Total Pageviews

Friday 29 December 2017

ರಸಋಷಿ

   ರಸಋಷಿ

  ಕನ್ನಡಾಂಬೆಯ ವರ ತನುಜಾತ

ವಾಙ್ಮಯ ಲೋಕದ ವಾಣಿಯ ಸಂತ

ಸರ್ವಜನಾಂಗದ ಶಾಂತಿಯ ದೂತ

‘ಶ್ರೀ ರಾಮಾಯಣ ದರ್ಶನಂ’ ದಾತ

‘ಕೊಳಲ’ನೂದಿದ ‘ನವಿಲು’ ವಿಹಾರಿ

‘ಕಲಾಸುಂದರಿ’ಯ ‘ಪ್ರೇಮ ಕಾಶ್ಮೀರಿ’

ಯುಗದರ್ಶನದ ಮಹಾರಸಋಷಿ

ಪರಂಪರೆ ಶಕ್ತಿಯ ವಿಶ್ವಮಹರ್ಷಿ

‘ಪಾಂಚಜನ್ಯ’ ವ ಮೊಳಗಿಸಿದ

ಶತಮಾನದ ದಿಗ್ದರ್ಶನ ಕವಿ

‘ಅಗ್ನಿಹಂಸ’ವ ಮುದ್ದಿಸಿ ಸವರಿ

‘ಕುಕಿಲ’ ಕಾಜಾಣ ರತ್ನಗಳ

‘ಪಕ್ಷಿಕಾಶಿ’ಯಲಿ ಮಿಂದ ರವಿ

‘ಜೇನಾಗುವ’ ಎಂದ ಸವ್ಯಸಾಚಿ

‘ಮಂತ್ರಾಕ್ಷತೆ’ಯ ನವೋದಯ ಸೂಚಿ

‘ಷೋಡಶಿ’ಯ ‘ಅನಿಕೇತನ’ಗೊಳಿಸಿ

‘ಜಲಗಾರ’ನ ‘ಮಹಾರಾತ್ರಿ’ಯ ಸೃಷ್ಟಿಸಿ

ಮಲೆನಾಡಿನ ಮಡಿಲಲಿ ಮೈಮನ ಕುಣಿಸಿ

ಹಿಗ್ಗುತ ಹಾಡಿದ ಜಗದ ಕವಿ

ನಿನಗಿದೊ ನಮನ ಓ ರಾಷ್ಟ್ರಕವಿ

ಮತ್ತೆ ಹುಟ್ಟಿ ಬಾ ಯುಗಪ್ರವರ್ತಕ

ವೀಣಾಪಾಣಿಯ ಭವ್ಯದರ್ಶಕ

‘ಶೂದ್ರ ತಪಸ್ವಿ’  ‘ಬಲಿದಾನ’ ದ ರೂಪಕ

‘ಚಂದ್ರಹಾಸ’ ‘ಬಿರುಗಾಳಿ’ಯ ಜನಕ

ಶಿವಚೇತನದ ಅಮೃತಧಾರೆ

ವಿದ್ವತ್ ಜ್ಯೋತಿಯ ರಾಯಭಾರಿ




8 comments:

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...