ
ಚತುರಮತಿಯ ಆಡಳಿತದೂತ
ರಾಜತಂತ್ರದ ವಿಕಾಸಪುರುಷ
ಪ್ರಧಾನಿಯ ಪದಕೆ ನೀ ಅನ್ವರ್ಥ
ಸಂಸತ್ ಪಟುವಿಗೆ ನೀನೇ ಪಾರ್ಥ
ಅನ್ಯರು ಹೊಗಳುವ ಅಜಾತಶತ್ರು
ಕಂಡ ಕನಸಿನ ವಿಕಾಸದ ಕರ್ತೃ
ಜನಸೇವೆಯೇ ಜನಾರ್ಧನ ಸೇವೆ
ತೋರಿದೆ ನೀನು ಓ ಕವಿಹೃದಯಿ
ಭಾರತಮಾತೆಯ ಕೀರ್ತಿ ಪತಾಕೆ
ವಿಶ್ವಕೆ ತೋರಿದ ಮಹಾಮಾತೃಕೆ
Subscribe to:
Posts (Atom)
ಉಳುಕು ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು ...
-
ಕುಲದ ನೆಲೆಯನರಸುತ್ತಾ.... ನಮ್ಮ ನಾಡಿನ ಖ್ಯಾತ ಸಾಹಿತಿಗಳು, ಚಿಂತಕರಾದ ಡಾ.ಗುರುಲಿಂಗ ಕಾಪಸೆ ಯವರು " ಪಂಪ ರನ್ನ ರಂತಹ ವ...
-
ಅರ್ಧಾಂಗಿ ಪುರಾಣ! ನಾನು ಎಂದಿನಂತೆ ನಿತ್ಯಕರ್ಮಗಳ ಮುಗಿಸಿ ಕರ್ತವ್ಯಕ್ಕಾಗಿ ಸಿದ್ಧವಾಗುತ್ತಿರುವಾಗ ಕೇಳಿದಳು ಸಾಕಿಯೊಮ್ಮೆ - " ಈ ಹಳೆಯ ಅಂಗಿಯನ್ನ ಹಾಕ್ಕೋ...
-
ಉಳುಕು ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು ಕತ್ತಲೆಯ ಧಿಮಾಕನ್ನೊರೆಯಲು ಸಾಕು ಉಬ್ಬಿದ ಅಸ್ಥಿ ಮಜ್ಜೆಗಳು ಜಾ...