Total Pageviews

Friday 29 December 2017

ರಸಋಷಿ

   ರಸಋಷಿ

  ಕನ್ನಡಾಂಬೆಯ ವರ ತನುಜಾತ

ವಾಙ್ಮಯ ಲೋಕದ ವಾಣಿಯ ಸಂತ

ಸರ್ವಜನಾಂಗದ ಶಾಂತಿಯ ದೂತ

‘ಶ್ರೀ ರಾಮಾಯಣ ದರ್ಶನಂ’ ದಾತ

‘ಕೊಳಲ’ನೂದಿದ ‘ನವಿಲು’ ವಿಹಾರಿ

‘ಕಲಾಸುಂದರಿ’ಯ ‘ಪ್ರೇಮ ಕಾಶ್ಮೀರಿ’

ಯುಗದರ್ಶನದ ಮಹಾರಸಋಷಿ

ಪರಂಪರೆ ಶಕ್ತಿಯ ವಿಶ್ವಮಹರ್ಷಿ

‘ಪಾಂಚಜನ್ಯ’ ವ ಮೊಳಗಿಸಿದ

ಶತಮಾನದ ದಿಗ್ದರ್ಶನ ಕವಿ

‘ಅಗ್ನಿಹಂಸ’ವ ಮುದ್ದಿಸಿ ಸವರಿ

‘ಕುಕಿಲ’ ಕಾಜಾಣ ರತ್ನಗಳ

‘ಪಕ್ಷಿಕಾಶಿ’ಯಲಿ ಮಿಂದ ರವಿ

‘ಜೇನಾಗುವ’ ಎಂದ ಸವ್ಯಸಾಚಿ

‘ಮಂತ್ರಾಕ್ಷತೆ’ಯ ನವೋದಯ ಸೂಚಿ

‘ಷೋಡಶಿ’ಯ ‘ಅನಿಕೇತನ’ಗೊಳಿಸಿ

‘ಜಲಗಾರ’ನ ‘ಮಹಾರಾತ್ರಿ’ಯ ಸೃಷ್ಟಿಸಿ

ಮಲೆನಾಡಿನ ಮಡಿಲಲಿ ಮೈಮನ ಕುಣಿಸಿ

ಹಿಗ್ಗುತ ಹಾಡಿದ ಜಗದ ಕವಿ

ನಿನಗಿದೊ ನಮನ ಓ ರಾಷ್ಟ್ರಕವಿ

ಮತ್ತೆ ಹುಟ್ಟಿ ಬಾ ಯುಗಪ್ರವರ್ತಕ

ವೀಣಾಪಾಣಿಯ ಭವ್ಯದರ್ಶಕ

‘ಶೂದ್ರ ತಪಸ್ವಿ’  ‘ಬಲಿದಾನ’ ದ ರೂಪಕ

‘ಚಂದ್ರಹಾಸ’ ‘ಬಿರುಗಾಳಿ’ಯ ಜನಕ

ಶಿವಚೇತನದ ಅಮೃತಧಾರೆ

ವಿದ್ವತ್ ಜ್ಯೋತಿಯ ರಾಯಭಾರಿ




Saturday 23 December 2017

ಕೃತಿ – ಹೂವ ತಂದವರು
ಲೇಖಕರು – ಡಾ|| ರಾಜಶೇಖರ ಮಠಪತಿ(ರಾಗಂ)
ವಿಮರ್ಶೆ – ಚಂದ್ರಶೇಖರ ಹೆಗಡೆ
         
        
ಸಾಹಿತ್ಯದ ದ್ರವ್ಯದಲ್ಲಿ ಬಯಸಿ ಇಳಿದು ಬುದ್ದಿ, ಮನಸ್ಸು, ಆತ್ಮಗಳನ್ನು ಸಂವೇದನೆಗೊಳಪಡಿಸಿ ಕೊನೆಗೆ ರಸಾನುಭವದ ಈಜು ಕಲಿತು ಆಳಕ್ಕಿಳಿದು ಅದರ ಸಾಂಗತ್ಯದಲ್ಲಿ ತೇಲಾಡುವುದಿದೆಯಲ್ಲ ಅದು ಅನಿಕೇತನವಾದದ್ದು. ಅದರ ಪರಿಧಿಯೊಳಗೆ ಸಹೃದಯದಿಂದ ಪ್ರವೇಶಿಸಿ ಯಾರೊಬ್ಬರನ್ನೂ ಅದು ಆವರಿಸದೇ ಬಿಡುವುದಿಲ್ಲ. ಅಂತಹ ಅನುಭೂತಿಯ ಆವರಣಕ್ಕೆ ನಮ್ಮನ್ನು ಕರೆದೊಯ್ಯುವ ಕೃತಿ “ಹೂವ ತಂದವರು”. ಸಾಹಿತ್ಯದೊಂದಿಗಿನ ಪಯಣದಲ್ಲಿ ಮುಖಾಮುಖಿಯಾಗುವ ಕವಿ, ಕೃತಿ ಹಾಗೂ ಸಂಸ್ಕøತಿ ವಿಚಾರಗಳನ್ನು ಕುರಿತ ಮಂಥನ, ಜೀವನ್ಮುಖಿ ಪರಂಪರೆಯಲ್ಲಿ ಗುರುತಿಸಬಹುದಾದ ಪ್ರೇರಣೆಯ ಮೈಲುಗಲ್ಲುಗಳನ್ನು ಶೋಧಿಸಿ, ಅನುಸಂಧಾನಿಸಿ ಮುನ್ನಡೆಸುತ್ತದೆ. 2009ರಲ್ಲಿ “ಶಬ್ಧಸೂತಕದಿಂದ” ಎಂಬ ಕೃತಿಯಿಂದ ಪ್ರಾರಂಭವಾದ ಲೇಖಕರ ಈ ವೈಚಾರಿಕ ಸಾಹಿತ್ಯ ಸರಣಿ 2016ರಲ್ಲಿ ಪ್ರಕಟವಾದ ಈ ಕೃತಿಯವರೆಗೆ ಮುಂದುವರೆದಿದೆ.

       ಲೇಖಕರು ನವನವೋನ್ಮೇಷಶಾಲಿಯಾದ ಯುವ ಪೀಳಿಗೆಗೆ ಜಿಜ್ಞಾಸೆಯ ಹೊಸ ಹೊಳಹುಗಳನ್ನು ಆಯಾಮಗಳನ್ನು ಪರಮಾಪ್ತವಾದ ಭಾಷೆಯಲ್ಲಿ ಬಳಿಸಾರಿ ಆಪ್ಯಾಯಮಾನವಾಗಿ ಹೇಳುವ ನಿರೂಪಣಾ ಶೈಲಿ ಇಷ್ಟವಾಗುತ್ತದೆ ಎನ್ನುವುದಕ್ಕೆ

“ಈ ಪ್ರಪಂಚವೊಂದು ಭ್ರಮೆ
ಧೂಳಿನ ಮೋಹ
ಬಂದುದಕೆ ಬೇಡ
ಹೋದುದನು ಮತ್ತೆಂದೂ ಕರೆಯಬೇಡ”

       ಅವರು ಉಲ್ಲೇಖಿಸುವ “ಅಬು ರುಡಾಕಿ”ಯ ಈ ಸಾಲುಗಳು ನಿದರ್ಶನವಾಗಿವೆ.
         
  “ಮಹಾತ್ಮಾ ಗಾಂಧಿ”ಯವರು ಇತಿಹಾಸದ ಕಾಲಗರ್ಭzಲ್ಲಿÀ ಬಿಟ್ಟುಹೋದ ಸಾವು, ಪ್ರಾರ್ಥನೆ, ದೇವರು, ಭಕ್ತಿ, ಸಂಸ್ಕøತಿ, ಆಚರಣೆ, ಶಿಸ್ತು ಕುರಿತು ಬಿಡಿ ಮಾತಿನ ಮುತ್ತುಗಳನ್ನು ಹಾರದಂತೆ ಪೋಣಿಸುವ ಅಕ್ಷರ ಕೌಶಲ್ಯದಿಂದ ಪ್ರವೇಶ ಪಡೆಯುವ ಈ ಕೃತಿ ಜೀವನದ ಪ್ರೀತಿಯ ಪಯಣದಲ್ಲಿ ಸಾಹಿತ್ಯ ಕಾರಣವಾಗಿ ಮನದಲ್ಲಿ ನೆನಹು ತುಂಬಿ ಪರಿಮಳದ ಪೊಸ ಮಲ್ಲಿಗೆಯ “ಹೂವ ತಂದವರ”, ಚೆದುರಿದ ವ್ಯಕ್ತಿತ್ವಗಳಾದ ಚಿತ್ರದುರ್ಗದ ಸಿನೆಮಾ ರಾಮಸ್ವಾಮಿ,  ಕಾದಂಬರಿಕಾರ ದು ನಿಂ ಬೆಳಗಲಿ, ಕಲಾತ್ಮಕ ಸಾಹಿತಿ ಚಂದ್ರಕಾಂತ ಕುಸನೂರ ಸಂಶೋಧಕರಾದ ಲಿಂಗದೇವರು ಹಳೇಮನೆ, ಕೆ.ಎಸ್.ಭಾಗವಾನ, ಚನ್ನಣ್ಣ ವಾಲೀಕಾರ, ಪರ್ವತವಾಣಿ, ಶ್ರೀ ಕಂಠೇಶಗೌಡರು, ಶಂಕರ ಕಟಗಿ, ಡಾ ರಾಜಕುಮಾರ ಹೀಗೆ ಸಾಹಿತ್ಯಕಲೆಯ ನೀಲಾಗಸದಲ್ಲಿ ತಮ್ಮದೇ ವ್ಯಕ್ತಿ ವಿಶಿಷ್ಟತೆ ಬೆಳಕಿನಿಂದ ಮಿನುಗುವ ನಕ್ಷತ್ರಗಳನ್ನು, ಅವುಗಳೊಂದಿಗಿನ ತಮ್ಮ ಸಾಂಗತ್ಯವನ್ನು ಆಪ್ತವಾಗಿ ಕಲಾತ್ಮಕವಾಗಿ ಕಟ್ಟಿಕೊಡುತ್ತಾರೆ.

          “ಪ್ರಚಾರ ಪ್ರಿಯ ಸಾಹಿತ್ಯಕ್ಕಿಂತಲೂ ವಿಚಾರ ಪ್ರಧಾನ ಸಾಹಿತ್ಯ ಮೇಲು” ಎಂಬ ಲೇಖಕರ ವಿಮರ್ಶೆಯ ಪರಿಭಾಷೆ “ಒತ್ತಡದ ಸಾಹಿತ್ಯ ರಚನೆಗಿಂತ ಬತ್ತದ, ಮನುಷ್ಯನ ಮೌಲ್ಯ ಹೆಚ್ಚಿಸುವ ಸಾಹಿತ್ಯ ರಚನೆ ಹೃದಯಂಗಮವಾಗುತ್ತದೆ.” ಎಂಬ ವಿಲಿಯಂ ಫಾಕ್ನರ್‍ನ ಈ ನುಡಿಗಳನ್ನು ಅನುಮೋದಿಸುತ್ತದೆ.
ಪ್ರತಿ ಕವಿತೆಯೂ ಉಲ್ಲಂಘನೆಯೇ ಎಂದು ಹೇಳುತ್ತಾ



“ಅಂದು ನನ್ನ ಶವಯಾತ್ರೆ
ನಿನ್ನ ಮನೆ ಮುಂದೆ ಸಾಗುವಾಗ
ಎದ್ದು ಕುಳಿತು ಕೈ ಎತ್ತಿ
ಸಲಾಂ ಸಲ್ಲಿಸಬೇಕೆಂದುಕೊಂಡೆ
ದೇಹ ಸಹಕರಿಸಲಿಲ್ಲ”

         ಎಂಬ ಹನಿಗವಿ ಬೇಲೂರು ನವಾಬರ ಹನಿಗವದ ಮೂಲಕ ಸಾವಿನಾಚೆಯ ಭಾವಲೋಕಕ್ಕೆ ಹೆಜ್ಜೆ ಹಾಕಿಸುತ್ತಾರೆ.

        
        
ಕಾವ್ಯ ಹೇಗೆ ಪರಮಾರ್ಥವಾಗಬಲ್ಲದು ಎಂಬುದಕ್ಕೆ ಬಾದಾಮಿಯ ಕೆಮ್ಮಣ್ಣಿನ ನೆಲದ ಸೊಗಡಿನ ಕವಯಿತ್ರಿ “ಕಸ್ತೂರಿ ಬಾಯರಿಯವರ ಅಲ್ಲಮನಡೆಗೆ” ಕಾವ್ಯಸಂಕಲನ ಕುರಿತ ಸೊಗಸಾದ ಬರಹ ಸಾಕ್ಷಿಯಾಗಿ ನಿಲ್ಲುತ್ತದೆ.

“ಹೆಣ್ಣು ನಾನು ಭೂಮಿ ತೂಕದವಳು
ರಿಂಗಣಿಸುತ್ತಿವೆ ರೋಮ ರೋಮಗಳು”

        ಸಾಲುಗಳು ಸ್ತ್ರೀ ಸಂವೇದನೆಯ ತವಕ ತಲ್ಲಣಗಳನ್ನು ಬೆರಗು ಹುಟ್ಟಿಸುವಂತೆ ಕವಿತೆಯಾಗಿಸುತ್ತವೆ. ಈ ಬದುಕುನ್ನು ಒಂದು ಮೆರವಣಿಗೆಯಾಗಿಸುತ್ತವೆ. ಜೀವ ಬದುಕಿನಲ್ಲಿ ಬೆಂದೆಷ್ಟೂ ಚಿನ್ನವಾಗುತ್ತದೆ ಹೊನಲಾಗುತ್ತದೆ ಮುಂದಿನವರಿಗೆ ದೀವಿಗೆಯಾಗುತ್ತದೆ ಎನ್ನುವುದಕ್ಕೆ ‘ದು ನಿಂ ಬೆಳಗಲಿ ಎಂಬ ಬೆಳಕು, ಸಜ್ಜನ ಸಾವಿಲ್ಲದ ಹೆಸರು’ ಬರಹಗಳಲ್ಲಿ ವ್ಯಕ್ತವಾಗುವ ಶಿಸ್ತು, ಪ್ರಮಾಣಿಕತೆ, ಸರಳತೆ, ನೆಲಕ್ಕೆ ಅಂಟಿಕೊಂಡು ಬದುಕುವ ಕಾದಂಬರಿ ಪಾತ್ರಗಳ ಜೀವನ ಪ್ರೀತಿ ವಿಚಿಕಿತ್ಸಕವಾಗಿ ಮೂಡಿಬಂದಿವೆ.

      
ಇತಿಹಾಸಕ್ಕೆ ಎಲ್ಲವನ್ನೂ ದಾಖಲಿಸಿಕೊಳ್ಳುವ ಶಕ್ತಿ ಇದೆಯೇ ಎಂಬ ಸಂಶಯ ಎಂ ಎಲ್ ಶ್ರೀಕಂಠೇಶಗೌಡರು ಹೊಸಗನ್ನಡದ ಅರುಣೋದಯಲ್ಲಿ ಮುನ್ನುಡಿಕಾರರಾಗಿ ಅವರಿಗೆ ಸಲ್ಲಬೇಕಾದ ಗೌರವ ಸಲ್ಲದೇ ಹೋದಾಗ ಮೂಡುತ್ತದೆ ಎಂಬುದನ್ನು ಲೇಖಕರು ದಾಖಲಿಸುತ್ತಾರೆ. ಪ್ರವಾಸ ಮಾನವನನ್ನು ವಿಸ್ತರಿಸಬಲ್ಲ ಮತ್ತೊಂದು ಹೆದ್ದಾರಿ. ಆ ಹಾದಿಯಲ್ಲಿ ನಡೆದಾಗ ದಕ್ಕುವ ಅನುಭವಗಳು, ನೆನಪುಗಳು ಅವಿಸ್ಮರಣೀಯ. ಬರಹಗಾರನ ಹೃದಯದಲ್ಲಂತೂ ತನ್ನದೇ ನವ್ಯಲೋಕವನ್ನು ತೆರೆದು ‘ನಡೆದ ದಾರಿಯಲ್ಲೊಂದಿಷ್ಟು ನೆನಪುಗಳನ್ನು’ ಕಂಡುಂಡ ಅನುಭವಗಳನ್ನು ದಾಖಲಿಸುತ್ತಾ ವಿಸ್ಮಯವನ್ನು ಉಂಟುಮಾಡುತ್ತದೆ.




Sunday 17 December 2017

ಗಲ್ಲು ಗಡಿಪಾರು

      
7ನೇ ನೆತ್ತರದ ಕತೆಕಾಫರ್ ಕೊನೆಯ ಪತ್ರಗಳು
ಲೇಖಕರುರಾಜಶೇಖರ ಮಠಪತಿ(ರಾಗಂ)
ವಿಮರ್ಶೆಚಂದ್ರಶೇಖರ ಹೆಗಡೆ
                    ಖ್ವಾಜಾ ಅಹ್ಮದ್ ಅಬ್ಬಾಸ್ ರವರು, ದೇಶ ತೊರೆದು ಹೋದ ಸಾಹಿತಿ ಸಾಹಿರ್ ಲುಧಿ ಯಾನ್ವಿಗೆ ಬರೆದ ಪತ್ರದ ಒಕ್ಕಣೆಯೊಂದಿಗೆ ಪ್ರಾರಂಭವಾಗುವ ಕಥೆ ಅಬ್ಬಾಸ್ ರವರ ಮಾನವ ಪ್ರೇಮ, ದೇಶ ಪ್ರೇಮ, ಪತ್ರಿಕಾ ಪ್ರೇಮದ ಪೂಜಾರಿತನವನ್ನು ನೇರ  ಹಾಗೂ ಸರಳ ನಿರೂಪಣೆಯೊಂದಿಗೆ ಸಮರ್ಥವಾಗಿ ಕಟ್ಟಿಕೊಡುತ್ತದೆ. ಲೌಕಿಕದಲ್ಲಿದ್ದು ಅಲೌಖಿಕವನ್ನುನುಭವಿಸುವ ಫಕೀರನಾಗಿ ಸಂತನಾಗಿ ಸಾಮಾನ್ಯರನ್ನು ಪ್ರೀತಿಸುವ, ಆರ್ಥಿಕವಾಗಿ ಬಡವ, ಸರಳತೆಯಲ್ಲಿ ಶ್ರೀಮಂತನಾದ ಬದುಕಿನ ಪವಿತ್ರ ಪ್ರೇಮಿಯೊಬ್ಬನ ಜೀವನವನ್ನು ವಿಶಿಷ್ಟ ಶೈಲಿಯಲ್ಲಿ ನಮಗೆ ಪರಿಚಯಿಸುತ್ತದೆ.


        ಅಮೀರ್ ಖುಸ್ರೋರಂಥವರು ಆಧ್ಯಾತ್ಮಿಕ ಜಗತ್ತಿನ ಅನುಭಾವಿಯಾಗಿ, ಸೂಫಿಯಾಗಿ ಭಾರತ ನೆಲದ ಸಂಸ್ಕತಿಯನ್ನು ಸ್ವರ್ಗ ಸದೃಶವಾಗಿ ಪರಿಭಾವಿಸುವುದನ್ನು ನಾವು ಕಂಡಿದ್ದೇವೆಅಂಥದ್ದೇ ಭಾರತ ನೆಲದಲ್ಲಿ ದೇಶಭಕ್ತ ಭಗತ್ ಸಿಂಗ್ನನ್ನು ಮಿತ್ರನಾಗಿ ಪಡೆದು, ಪತ್ರಿಕೋದ್ಯಮದ ಪ್ರೀತಿಗೆ ಸೋತು, ಕುಂತಲ್ಲಿ ನಿಂತಲ್ಲಿ ಸಾಹಿತ್ಯ ರಚಿಸುವ ಅಬ್ಬಾಸರ ಸಾಹಸಗಳು ನಮಗೆ ಹೇಗೆ ದೀವಿಗೆಗಳಾಗಿವೆ ಎಂಬುದರ ಆತ್ಮ ಚಿಂತನೆಗೆ ನಮ್ಮನ್ನು ತೊಡಗಿಸುವ ರೀತಿಯ ನಿರೂಪಣೆ ಮನಸೆಳೆಯುತ್ತದೆ.

          1903 ಜೂನ್ 7ರಂದು ಪಾಣಿಪತ್ನಲ್ಲಿ ಜನಿಸಿದ ಅಬ್ಬಾಸರ ತಂದೆ, ಸರಳ ಜೀವನ ಉದಾತ್ತ ಪ್ರಗತಿಪರ ಚಿಂತನೆಯ ಪ್ರತಿಪಾದಕರು. ವಿದ್ಯಾರ್ಥಿಯಾಗಿದ್ದಾಗ ಅಲೀಘಡ ವಿಶ್ವವಿದ್ಯಾಲಯದ ಕಟ್ಟಡದ ಮೇಲೆ ತ್ರಿವರ್ಣ ಧ್ವಜ ಹಾರಿಸಿದಾಗಲೇ ಅಬ್ಬಾಸರಲ್ಲಿ ರಕ್ತಗತವಾಗಿ ಬಂದಿದ್ದ ದೇಶಭಕ್ತಿ, “ಸನ್ ಆಫ್ ಇಂಡಿಯಾಎಂಬ ದಾಖಲೆಯ ಕೃತಿ ರಚನೆಗೆ ಹೇಗೆ ಪ್ರೇರಣೆಯಾಯಿತು ಎಂಬುದನ್ನು ವಾಸ್ತವವಾದದ ನೆಲೆಯಲ್ಲಿ ನಮಗೆ ದಕ್ಕಿಸಿಕೊಡುತ್ತಾರೆ ಲೇಖಕರು.


        ಪತ್ರಕರ್ತ, ಚಿತ್ರನಿರ್ದೇಶಕ, ನಿರ್ಮಾಪಕ, ರಾಜಕೀಯ ಸಲಹೆಗಾರ ಹೀಗೆ ಬಹುಮುಖ ಪ್ರತಿಭಾಶಾಲಿಯಾಗಿ ಅವರು ನೆಲೆ ನಿಂತದ್ದಕ್ಕಿಂತ ಅಲೆದಾಡಿದ್ದೇ ಹೆಚ್ಚು.ಲೇಖಕರ ಮಾತಿನಲ್ಲಿಯೇ ಹೇಳುವುದಾದರೆಅಬ್ಬಾಸರು ಹಲವಾರು ರಂಗಗಳಲ್ಲಿ ತಾವೇ ಮೊದಲ ಪುಟವಾಗಿ ಆರಂಭಿಸಿದರು ಮತ್ತು ತಾವೇ ಕೊನೆಯ ಪುಟವಾಗಿ ಹೋದರು”. ಅಬ್ಬಾಸರ ಮರಣೋತ್ತರದ ಪತ್ರದಲ್ಲಿರುವಪತ್ರಿಕಾ ಜೀವನದ 47ವರ್ಷದ ನನ್ನ ಪ್ರೀತಿಯಕೊನೆಯ ಪುಟ ಎಲ್ಲ ಲೇಖನಗಳೂ ನನ್ನ ಸಮಾಧಿಯೊಳಗಿನ ಹಾಸಿಗೆಯಾಗಿರಲಿ, ನನ್ನ ದೇಹದ ಮೇಲೆ ಹೆಣದ ಬಟ್ಟೆಯಾಗಿರಲಿಎಂಬ ಸಾಲುಗಳು ಅವರ ಚೈತನ್ಯದ ಚೆಲುಮೆಯಾಗಿರುವ ಸಾಹಿತ್ಯ ಪ್ರೀತಿಯನ್ನು ತೀವ್ರವಾಗಿ ಧ್ವನಿಸುತ್ತದೆ. ಕಥೆಯ ಮೂಲಕ ಲೇಖಕರು, ನಮ್ಮಲ್ಲಿ ಮಲಗಿರುವ ಪ್ರಜ್ಞೆಯನ್ನು ಎಚ್ಚರಗೊಳಿಸಿ ನಮ್ಮನ್ನು ಜಾಗೃತರನ್ನಾಗಿಸುತ್ತಾರೆ. ಮರೆತುಹೋದ ವ್ಯಕ್ತಿಗಳ ಮರೆಯಲಾಗದ ಸಂಗತಿಗಳನ್ನು ನಮಗೆಲ್ಲ ಮಾರ್ಗದರ್ಶನ ರೂಪದಲ್ಲಿ ನಮ್ಮ ಕಣ್ಣೆದುರಿಗೆ  ತರುತ್ತಾರೆ. ಆತ್ಮ ವಿಮರ್ಶೆಗೊಳಪಡಿಸುತ್ತಾರೆ.



                   

ಬತ್ತಲಗೆ ಬೆರಗಾಗಬಾರದು




ಓಶೋ:  ಬದುಕು ಬರಹ ಮತ್ತು ಬೆಳಕಿನ ಕಥೆ
ಲೇಖಕರು: ಡಾ|| ರಾಜಶೇಖರ ಮಠಪತಿ (ರಾಗಂ)
ವಿಮರ್ಶೆ : ಚಂದ್ರಶೇಖರ ಹೆಗಡೆ
      ಬತ್ತಲೆ ಬಗ್ಗೆ ಬರೆಯುವುದು, ಓದುವುದು, ಮಾತನಾಡುವುದೇ ಒಂದು ಅಪರಾಧ ಎಂಬಂತಿರುವಾಗ ಸಮಾಜದಲ್ಲಿ ಸಂಚಲನ ಮೂಡಿಸಿದಬತ್ತಲೆಎಂಬ ಬೆರಗಿನ ಕುರಿತ ಕೃತಿ ವೈಚಾರಿಕ ಜೀವನಕ್ಕೆ ರೂಪಕದಂತಿದೆ.
       ಅಕ್ಕಮಹಾದೇವಿ, ತೀರ್ಥಕಂರರು, ವೇಮನರಂಥ ಬತ್ತಲೆಯ ಮಹಾಕಿರಣಗಳ ದರ್ಶನಕ್ಕೊಳಪಟ್ಟ ನಮ್ಮ ನಾಡು, ‘ಬತ್ತಲೆ'ಗೂ ಆಧ್ಯಾತ್ಮಿಕತೆಯ ಪರಂಪರೆಯನ್ನು ನೀಡಿದೆ. ‘ಬತ್ತಲೆ ನಾಡಲ್ಲಿ  ಬೆರಗಲ್ಲ ಅದೊಂದು ಒಳಹೊರಗಣ ಹಂಗು ಹರಿದವರ ಮಹಾಪ್ರಭೆ. ಶೂನ್ಯವಾಗಿದ್ದುಕೊಂಡು ಅನಂತವನ್ನು ಸಾಧಿಸುವ, ಬಯಲಾಗಿದ್ದು ಅನಂತಶಕ್ತಿ ಎಂದು ಬತ್ತಲನ್ನು ಬೆಳಕಾಗಿಸಿದ್ದಾರೆ ಲೇಖಕರು. (ರಾಗಂ)
 “ಭಿಕ್ಷೆಯುಂಡು, ಬಯಲ ಬೈರಾಗಿಗಳಾಗಿ ಅಂಡಲೆಯುವ  ಸಾಧಕರು ಲೌಕಿಕ ಭಾರತದಲ್ಲಿ ನೀವು ನಿರುಪಯುಕ್ತ ಎಂದುಕೊಂಡ ಮರುಕ್ಷಣ ದೇಶದ ಆತ್ಮ ಸತ್ತಿತು ಎಂಬುದನ್ನು ಮರೆಯಬೇಡಿ.”
ಎಂಬ ರಜನೀಶರ ಎಚ್ಚರಿಕೆ, ನಾವು ಅಲಕಿóಸಿರುವ ಪರಂಪರೆಯನ್ನು ಗೌರವಿಸಬೇಕಾದ ಎಚ್ಚರವನ್ನು ನಮ್ಮಲ್ಲಿ ಜಾಗೃತಗೊಳಿಸುವಂತೆ ಮಾಡುತ್ತದೆ.

      ಎಲ್ಲಿ ವಿಚಾರವಿದೆಯೋ ಅಲ್ಲಿವಿದ್ರೋಹ ಬೀಜವಿರುವುದು. ವಿಚಾರ ಮೂಲತಃ ವಿದ್ರೋಹಿಎಂಬ ರಜನೀಶರ ಹೊಸ ಮೌಲ್ಯಗಳ ಹಸಿವನ್ನು ಅನುಭವಕ್ಕೆ ತರುವ ಪುಸ್ತಕದ ಆರಂಭಿಕ ಸಾಲುಗಳು ನಮ್ಮನ್ನುಬತ್ತಲಜಗತ್ತಿಗೆ ಕೈ ಬೀಸಿ ಕರೆಯುತ್ತವೆ. ಮುಂದುವರಿದು

             ಯಾರಲ್ಲಿ ವಿದ್ರೋಹದ ಬೆಂಕಿಯಲ್ಲವೋ ಅವರು ಗೊತ್ತಿದ್ದೋ
              ಗೊತ್ತಿಲ್ಲದೆಯೋ, ಯಾವುದೇ ಸ್ವಾರ್ಥದ _ _ _ _ _ _ _
              _ _ _ _ _ _ _ _ _ ದಲ್ಲಾಳಿಯಾಗಿದೆಯೇ ತೀರುವರು

ಎಂಬ ಓಶೋ ಸಾಲುಗಳಲ್ಲಿ ಲೇಖಕರು ಬಳಸುವವಿದ್ರೋಹಎಂಬ ಪದ ಅರ್ಥಹೀನ ಮೌಢ್ಯದ ಸಾಂಪ್ರದಾಯಿಕ ಮೌಲ್ಯಗಳ ವಿರುದ್ದದ ಕ್ರಾಂತಿಗೆ ಪರಿಭಾಷೆಯಾಗಿ ಮೂಡಿಬಂದಿರುವುದು ಇಲ್ಲಿ ವಿಶಿಷ್ಟವಾಗಿದೆ. ಅಂಥ ವಿದ್ರೋಹದ ಬೆಂಕಿ 12 ನೇ ಶತಮಾನದಲ್ಲಿ ಶರಣರ ಎದೆಗಳಲ್ಲಿ ಉರಿದಿದ್ದರಿಂದಲೇಕಲ್ಯಾಣ ಕ್ರಾಂತಿ’ Éಯಾಗಿಸಮಾನತೆ’, ‘ಸರ್ವೋದಯಗಳ ಹೊಸದರ ಸೃಷ್ಠಿಗೆ ಮುನ್ನುಡಿಯಾಯಿತು ಎಂಬುದನ್ನಲ್ಲಿ ನಿದರ್ಶಿಸಬಹುದು.

                ‘‘ನೀನು ಗೋಚರ, ಅಂತೆಯೇ ಬೈಚಿಟ್ಟುಕೊಂಡ ರಹಸ್ಯ
              ನೀನು ಕುತೂಹಲ, ಅಂತೆಯೇ ಬಿಡಿಸಲಾಗದ ಕಗ್ಗಂಟು
       ನೀನು ಕಂದೀಲಿನಗೊಳಗಿನ ಮೊಂಬತ್ತಿ, ನಿನ್ನ ಪ್ರಭೆ ನಿನಗೆ ಮಾತ್ರ
         ನೀನೆಂದರೆ ಬಟ್ಟೆಗಳ ರಾಶಿ, ಹೀಗಾಗಿಯೇ ನೀನೊಂದು    
                                ಮಹಾನಗ್ನತೆ’’                
                                                  
          ಹೀಗೆಮಹಾನಗ್ನತೆ ಆರಾಧಕನಾದ, ಭಾರತದ ಬತ್ತಲೆಯ ಆಧ್ಯಾತ್ಮ ಪರಂಪರೆಯ ಮತ್ತೊಂದು ಕಿರಣವಾದ, ಪರ್ಷಿಯನ್ ಭಾಷೆಯಲ್ಲಿ 300 ರಷ್ಟು ರಬಾಯಿಗಳನ್ನು ಬರೆದೂ, ನಾಗರಿಕ ಸಮಾಜದಿಂದ ತಿರಸ್ಕರಿಸಲ್ಪಟ್ಟ ಬತ್ತಲೆ ಸಂತಮೊಹಮ್ಮದ್ ಸರ್ಮದ್ ಖಶಾನಿ’ 17ನೇ ಶತಮಾನದಲ್ಲಿ ಬದುಕಿ, ಗಮ್ಮತ್ತೇ ಗೊತ್ತಿರದ ಶೆರೆ ತುಂಬಿದ ಬಾಟಲಿಯಂತೆ, ಅರಿವಿಲ್ಲದ ಮನುಷ್ಯನಿಗೆ ನಗ್ನತೆ, ಪ್ರೇಮ, ಸಾವುಗಳು ಅವನ ಅರಿವಾಗಿರಬೇಕು ಎಂದು ಬಯಸಿದ. ಹೀಗೆ ಸರ್ಮದ್ರಂತಹ ಕಿರಣಗಳ ನಿದರ್ಶನದ ಮೂಲಕ ಲೇಖಕರು ನಮ್ಮ ದೇಶದ ಬತ್ತಲೆಯ ಆಧ್ಯಾತ್ಮಿಕ ಪರಂಪರೆಯನ್ನು ನಮಗೆ ಕಟ್ಟಿಕೊಡುತ್ತಾರೆ. ಪರಂಪರೆಯ ಮುಂದುವರಿದ ಬೆಳಕಿನ ಕಿರಣವಾಗಿ ಓಶೋರನ್ನು ದಿಗ್ದರ್ಶಿಸಬೇಕೆನ್ನುತ್ತಾರೆ.

                    ‘‘ದಿಗಂಬರವೇ ದಿವ್ಯಾಂಬರ ಎನಗೆ
                     ದಿಗಂಬರಿಯಾದಡೇನಯ್ಯ ಮನ ಬತ್ತಲೆಯಿರಬೇಕು.”

        ಅಕ್ಕನ ಸಾಲುಗಳನ್ನು ಉಲ್ಲೇಖಿಸುತ್ತಾ ಹೇಗೆ ಕಾಮ, ಬತ್ತಲೆಗಳು ನಮ್ಮ ಸಂಸ್ಕøತಿಯಲ್ಲಿ  ಆಧ್ಯಾತ್ಮ ಸಾಧನೆಯ  ತತ್ವವಾಗಿವೆ  ಎಂಬುದನ್ನು ವಿವೇಚಿಸುತ್ತಾರೆ.
               
             ರವಿ ಕಾಣದ್ದನ್ನು ಕವಿ ಕಂಡ, ಕವಿಯೂ ಕಾಣದ್ದನ್ನು ರಜನೀಶರು ಕಂಡರು. ‘ಕಾಮವನ್ನುಸಮಾಧಿ ಮಟ್ಟಕ್ಕೇರಿಸಿದಾಗಲೇ ಇವರು ಜಗತ್ತಿನ ಬಹುಪಾಲು ಜನರಿಗೆ ಬೇಡವಾದರು, ನಮ್ಮೊಳಗೇ ಇರುವಕಾಮವನ್ನುಮೈಲಿಗೆ’ ಯೆಂದು ದೂರವಿಟ್ಟು ಅಕ್ಕನ ತೆರಣಿಯ ಹುಳುವಿನಂತೆ ನಮ್ಮದೇ ಒಳಸುಳಿಗಳಲ್ಲಿ ಬದುಕುತ್ತಿರುವ ನಮಗೆ ರಜನೀಶರಮುಕ್ತತೆಹೇಗೆ ತಾನೇ ಅರಗಿಸಿಕೊಳ್ಳಲಾದೀತು? ಎಂಬ ಸ್ವಾತ್ಮ ವಿಮರ್ಶೆಗೆ ಲೇಖಕರು ನಮ್ಮನ್ನು ತೊಡಗಿಸುತ್ತಾರೆ.

        ದಾರ್ಶನಿಕರೇ ಹಾಗೆ, ಬದುಕಿದ್ದಾಗ ಹಿತ್ತಿಲ ಮದ್ದುಗಳು. ಸಾಕ್ರಟೆಸ್ ಸತ್ಯವನ್ನು ಹೇಳಿಯೂ ದಾರುಣವಾಗಿ ಕೊಲ್ಲಲ್ಪಟ್ಟ. ಹಾಗೆಂದು ಅವರಾರು ಸಾಯಲಿಲ್ಲ. ಬದಲಾಗಿ ನಮ್ಮೊಳಗೆ ಇಂತಹ ಕೃತಿಗಳ ಮೂಲಕ ಅರ್ಥಪೂರ್ಣವಾಗಿ ಬದುಕುತ್ತಿದ್ದಾರೆ. ಲೇಖಕರು ಪುಣೆಯ ರಜನೀಶಧಾಮಕ್ಕಕೆ ಭೇಟಿ ಕೊಟ್ಟಾಗಿನ ನೆನಪುಗಳ ಪುಳಕವನ್ನು ಹಂಚುತ್ತಾರೆ.

        ಮನುಷ್ಯನ ವೈವಿಧ್ಯಮಯ ಮುಖವಾಡಗಳನ್ನು ಕಳಚಿಸತ್ಯಹಾಗೂಮೌನ ದರ್ಶನ ಮಾಡಿಸಿದವರು ಓಶೋ. ಅವರು ವೇದಾಂತಿ, ಯೋಗಿ, ಫಾದರ್, ಪ್ರವಾದಿ, ಸ್ವಾಮಿ ಆಗದೇ ತಾನೊಬ್ಬ ವಿದ್ರೋಹಿ, ಅನ್ವೇಷಕ ಅಥವಾ ಬಯಲುಗಳ ಮಧ್ಯ ನಿಂತ ಮನುಷ್ಯನಾಗಬೇಕೆಂದು ಬಯಸಿದರು, ಅದರಂತೆ ಬದುಕಿದರು. ಎಂಬ ಅವರ ಕುರಿತಾದ ಸತ್ಯ ದರ್ಶನವನ್ನು ಲೇಖಕರು ನಮಗೆ ಕೃತಿಯ ಮೂಲಕ ಯಶಸ್ವಿಯಾಗಿ ಮಾಡಿಸುತ್ತಾರೆ.


         ಶುದ್ದಭಾವ ಹಾಗೂ ನಿರ್ಮಲ ಹೃದಯದಿಂದ ಓದಿದಾಗ ಓಶೋ ಇಷ್ಟವಾಗುತ್ತಾರೆ. ಕೃತಿ ಓಶೋ ಬಗೆಗಿನ ನಮ್ಮ  ಅಜ್ಞಾನದ ಪೊರೆಯನ್ನು ಕಳಚಿ ಪ್ರಖರ ಬೆಳಕಿನ ಸೂರ್ಯನೊಬ್ಬನನ್ನು ದರ್ಶನ ಮಾಡಿಸುತ್ತದೆ. ನಮ್ಮ ಅಂತರಂಗದ ಮಲಿನವನ್ನು ಕಳೆಯುತ್ತದೆ. ಅರಿವನ್ನು ಧ್ಯಾನದ ಮಟ್ಟಕ್ಕೇರಿಸುತ್ತದೆ. ಜ್ಞಾನದ ಬೆಳಕು ನೀಡಿದ ಕೃತಿಗೆ ಕರ್ತೃವಿಗೆ ಅನಂತ ಅಭಿನಂದನೆಗಳು.

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...