Total Pageviews

Thursday 27 June 2019

ಕಾವ್ಯೋದ್ಯಾನವನದಲ್ಲೊಂದು ವಿಹಾರ ಭಾಗ 2
ಶಬ್ದಸೂತಕದಿಂದ ಕಾವ್ಯವನ್ನು ಕಟ್ಟಿಕೊಡಲು ಸಾಧ್ಯವಿಲ್ಲ. ಹಾಗೆಯೇ ಬದುಕನ್ನೂ ಕೂಡ. ಶಬ್ದಗಳ ಬಂಧನದಲ್ಲಿಟ್ಟಷ್ಟೂ ಮುಕ್ತವಾಗುತ್ತಲೇ ಹೋಗುವುದು  ಕಾವ್ಯದ ಜಾಯಮಾನ; ನಿಗೂಢವಾಗುತ್ತಲೇ ಹೋಗುವುದು ಕಾವ್ಯದ ಗುಣ.ಕಾವ್ಯದ ಪಯಣವೆಂದಿಗೂ ಅನಂತತೆಯ ಕಡೆಗೆ.ದಕ್ಕಿದೆ ಎನ್ನುವಾಗಲೇ ದಕ್ಕದೇ ಹೋಗುವುದೂ ಕೂಡ ಕಾವ್ಯರಾಣಿಯ ಚಂಚಲತೆಯ ಲಕ್ಷಣ.ಇಂತಹ ಚಂಚಲ ಹಾಗೂ ಅಷ್ಟೇ  ಅಮಲಿನ ಕಾವ್ಯವನ್ನು ಸಾರ್ಥಕವಾಗಿ ದಕ್ಕಿಸಿಕೊಂಡ ಜಗತ್ತಿನ ದಾರ್ಶನಿಕರನ್ನು ದರ್ಶಿಸುವ ಮಹತ್ವದ ಕೃತಿಯಾಗಿ "ಜಾಡಮಾಲಿಯ ಜೀವ......." ಗಮನಸೆಳೆಯುತ್ತದೆ. ತನ್ನ ಪರಮಶಿಷ್ಯ ಜಲಾಲುದ್ದೀನ್ ರೂಮಿಯ ಅನುಯಾಯಿಗಳಿಂದಲೇ ಕೊಲೆಯಾಗಿ ರೂಮಿಯ ಮಗನಿಂದ ಸಮಾಧಿಯನ್ನಲಂಕರಿಸಿಕೊಂಡ,"ವಕಾಲತ್- ಎ-ಶಾಮ್ಸ -ಎ-ತಬ್ರೀಝಿ" ಎಂಬ ಏಕೈಕ ಪರ್ಶಿಯನ್ ಕೃತಿಯ ನೇಕಾರ, ಜಗತ್ಪ್ರಸಿದ್ಧ ಚಿಂತಕ ಶಾಮ್-ಎ-ತಬ್ರೀಝಿಯಾಗಿರಬಹುದು,ಸೌಂದರ್ಯವನ್ನೇ ಆರಾಧಿಸಿ,ಕಾಲು ಕಳೆದುಕೊಂಡ ಭಗ್ನ ಶಿಲ್ಪವಾಗಿ ಬದುಕನ್ನು ಸಾವಿನೊಂದಿಗೆ ಸವೆಸಿದ ಮೆಕ್ಸಿಕನ್ ಕಾವ್ಯಾರಾಧಕಿ ಫ್ರಿದಾ ಕಾಹಲೊವಾ ಆಗಿರಬಹದು,ಕಾವ್ಯ ಮತ್ತು ಖಡ್ಗಗಳ ಸಾಂಗತ್ಯದಲ್ಲಿ ಕ್ರಾಂತಿಯ ಬೀಜ ಬಿತ್ತಿ ಸೋವಿಯತ್ ಸರ್ಕಾರದಿಂದ ಗಲ್ಲಿಗೇರಿಸಲ್ಪಟ್ಟ ಅಹಮದ್ ಜಾವೇದ್ ಇರಬಹುದು,"ಸಾಂಗ್ಸ ಆಫ್ ದಿ ಆರ್ಮಿ "ಯನ್ನು ರಚಿಸಿ ಇಂಗ್ಲೆಂಡಿನ ಕಾರ್ಮಿಕರ ದನಿಯಾಗಿ ಕೊನೆಗೆ ಆತ್ಮಹತ್ಯೆಯಂತಹ ದುರಂತ ಸಾವನ್ನು ಕಂಡ ಕಾದಂಬರಿಕಾರ ಫ್ರಾನ್ಸಿಸ್ ಆ್ಯಡಮ್ಸ್ ಆಗಿರಬಹದು, ಸೇವೆಯನ್ನು ಸೈತಾನನಿಂದ ಕಲಿಯಬೇಕು ಎಂದು ಪ್ರತಿಪಾದಿಸಿ ಔರಂಗಜೇಬನಿಂದ ತಲೆದಂಡಕ್ಕೊಳಗಾದ ನಗ್ನತೆಯ ಆರಾಧಕ ಮೊಹಮ್ಮದ ಸಯೀದ್ ಸರ್ಮದ್ ಖಶಾನಿಯಾಗಿರಬಹುದು ,ಧರ್ಮಸುಧಾರಣೆಗಾಗಿ ತುಡಿದ ಮಾರ್ಟಿನ್ ಲೂಥರ್ ಕಿಂಗ್ ನನ್ನು ನೆನಪಿಸುವ, ಬಸವಣ್ಣನವರ ಆಚಾರವೇ ಸ್ವರ್ಗ ಅನಾಚಾರವೇ ನರಕ ವೆಂಬ ಚಿಂತನೆಗಳಿಗೆ ಹತ್ತಿರವಾಗಿ, ಅಕ್ಕಮಹಾದೇವಿಯಂತೆ ಸಾವಿಲ್ಲದ ಗಂಡನನ್ನು ಹುಡುಕುತ್ತಲೇ ಲೀನವಾದ ರಾಬಿಯಾ ಆಗಿರಬಹದು,ಪ್ರೇಯಸಿಯಿಂದ ಪ್ರೀತಿಯಿಂದ ಹೊಡೆಸಿಕೊಳ್ಳದವನು,ಶೆರೆ ಕುಡಿಯದವನು ಎಂದಿಗೂ ಕವಿಯಾಗಲಾರ ಎಂಬ ವಿಲಕ್ಷಣವಾದ ಸತ್ಯವನ್ನು ಪ್ರತಿಪಾದಿಸಿ ಕವಿತೆಯಾಗಿ ಮಾತ್ರ ಈ ಜಗಕೆ ದಕ್ಕಿದ ಗಾಲಿಬನಾಗಿರಬಹದು ಹೀಗೆ ಈ ಕೃತಿಗೆ ಮುನ್ನುಡಿಯಾದವರೆಲ್ಲರೂ ಒಂದಲ್ಲ ಒಂದು ಬಗೆಯಲ್ಲಿ ಬದುಕೆಂಬ  ದುರಂತ ನಾಟಕದ ನತದೃಷ್ಟ ನಾಯಕರುಗಳೆ;
ಸಮಾಜೋದ್ಧಾರಕ್ಕಾಗಿ ಪ್ರಭುತ್ವದ ವಿರುದ್ದ ಕಾವ್ಯಖಡ್ಗವನ್ನು ಹಿಡಿದು ಝಳಪಿಸಿದವರೇ ; ಕ್ರಾಂತಿಯ  ಮೂಲಕ ಮಾನವತೆಗಾಗಿ  ಪ್ರತಿಭಟಿಸಿದವರೇ.ಈ ಜಗದ ಸಾಂಸ್ಕೃತಿಕ ಲೋಕವನ್ನು ತಮ್ಮೊಳಗಿನ ಆಂತರ್ಯದ ಒಳನೋಟದ ಮೂಲಕ ನಿರ್ಭೀತಿಯಿಂದ ಎಚ್ಚರಗೊಳಿಸಿದವರೇ. ಮನುಷ್ಯನೊಳಗಣ ಮನುಷ್ಯತ್ವವನ್ನು ತೆರೆದು ತೋರಿಸುವ ಇಲ್ಲಿಯ ಕವಿತೆಗಳು ಮಹಾಮಾನವೀಯತೆಯ ಗಿಡದಲ್ಲರಳಿದ ಪುಷ್ಪಗಳು. ಮಾನವ ಆಚರಿಸಬೇಕಾದ ತತ್ವಜ್ಞಾನದ ಸಾಲುಗಳನ್ನು ಸರಳ ಸಾಲುಗಳ ಪರಿಮಳದ ಮೂಲಕ ಜನಮನಕೆ ತಲುಪಿಸಿದ ದಾಸಯ್ಯರು ಇಲ್ಲಿಯ ಕವಿಸೂರಿಗಳು. ಮೂಲ ಭಾವ, ಅರ್ಥ, ಆಶಯಗಳಿಗೆ ಕಿಂಚಿತ್ತೂ  ಧಕ್ಕೆಯೊದಗದಂತೆ ರಾಗಂರವರ ಲೇಖನಿಯಲ್ಲಿ ಇಲ್ಲಿಯ ಕವಿತೆಗಳು ಮರುಹುಟ್ಟು ಪಡೆದಿವೆ. ರಾಗಂರವರೇ ಹೇಳುವಂತೆ ಇಲ್ಲಿಯ ಕವನಗಳು  ಬರಿ ಶುಷ್ಕವಾದ ಭಾಷಾಂತರವಲ್ಲ ಬದಲಾಗಿ ಭಾವಶುದ್ಧತೆಯೊಂದಿಗೆ ಪುನರ್ ಸೃಷ್ಠಿಗೊಳಗಾಗಿವೆ. ನಿಜ. ನೀರಸ ಅನುವಾದ ಮೌಲಿಕವಾದುದನ್ನು ಹೊರಗಿಡುತ್ತದೆ. ಈ ಕವಿತೆಗಳನ್ನು ಪುನರ್ ಸೃಷ್ಟಿಸುವ ರಾಗಂರವರ  ಪರಿಯೇ ಮನೋಜ್ಞವಾಗಿದೆ -
"ಎಲ್ಲ ಇದೆ ಈ ಮೈಯೊಳಗೆ
ಹಸಿ ಗಂಧದ ಪರಿಮಳ
ಬಗೆ ಹೂಗಳ ಉಸಿರು
ಕೋಟಿ ಸಸಿಗಳಿಗೊಂದು ಬಸಿರು
ಎಲ್ಲ ಇದೆ ಈ ಮೈಯೊಳಗೆ
ಎದೆಯ ಬಟ್ಟಲದೊಳಗೇ
ಉಸಿರು ಕಟ್ಟಿಸುವ ವಿಷ
ಎಲ್ಲ ಎಲ್ಲ ಇದೆ ಈ ಮೈಯೊಳಗೆ"
ಎಂಬಲ್ಲಿನ ಆರ್ದ್ರತೆ ನವಪರಿಮಳದೊಂದಿಗೆ  ಘಮಘಮಿಸುತ್ತಿರುವ ಪರಿಯನ್ನು ಗಮನಿಸಿ. ರೂಪದರ್ಶಿ,"ವೈಟ್ ಎಲಿಫೆಂಟ್", "ವರ್ಲ್ಡ್ ಹೋಟೆಲ್ " ನಂತಹ ಕಾವ್ಯ ಸಂಕಲನಗಳ ಮೂಲಕ ಜನಮನಸೂರೆಗೊಂಡು ಮಡಿಲು ತುಂಬಿ ಹರಿಯುವಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡು  ಪಂಜಾಬಿನಲ್ಲಿ ಹುಟ್ಟಿ ಅಮೆರಿಕಾದವರೆಗೆ ಹಬ್ಬಿಕೊಂಡ ಕಾವ್ಯಬಳ್ಳಿಯಂತಿದ್ದ ರೀತಿಕಾ ವಾಜಿರಾಣಿ ಎಂಬ, ಹೆತ್ತ ಮಗನನ್ನೇ ಕೊಂದು ಆತ್ಮಹತ್ಯೆ ಮಾಡಿಕೊಂಡ ದುರಂತ ನಾಯಕಿಯ ಮೇಲಿನ ಕಾವ್ಯ ಏನೆಲ್ಲವನ್ನೂ ಧ್ವನಿಸುತ್ತಿದೆ ಅಲ್ಲವೇ?  ಜನನದಿಂದ ಮರಣದವರೆಗಿನ ಉಸಿರು, ಬಸಿರು, ವಿಷದ ಮೂಲಕ ಅಂತ್ಯದ ಸಂಗತಿಗಳನ್ನು ಮೇಲಿನಂತೆ ಕೆಲವೇ ಸಾಲುಗಳಲ್ಲಿ ಹಾಡಿದ ರೀತಿಕಾಳ ನೋವ ಒಡಲು ಅದೆಷ್ಟು ಯಾತನೆಯಿಂದ ನರಳಿರಬೇಕಲ್ಲವೇ?  ಆ ನರಳುವಿಕೆ ಈ ಪದಗಳ ಮೂಲಕ ಬ್ರಹ್ಮಾಂಡವನ್ನೇ ಆವರಿಸಿ ಅನುರಣಿಸುತ್ತಿದೆ. ಕರಣ ಕರಣದಲೂ ರಿಂಗಣಿಸಿ ಸುತ್ತಿ ಸುಳಿಯುವ ಮಡುವನ್ನೇ ಸೃಷ್ಟಿಸುವ ಈ ಕಾವ್ಯದ ಅಂತಃಶಕ್ತಿಗೆ ನಾವು ತಲೆಬಾಗಲೇಬೇಕು.
ರಾಗಂ ರವರು ಜಗತ್ತಿನ ಹೊರವಲಯದ ಗುಡಿಸಲುಗಳಲ್ಲಿ ಕಳೆದುಹೋಗಿದ್ದ ಕಾವ್ಯಮಣಿಗಳನ್ನು ಆಯ್ದು ತಂದು ಪೊಸ ಮಾಲೆಯನ್ನಾಗಿ ಕಟ್ಟಿ ಕನ್ನಡ ಸರಸ್ವತಿಯ ಮುಡಿಗೇರಿಸಿ ಅಲಂಕರಿಸಿರುವುದು ಹೆಮ್ಮೆ ಹಾಗೂ ಅಭಿಮಾನದ ಸಂಗತಿ. ರೋಮ್ಯಾಂಟಿಕ್ ಯುಗದ ನಂತರದ ಸಮರ ಕಾವ್ಯಯುಗದ ಕವಿಗಳೂ ಕೂಡ ಶಬ್ದಸಂಗೀತವಾಗಿ ಈ ಕೃತಿಯ ಮೂಲಕ ಸುಮಧುರವಾದ ಕಾವ್ಯವಾಗಿದ್ದಾರೆ. "ದೇವರು" ಎಂಬ ತಮ್ಮ ವಿಶಿಷ್ಟ  ವೈಚಾರಿಕ ಕೃತಿಯಿಂದ ಭಗವಂತನನ್ನು ಹುಡುಕಿದ ಚಿಂತಕರಾದ ಎ. ಎನ್. ಮೂರ್ತಿರಾಯರು ಅಂತಿಮವಾಗಿ ಶೋಧಿಸಿದ್ದು ಇಲ್ಲಿಯ ಮನ್ಸೂರ ನೆಂಬ ಮಾನವಪ್ರೇಮಿ ಕವಿಯೊಬ್ಬ ತಡಕಾಡಿದ ದೇವರನ್ನೇ ಎಂಬುದನ್ನು ನೋಡಿ -  "ಹೃದಯದ ಕಣ್ಣುಗಳಿಂದ
ದೇವರ ಕಂಡೆ
ಯಾರು ನೀ ಎಂದೆ
ಮುಗುಳ್ನಕ್ಕು ಆತ ನುಡಿದ
"ನೀನು"
ನಾನೆಂದರೆ ನೀನೆ.." .
ಯುದ್ದಕಾವ್ಯ ಯುಗದಲ್ಲಿ ಪರಿಶುದ್ಧ ಪ್ರೇಮವನ್ನು ಬಿತ್ತಿ,
ಪ್ರೇಮ ತುಂಬಿದ ಹೃದಯದ ಬೆಳಕನ್ನು ಹರಡುವ ರಷ್ಯಾದ ಅಲೆಮಾರಿ ಕವಿ ನಾಟಕಕಾರ ವಿಮರ್ಶಕ ನಿಖೊಲೆ ಗ್ಯಾಮಿಲಿಯೊ ನ ಪ್ರಣಯ ಕವಿತೆಯ ಸೌಂದರ್ಯವನ್ನೊಮ್ಮೆ ಆಸ್ವಾದಿಸಿ -
"ಯಾರೂ ಸಾಯುವುದಿಲ್ಲ
ನಿನ್ನ ಮುಟ್ಟಿ
ಯಾರೂ ಬದುಕುವುದಿಲ್ಲ
ನಿನ್ನ ಮೆಟ್ಟಿ
ಒಟ್ಟಂದದ ಬದುಕಿನಲ್ಲಿ
ನಿನ್ನ ಸಂಗವೆ
ಪರಮ ಮಂಗಳ
ನಿನ್ನ ಸ್ಮರಣೆಯ
ಬೆಳಕು ಹಬ್ಬಿದೆ
ಗೆಲುವಾಗಿದೆ ಹೃದಯದಂಗಳ"
ಈ ಕವಿತೆಯ ಸಾಲುಗಳನ್ನು ಕಣ್ತುಂಬಿಕೊಳ್ಳುತ್ತಿದ್ದರೆ ಕೆ ಎಸ್ ನರಸಿಂಹಸ್ವಾಮಿಯವರ
" ನಿನ್ನ ಪ್ರೇಮದ ಪರಿಯೆ
ನಾನರಿಯೇ ಕನಕಾಂಗಿ
ನಿನ್ನೊಳಿದೆ ನನ್ನ ಮನಸು.." ಎಂಬ ಕಾವ್ಯದೆಸಳುಗಳು  ನೆನಪಾಗುತ್ತವೆ.ಹೌದು. ಪ್ರೇಮದ ಲಲಾಟವೇ ಅಂಥಹದ್ದು. ಪ್ರೇಮ ಕಾಡದ ಕವಿಯಿರಲಾರ ಎಂಬುದಕ್ಕೆ ಷೇಕ್ಸಪಿಯರ್ ನ ನಾಟಕಗಳೂ ಸಾಕ್ಷ್ಯ ಹೇಳುತ್ತವೆ; ಬೇಂದ್ರೆಯವರ ಸಖಿಗೀತ ಗಳು ದೃಷ್ಟಾಂತವನ್ನೊದಗಿಸುತ್ತವೆ; ಕುವೆಂಪುರವರ ಪ್ರೇಮಕಾಶ್ಮೀರ ಹಿಮಸುರಿಸಿ ಹಾಡುತ್ತದೆ. ಎಚೆಸ್ವಿಯವರ ಭಾವಗೀತೆಗಳು ದನಿಯೆತ್ತಿ ಗಾಯನಗೈಯ್ಯುತ್ತವೆ.
ಮಾನವಸಮಾಜವನ್ನು ಮುನ್ನಡೆಸಲು ಬೇಕಾದ ಸಮಾಜವಿಜ್ಞಾನ, ರಾಜ್ಯಶಾಸ್ತ್ರ,ತತ್ವಜ್ಞಾನ,ವಿಜ್ಞಾನ,ಆಧ್ಯಾತ್ಮ,ಯೋಗ,ಇತಿಹಾಸ, ಮಾನವಶಾಸ್ತ್ರಗಳಾದಿಯಾಗಿ ಮುಗಿಯದ ಮುಗಿಲಿನಂತಹ ವಸ್ತುವೈವಿಧ್ಯದ ಇಲ್ಲಿಯ ಕಾವ್ಯಗಳು ಸಾರ್ವತ್ರಿಕ ಸತ್ಯವನ್ನು ತಮ್ಮ ಉಸಿರೆಂಬಂತೆ ಸಾರುತ್ತವೆ.
ಆಧುನಿಕ ಧರ್ಮಕಾರಣದ ಸಮಕಾಲೀನ ಸಂದರ್ಭದಲ್ಲಿ ಅತ್ಯಂತ ಪ್ರಸ್ತುತವಾಗಿರುವ ಭಾವೈಕ್ಯೆತೆಯ ಪ್ರಜ್ಞೆಯನ್ನು ಕುರಿತು ಚರ್ಚಿಸುವ ಕವಿಕಾವ್ಯಗಳು ಈ ಕೃತಿಯನ್ನಲಂಕರಿಸಿರುವುದು ಔಚಿತ್ಯಪೂರ್ಣವಾಗಿದೆ.
ಪಾಕಿಸ್ತಾನಕ್ಕಂಟಿಕೊಂಡಿರುವ ಪಂಜಾಬಿನವನಾದ ಸಂತ,ಮಹಾವಿದ್ರೋಹಿಯಾದ ಬುಲ್ಲೇಷಾ ನಲ್ಲಿ ಹುಟ್ಟಿದ
" ಎಲ್ಲ ಎಲ್ಲರೂ ಕುರುಡರಾದಲ್ಲಿ
ಹೋಗೋಣ ಬಾ ಬುಲ್ಲೆ
ಅಲ್ಲಿ ಗುರ್ತಿಸುವುದಿಲ್ಲ ನಮ್ಮನಾರೂ
ಜಾತಿ ಬಣ್ಣ ದೇಶ ಧರ್ಮಗಳಿಲ್ಲದ
ಕುರುಡರ ಕಾರುಣ್ಯದಲ್ಲಿ
ನಾನ್ಯಾರು?  ಅನ್ಯರಾರು" ಎಂಬ ಕಾವ್ಯಝರಿಯು ಭೇದವಿಲ್ಲದ ಲೋಕದ ಆಲಾಪವನ್ನು ಸರ್ವರ ಕಿವಿಗಿಂಪಾಗುವಂತೆ ಹೇಗೆ  ಮೊರೆಯುತ್ತಿದೆಯಲ್ಲವೇ ? ಇದೇ ಇಂದಿನ ತುರ್ತು ಸಂದರ್ಭದ ತುಡಿತವಾಗಬೇಕು.
ಅರಸೊತ್ತಿಗೆಯ ಹೊಂಚಿಗೆ, ಮಿಲಿಟರಿಯ ಬಲೆಯ ಸಂಚಿಗೆ ಕೊರಳೊಡ್ಡಿಕೊಂಡ, ಕ್ರಾಂತಿಕಾರಿ
ಬಂಡಾಯಕ್ಕೆ ಮತ್ತೊಂದು ಹೆಸರಾಗಿದ್ದ ಮೈನುಯೆಂಗ್ ಕೆ. ಕುಂತೀ ಯ ಸಿಡಿಲ ಕಿಡಿಗಳನ್ನು ಒಮ್ಮೆ ಕೇಳಿ-
" ಗೊತ್ತಿರಲಿಲ್ಲ ನಾಯಕರೆ
ಬೂಟಿನ ಹಿಂಬದಿಯ ಹಿಡಿ ಮಣ್ಣಿನಲ್ಲಿ
ನನ್ನ ಕ್ರಾಂತಿಯ ಕನಸರಳುತ್ತದೆ
ಅದು ಸಿಡಿದರೆ ಕಿಡಿಯಾಗಿ
ಅನ್ಯಾಯದ ಗದ್ದುಗೆ ಉರುಳುತ್ತದೆ " ನಮ್ಮ ಕನ್ನಡದ
ಬಂಡಾಯ ಕಾವ್ಯದ ಬಿಸುಪನ್ನು ಸ್ಮರಿಸುವ ಈ ಸಾಲುಗಳು ಅನ್ಯಾಯವನ್ನು  ಧಿಕ್ಕರಿಸಿ ನಿಲ್ಲುತ್ತವೆ. ಭಾವೈಕ್ಯತೆಯೂ ಜಗತ್ತಿನ ತಲ್ಲಣಗಳನ್ನು ತುಂಬಿಕೊಂಡ ಕಾವ್ಯ ಎಷ್ಟು ಅರ್ಥಪೂರ್ಣವಾಗಿರಬಲ್ಲದು ? ಎಷ್ಟು ಚಿಂತನಾಶೀಲವಾಗಿರಬಲ್ಲದು ? ಎಂಬುದಕ್ಕೆ ಇಲ್ಲಿ ಪದಗಳಾದ ಕವಿಕಾವ್ಯಗಳೇ ನಿದರ್ಶನಗಳಾಗಿವೆ. ಬದುಕಿನ ಮುಂದಿರುವ ಸವಾಲುಗಳನ್ನು ಎದುರಿಸಿ ಹೋರಾಡುವ ಆಂತರಿಕ ಎಚ್ಚರಿಕೆಯ ಪ್ರಜ್ಞೆ, ಸಮಾಜದ ಸಮಸ್ಯೆಗಳೊಂದಿಗೆ ಬದುಕುವ ಕಲೆಯನ್ನು ಕಲಿಸುವ ಸಾಮಾಜಿಕ ಪ್ರಜ್ಞೆ, ಶೋಷಿಸುವ ಪ್ರಭುತ್ವದ ವಿರುದ್ಧ ಹೋರಾಡುವ ಬಂಡಾಯದ ಪ್ರಜ್ಞೆ, ರಾಜ್ಯವನ್ನು ಮುನ್ನಡೆಸುವ ರಾಜಕೀಯ ಪ್ರಜ್ಞೆ, ವಕ್ರರೇಖೆಯಂತೆ ಎದುರಾಗುವ ಬದುಕನ್ನು ಬಂದಂತೆ ಪ್ರೀತಿಸುವ ಜೀವನ ಪ್ರಜ್ಞೆಗಳೊಂದಿಗೆ ಮುಖಾಮುಖಿಯಾಗುವಂತೆ ಮಾಡುವ ಅಪರೂಪದ ಕೃತಿ ಜಾಡಮಾಲಿಯ ಜೀವ ಕೇಳುವುದಿಲ್ಲ.
ಪ್ರೊ.ಸಂಗಮೇಶ ಗಣಿಯವರು ಹೇಳುವಂತೆ ಭೌತಿಕ ಹಾಗೂ ಮನುಷ್ಯನೊಳಗಿನ ಆಂತರಿಕ ಯುದ್ಧೋನ್ಮಾದದ ಸಮಕಾಲೀನ ವಿಷಮ  ಸಂದರ್ಭದಲ್ಲಿ ಪ್ರೀತಿ,ವಾತ್ಸಲ್ಯ, ದಯೆ, ಅಂತಃಕರಣ, ಮಾನವೀಯತೆಗಳನ್ನು ನಮ್ಮ ಎದೆಯಲ್ಲಿ ಬಿತ್ತಬಲ್ಲ ಈ ಕೃತಿ  ಇಂದು ಅತ್ಯಂತ ಪ್ರಸ್ತುತ ಹಾಗೂ ಔಚಿತ್ಯಪೂರ್ಣವೆನಿಸಿದೆ. ಜಾಗತಿಕವಾಗಿ ವಿಭಿನ್ನ ಸಂಸ್ಕೃತಿಯ ಕವಿಕಾವ್ಯಗಳನ್ನು ಕನ್ನಡದ ಸಂದರ್ಭದಲ್ಲಿಟ್ಟು ಅನುಸಂಧಾನಿಸುವ ಕ್ರಿಯೆಯೇ ಅನನ್ಯವಾದುದು. ಹೀಗೆ ಅನನ್ಯತೆಯನ್ನೇ ತಮ್ಮ ಸಾಹಿತ್ಯದ ಲಕ್ಷಣವಾಗಿಸಿಕೊಂಡ ಡಾ.ರಾಜಶೇಖರ ಮಠಪತಿಯವರು (ರಾಗಂ) ಈ ಕೃತಿಯ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ವಿಭಿನ್ನವಾದ ಕೊಡುಗೆಯೊಂದನ್ನು ನೀಡಿದ್ದಾರೆ.ಈ ಕೃತಿಯಲ್ಲಿ ಪಡೆಮೂಡಿರುವ ಬಹುಪಾಲು ಕಾವ್ಯಾರಾಧಕರೆಲ್ಲ ಪ್ರೇಮಪೂಜಾರಿಗಳೇ. ಪ್ರೇಮದ ಜೊತೆಗೂಡಿ ಬಂದ ಮಾನವೀಯತೆ ಈ ಕೃತಿಯನ್ನಾವರಿಸಿದ  ಮತ್ತೊಂದು ವಿಶ್ವಪಥದ ಮೌಲ್ಯ. ಏನಾದರೂ ಆಗು ಮೊದಲು ಮಾನವನಾಗು ಎಂಬ ಕನ್ನಡ ಕವಿಯ ಸಾಲುಗಳು ಇಲ್ಲಿಯ ಕಾವ್ಯದ ಪಾದಗಳನ್ನು ಹೋಲುತ್ತವೆ. ಮಹಾಮಾನವತಾವಾದಿಗಳನ್ನೆಲ್ಲ ತಮ್ಮ ಕೃತಿಯ ಮೂಲಕ ಹೀಗೆ ಕಟ್ಟಿಕೊಡುತ್ತಿರುವ ಪ್ರಯತ್ನ ಅರ್ಥಪೂರ್ಣವಾದುದು. ಕವಿಕಾವ್ಯಗಳ ಜಾಗತಿಕ ಸಂಕಥನಗಳನ್ನು ಕಟ್ಟಿಕೊಡುವ ರಾಗಂರವರ ಪ್ರಯತ್ನ ಅನುಪಮವಾದದ್ದು.ಸಾರ್ಥಕವಾದದ್ದು. ಈ ಕೃತಿಯ ಶೀರ್ಷಿಕೆಯಲ್ಲಿ ಬಳಕೆಯಾದ ಜಾಡಮಾಲಿಯೇ ಒಂದು ರೂಪಕ.ಜಗತ್ತನ್ನು ಪೊರೆಯುವ ಪ್ರಕೃತಿಯಿಂದ  ಹಿಡಿದು ಉದ್ಯಾನವನದಲ್ಲಿ ಸಸಿಗಳನ್ನು ಪೋಷಿಸುವ ಪೋಷಕಿಯವರೆಗೆ ಜಾಡಮಾಲಿ  ಇಲ್ಲಿ ವಿಶಾಲವಾದ ಹರವು ಪಡೆದುಕೊಂಡಿದ್ದಾಳೆ. ಜೀವ ತುಂಬಿ ಕಾವ್ಯ ಹೆಣೆದು ಕಾಪಿಡುವ ಈ ಕುಶಲಿಗರೂ ಇಲ್ಲಿ ಜಾಡಮಾಲಿಗಳೆ.ಕರಕಿಯೆಳೆಯ ಹೆಕ್ಕಿ ತಂದು, ತೂಗುವಂಥ ಗೂಡು ಕಟ್ಟಿ ಮೊಟ್ಟೆಯಿಟ್ಟು ಮರಿ ಮಾಡಿ, ಗುಟುಕಿಡುವ ಹಕ್ಕಿಯೂ ಜಾಡಮಾಲಿಯೇ. ನವಮಾಸಗಳ ಹೊತ್ತು ಹೆತ್ತು ಕರುಳು ಕುಡಿಗಳಿಗೆ ಜೀವತುಂಬುವ ತಾಯಿಯೂ ಜಾಡಮಾಲಿಯೇ.ಹೀಗೆ ಜಾಡಮಾಲಿಯನ್ನು ನಾವು ಇದುವರೆಗೂ ಕಂಡು ಕೇಳರಿಯದ ಬಗೆಯಲ್ಲಿ ವಿಸ್ತರಿಸಿಕೊಳ್ಳುವ ರೂಪಕವನ್ನಾಗಿಸಿದ್ದಾರೆ ರಾಗಂರವರು.  ವಿಶ್ವದ ಕಾವ್ಯಕುಸುರಿಗರ ಕಾವ್ಯಗಳನ್ನು ತಮ್ಮದೇ ಭಾಷೆಯಲ್ಲಿ ಅರಳಿಸಿ, ಕನ್ನಡದ ತೊಡುಗೆಯುಡಿಸಿ  ಅಲಂಕರಿಸಿರುವ  ಡಾ. ರಾಜಶೇಖರ ಮಠಪತಿಯವರೂ ಒಬ್ಬ ಜಾಡಮಾಲಿಯೇ. ತನ್ನೆಲ್ಲ ನೋವು ಸಂಕಟಗಳನ್ನು ಪೊರೆಯುವುದರಲ್ಲಿಯೇ ತನ್ನೆಲ್ಲ ನೋವು ಸಂಕಷ್ಟಗಳನ್ನು ಮರೆಯುವ ಅವಳ ಅಂತಃಕರಣ, ಸಹನೆ, ತ್ಯಾಗ,  ಅವಿಸ್ಮರಣೀಯವಾದುದು. ಆರ್ತನಾದ, ವೇದನೆಯನ್ನು ಕೇಳಿದಾಗ ಜಾಡಮಾಲಿಯ ಜೀವ ಹೇಗೆ ಕೇಳುವುದಿಲ್ಲವೋ,  ( ತಡೆಯುವುದಿಲ್ಲವೋ)  ಹಾಗೆ ದುರಂತನಾಯಕರಾಗಿರುವವರ ಕವಿಕಾವ್ಯಗಳನ್ನು ಕಂಡಾಗ ರಾಗಂ ರವರ ಜೀವವೂ ಕೇಳಿಲ್ಲ.
ಡಾ. ಬರಗೂರು ರಾಮಚಂದ್ರಪ್ಪನವರು ಕನ್ನಡದ ಸಂದರ್ಭದಲ್ಲಿ  ಉಲ್ಲೇಖಿಸಿದ ಗಂಭೀರ ಮಾತುಗಳನ್ನು ಇಲ್ಲಿ ಪಡೆಮೂಡಿರುವ ಜಾಗತಿಕ ಸಾಹಿತ್ಯ ಕ್ಷೇತ್ರಕ್ಕೆ ಅನ್ವಯಿಸುವುದಾದರೆ, ಸತ್ಯ,ಶಾಂತಿ, ಪ್ರೀತಿ,ನಿರ್ಮಲತೆ,ಪರಿಶುದ್ಧತೆಯ ಮಾನವತಾವಾದದ ಅಮರ ಮೌಲ್ಯಗಳನ್ನು ತಮ್ಮ ಕಾವ್ಯಗಳ ಮೂಲಕ ಬಿತ್ತಿದ ಇಂತಹ ಕವಿಕಾವ್ಯಗಳನ್ನು ಭಾಷೆ,ಸಾಹಿತ್ಯ,ದೇಶ ಕಾರಣವಾಗಿ ವಿಮರ್ಶೆಯ ಮುಖ್ಯವಾಹಿನಿಯಿಂದ ಹೊರಗಿಟ್ಟ ಸಾಂಸ್ಕೃತಿಕ ಅಸ್ಪೃಶ್ಯತೆಯನ್ನು ಹೋಗಲಾಡಿಸಬೇಕಾಗಿದೆ.ಇಂತಹ ಸಾಂಸ್ಕೃತಿಕ ಅಸ್ಪೃಶ್ಯ  ಪರಂಪರೆಯೊಂದರ ಕಡೆಗೆ ಎಚ್ಚರಗೊಳ್ಳಬೇಕಾದ ಅವಶ್ಯಕತೆಯನ್ನು ಈ ಕೃತಿ ಅತ್ಯಪೂರ್ವವಾಗಿ ಸಾರುತ್ತದೆ.


Wednesday 12 June 2019

'ತುಘಲಕ್'ನೊಂದಿಗೆ  ಮಾತಿಗಿಳಿದಾಗ...
ಪುರಾಣವನ್ನಾಧರಿಸಿದ 'ಯಯಾತಿ' ಚರಿತ್ರೆಯನ್ನಾಧರಿಸಿದ 'ತುಘಲಕ್' ನಂತಹ ಶ್ರೇಷ್ಠ ನಾಟಕಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ ಗಿರೀಶ ಕಾರ್ನಾಡರು ಕನ್ನಡಕ್ಕೆ ಪ್ರಥಮ ಸ್ವರ್ಣಕಮಲ ಪ್ರಶಸ್ತಿ ತಂದುಕೊಟ್ಟು ಕನ್ನಡ ರಂಗಭೂಮಿ ಹಾಗೂ ಸಿನೇಮಾರಂಗವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಿದ ಅಪ್ರತಿಮ ಸಾಧಕರು. ಅವರ ೨೭ ನೇಯ ವಯಸ್ಸಿನಲ್ಲಿಯೇ ರಚಿತವಾದ ತುಘಲಕ್ ಅವರನ್ನು ಕೀರ್ತಿಯ ಶಿಖರಕ್ಕೇರಿಸಿದ ನಾಟಕ. ನನ್ನ ಹೃನ್ಮನಗಳನ್ನು ಸೆಳೆದ ನಾಟಕಗಳಲ್ಲಿ ತುಘಲಕ್ ಅತ್ಯಂತ ವಿಶಿಷ್ಟವಾದುದು. ಇದರ ರಂಗಪ್ರಯೋಗವಂತೂ ನನ್ನನ್ನು ಗತಕಾಲದ ಚರಿತ್ರೆಯತ್ತ ಹೆಜ್ಜೆ ಹಾಕಿ ಶೋಧನೆಗಿಳಿಯುವಂತೆ ಪ್ರೇರೇಪಿಸಿತು. ಇತಿಹಾಸದೊಂದಿಗಿನ ಅನುಸಂಧಾನವೇ ಈ ನಾಟಕದ ಸೃಷ್ಟಿಯ ರಹಸ್ಯಗಳಲ್ಲೊಂದು. ತುಘಲಕ್  ವಿಶಿಷ್ಟವಾದ  ಚಿಂತನೆಯ ಹೊಸ ಹೊಳವುಗಳನ್ನು ಸ್ಫುರಿಸಬಲ್ಲ ಮಾರ್ಗದರ್ಶಿ ನಾಟಕವಾಗಿದೆ. ದೌಲತಾಬಾದ್ ನಿಂದ ದೆಹಲಿಗೆ ದೆಹಲಿಯಿಂದ ದೌಲತಾಬಾದ್ ಗೆ ರಾಜಧಾನಿಯ ವರ್ಗಾವಣೆ, ಬೆಳ್ಳಿಯ ನಾಣ್ಯಗಳ ಬದಲಾಗಿ ತಾಮ್ರದ ನಾಣ್ಯಗಳನ್ನು ಜಾರಿಗೆ ತರುವಂತಹ  ದುಡುಕಿನ ಜನಪರ ಯೋಜನೆಗಳನ್ನು ಜಾರಿಗೆ ತಂದು ವಿಫಲನಾದ ಮೂರ್ಖ ದೊರೆಯೆಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ  ತುಘಲಕ್ ನನ್ನು ರಂಗದ ಮೇಲೆ ನಿಲ್ಲಿಸಿ ಇತಿಹಾಸದ ಮಣ್ಣಿನಲ್ಲಿ ಹೂತುಹೋಗಿರುವ  ಅಪರೂಪದ ಚಕ್ರವರ್ತಿಯೆಂದು ದೃಶ್ಯೀಕರಿಸಿ ಸಾರುವ ನಾಟಕ ವೆಂದರೆ ಅದು ಗಿರೀಶ ಕಾರ್ನಾಡರ 'ತುಘಲಕ್'. ರಾಜಕೀಯದ ಚದುರಂಗದಾಟವನ್ನು  ಬಲ್ಲವನಾಗಿದ್ದ ಚಾಣಾಕ್ಷ ತುಘಲಕ್ ತನ್ನ ಸಾಮ್ರಾಜ್ಯದ ಉಳಿವಿಗಾಗಿ  ಚಾಣಕ್ಯನ ತಂತ್ರಗಳ ದಾಳಗಳನ್ನುರುಳಿಸಿ ಗೆಲ್ಲುವ ರಾಜತಂತ್ರ ನಿಪುಣನೂ ಆಗಿದ್ದನೆಂಬುದಕ್ಕೆ ನಾಟಕ ನಿದರ್ಶನಗಳನ್ನು ಒದಗಿಸುತ್ತದೆ. ಗಿರೀಶ ಕಾರ್ನಾಡರು "ತುಘಲಕ್ ರಾಜಧಾನಿಯನ್ನು ಪದೇ ಪದೇ ಬದಲಾಯಿಸುವುದರ ಜೊತೆಗೆ ತನ್ನ ಸಾಮ್ರಾಜ್ಯದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಿಷೇಧಿಸಿದ್ದ ಅಚ್ಚರಿಯ ಸಂಗತಿ ಈ ನಾಟಕ ಸೃಷ್ಟಿಸಲೊಂದು ಕಾರಣವಾಯಿತು. ಇತಿಹಾಸದ  ಗರ್ಭದಲ್ಲಡಗಿದ್ದ ಈ ಚಿಕ್ಕ ಎಳೆಯೇ ನನ್ನ ನಾಟಕಕ್ಕೆ ಪ್ರೇರಣೆಯನ್ನೊದಗಿಸಿತು" ಎಂದು ನಾಟಕ ರಚನೆಯಾದ ಸಂದರ್ಭವನ್ನು ಕುರಿತು ವಿವೇಚಿಸುತ್ತಾರೆ.
ನಿಜ. ಕೃತಿಯೊಂದು ಜನ್ಮತಾಳಲು ಮಹತ್ ಸಂಗತಿಗಳೇ ಘಟಿಸಬೇಕೆಂದೇನಿಲ್ಲ, ಬಾಣದ ಮರ್ಮಾಘಾತದಿಂದ ತತ್ತರಿಸಿ ನಲುಗುವ ಕ್ರೌಂಚಪಕ್ಷಿಗಳ ನರಳಾಟದಿಂದ ಹೊಮ್ಮಿದ ಮಾನಿಷಾದ ಶ್ಲೋಕವಾಗಿರಬಹುದು,  ಬೀದಿಯ ಪಕ್ಕ ಮೈಯರಳಿಸಿಕೊಂಡು ನಿಂತ  ಹೆಸರಿಲ್ಲದ ಹೂಗಳ ಸೌಂದರ್ಯವಿರಬಹುದು, ಸೂರ್ಯನ ಹೊಂಗಿರಣಗಳಿಗೆ ಮೈಚಾಚಿಕೊಂಡು ಹರಡಿದ ಸರೋವರವರದ ನೋಟವಿರಬಹುದು, ವಸಂತಕ್ಕೊಮ್ಮೆ ಭುವಿಯಲಂಕರಿಸುವ ಶ್ರಾವಣದ ಚಿಗುರಿರಬಹುದು, ಮೂಡಲಮನೆಯ ಬಾಗಿಲು ತೆರೆದು ರವಿ ಚಿಮುಕಿಸುವ ಇಬ್ಬನಿಯ ಹನಿಗಳಾಟದಂತಹ ಚಿಕ್ಕ ಸಂಗತಿಗಳೂ ಬರಹಗಾರನಲ್ಲಿ ಕೃತಿ ಸೃಷ್ಟಿಯ ಸ್ಪೂರ್ತಿಯ ಚಿಲುಮೆಗಳನ್ನು ಚಿಮ್ಮಿಸಬಲ್ಲವು. ಇತಿಹಾಸ ಹಾಗೂ ಪುರಾಣಗಳನ್ನು ತುಸು ಹೆಚ್ಚಾಗಿಯೇ ಪ್ರೀತಿಸುವ ಗಿರೀಶ ಕಾರ್ನಾಡರನ್ನು ವಿಲಕ್ಷಣ ವ್ಯಕ್ತಿತ್ವದ ತುಘಲಕ್ ಸೆಳೆದದ್ದರಲ್ಲಿ ಅಚ್ಚರಿಯೇನಿಲ್ಲ.
'ತುಘಲಕ್' ನಾಟಕ ಸಮಕಾಲೀನ ರಾಜಕೀಯ, ಸಾಮಾಜಿಕ ಸಂದರ್ಭಗಳ ಅವಲೋಕನಕ್ಕೆ ಮುನ್ನುಡಿ ಬರೆಯುವಂತಿದೆ.  ವ್ಯಕ್ತಿಯು ತನ್ನ ಭಾವತರಂಗಗಳೊಂದಿಗೆ  ಮುಖಾಮುಖಿಯಾಗುವ ಬಗೆಯನ್ನು ತುಘಲಕ್ ನ ಮುಖೇನ ತೆರೆದಿಡುವ ನಾಟಕವು ಚರಿತ್ರೆಯ ಕೇಂದ್ರವಾದ ವ್ಯಕ್ತಿಯನ್ನು ಮರುವ್ಯಾಖ್ಯಾನಿಸುತ್ತದೆ. ೧೪ ನೇ ಶತಮಾನದಲ್ಲಿಯೇ  ಪ್ರಜಾಪರ ಭಾವೈಕ್ಯತೆಯ ಶಾಂತಿಯ ಬನವನ್ನಾಗಿ ತನ್ನ ಸಾಮ್ರಾಜ್ಯವನ್ನು  ಸೃಷ್ಟಿಸಬೇಕೆಂಬ ಹಂಬಲದ ಈ ಸರ್ವಾಧಿಕಾರಿ, ತನಗೆ ಎದುರಾದ ಧರ್ಮ ಹಾಗೂ ರಾಜಕೀಯದೊಂದಿಗಿನ  ಸಂಘರ್ಷಗಳನ್ನು ಚಾಣಾಕ್ಷತನದಿಂದ  ಮೆಟ್ಟಿನಿಂತರೂ ಕೊನೆಗೆ ಜೊತೆಗಾರರಿಲ್ಲದ ಒಂಟಿತನಕ್ಕೆ ಬಲಿಯಾಗುವ ದುರಂತನಾಯಕನಾಗುವುದು ವಿಪರ್ಯಾಸವೇ ಸರಿ. ಇತಿಹಾಸ ತಜ್ಞರಿಂದ, ರಾಜಪಂಡಿತರಿಂದ  'ಹುಚ್ಚುದೊರೆ' ಎಂದು ಪಟ್ಟಗಟ್ಟಿಸಿಕೊಂಡವನ ರಾಜತಂತ್ರ ನೈಪುಣ್ಯತೆಯ ಹತ್ತಾರು ಮುಖಗಳನ್ನು ಪ್ರತ್ಯೇಕ ಅಂಕಪರದೆಯಿಲ್ಲದೇ  ಅನಾವರಣಗೊಳಿಸುವ ಈ ತುಘಲಕ್ ನಾಟಕ ನಮ್ಮ ಪೂರ್ವಾಗ್ರಹಗಳನ್ನು ಕಳಚಿಕೊಂಡು ಇತಿಹಾಸದೊಂದಿಗೆ ಮರು ಅನುಸಂಧಾನಕ್ಕಿಳಿಯುವ ಅಗತ್ಯವನ್ನು ಪ್ರತಿಪಾದಿಸುತ್ತದೆ. ಚರಿತ್ರೆ ಪುರಾಣಗಳ ಮೂಲಕ  ಭಾರತೀಯ ಸಂಸ್ಕೃತಿಯ ಅನನ್ಯತೆಯನ್ನು ಎತ್ತಿಹಿಡಿಯುವ ಕಾರ್ನಾಡರು ತಮ್ಮ ಪ್ರಥಮ ನಾಟಕ "ಯಯಾತಿ"ಗೆ ದೊರೆತ ಮನ್ನಣೆಯಿಂದಾಗಿ ಕನ್ನಡಕ್ಕೆ ದಕ್ಕುವಂತಾಗಿದ್ದು ಕನ್ನಡಿಗರ ಭಾಗ್ಯವೆಂದೇ ಹೇಳಬೇಕು. ಚಾರಿತ್ರಿಕ ಸತ್ಯಗಳಿಗೆ ನಿಷ್ಠವಾಗಿರುವ ವಸ್ತುವೊಂದನ್ನು ತಮ್ಮ ಸೃಜನಶೀಲತೆಯ ಮೂಸೆಯಲ್ಲಿ ಕರಗಿಸಿ ಒಪ್ಪವಿಟ್ಟು, ಪ್ರಮಾಣಬದ್ಧ ಸುಂದರ ಪುತ್ಥಳಿಯನ್ನಾಗಿ ನಿರ್ಮಿಸಿದ ಹೆಗ್ಗಳಿಕೆ ಕಾರ್ನಾಡರದು.
ಸರ್ವಾಧಿಕಾರದ ದರ್ಪವೋ, ಪ್ರಜಾರಕ್ಷಣೆಯ ಕಂಕಣಬದ್ಧತೆಯೊ,ರಾಜಕಾರಣದ ಚದುರಂಗದಾಟವೋ, ಧರ್ಮನಿರಪೇಕ್ಷತೆಯ ಒತ್ತಡವೋ, ಪರಿಸ್ಥಿತಿಯ ಸುಳಿಗೆ ಸಿಲುಕಿ ಸಾಮ್ರಾಜ್ಯವನ್ನಾಳುವ ರಾಜತಂತ್ರ ಪಾಂಡಿತ್ಯವೋ, ಪ್ರತಿಕ್ಷಣವೂ ಎಚ್ಚರವಾಗಿದ್ದು ತನ್ನನ್ನು ಮುನ್ನಡೆಸುತ್ತಿದ್ದ ತನ್ನೊಳಗಿನ ಆತ್ಮಸಾಕ್ಷಿಗೆ ಉತ್ತರವನ್ನು ಹುಡುಕುವ ಮಹತ್ವಾಕಾಂಕ್ಷೆಯೋ ಅಥವಾ ವಿಜ್ಞಾನದ ಸಂಯುಕ್ತವಸ್ತುವಿನಂತೆ ಇವೆಲ್ಲ ಗುಣಗಳನ್ನು  ಸಂಯೋಜಿಸಿಕೊಂಡು ವಿಭಿನ್ನವಾಗಿ ರೂಪುತಳೆದ ಚತುರ ಆಡಳಿತಗಾರನೊಬ್ಬನ ಲಕ್ಷಣವೋ ಗೊತ್ತಿಲ್ಲ, ಕಾರ್ನಾಡರು ಸೃಜಿಸಿದ ತುಘಲಕ್ ನ ಬಹುಮುಖ ವಿಸ್ತಾರದ ಅರ್ಥವ್ಯಾಪ್ತಿಯಂತೂ ಅನಂತವಾದುದು; ಮುಕ್ತವಾದುದು; ಅನನ್ಯವಾದುದು.
ಧರ್ಮಪಾಲನೆಯ ಕಾರಣಕ್ಕಾಗಿ ತನ್ನನ್ನು ಟೀಕಿಸಿದ ಧರ್ಮಗುರು ಶೇಖ್ ಇಮಾಮುದ್ದೀನ್ ನನ್ನು ತನ್ನೊಂದಿಗೆ ಹಗೆತನವಿಟ್ಟುಕೊಂಡಿದ್ದ ಸಾಮಂತ ಅರಸನೊಬ್ಬನೊಂದಿಗೆ ಸಂಧಾನಕ್ಕೆ ಕಳುಹಿಸಿ ರಣರಂಗದಲ್ಲಿ ಕೊಲ್ಲಿಸಿ ಟೀಕೆಯನ್ನು, ಟೀಕಾಕಾರನನ್ನೂ ಮಣ್ಣೊಳಗೆ ಹೂತುಹಾಕುವ  ತುಘಲಕ್ ನ ಪ್ರಯತ್ನ ಯಶಸ್ವಿಯಾಗುತ್ತದೆ. ತನ್ನ ಸಿಂಹಾಸನಕ್ಕೆ ಕುತ್ತಾಗುವರೆಂದು ತಂದೆ ಹಾಗೂ ತಮ್ಮನನ್ನು ಅಲ್ಲದೇ ತನ್ನ ಹಿತಚಿಂತಕ ನಜೀಬ್ ನನ್ನು ವಿಷವಿಕ್ಕಿ ಕೊಲ್ಲಿಸಿದ ಹೆತ್ತತಾಯಿಯನ್ನೂ ಅರಮನೆಯಿಂದ ಸಾವಿನ ಮನೆಗೆ ದೂಡುವ  ಸರ್ವಾಧಿಕಾರಿಯಾಗಿಯೂ ತುಘಲಕ್ ಗೋಚರಿಸುವ ಪರಿ ಈ ನಾಟಕದಲ್ಲಿ ವಿಲಕ್ಷಣವಾಗಿ ಮೂಡಿಬಂದಿದೆ. 
ತಾನು ಪ್ರಾರ್ಥನೆಯಲ್ಲಿರುವಾಗ ಧರ್ಮಾಂಧ ಅಮೀರರು ಹಾಗೂ ಪ್ರಾಣಸ್ನೇಹಿತ ಶಹಾಬುದ್ದೀನ್ ಹೂಡುವ ಕೊಲೆಯ ಸಂಚಿನಿಂದ ಪಾರಾಗುವ ದೊರೆ ಕೊಲೆಗಡುಕರನ್ನು  ಬೇಟೆಯಾಡುತ್ತಾನೆ. ಕರುಳುಬಳ್ಳಿಯೊಂದಿಗೆ ತಳುಕು ಹಾಕಿಕೊಂಡಿರುವ ಮಾನವ ಸಂಬಂಧಗಳನ್ನೇ ಬಲಿಕೊಡುವ ತುಘಲಕ್, ಒಂದು ಹಂತದಲ್ಲಿ ತಾನು ಆರಾಧಿಸುವ ಸಾಮ್ರಾಜ್ಯದ ನಂಟಿನಿಂದ,  ಏಕಾಂತದ ಪರದತ್ತ ಪಯಣಿಸಲು ಬೇಕಾದ ಪೂರ್ವಸಿದ್ಧತೆಗಳನ್ನು ಕೈಗೊಳ್ಳುವ ದಾಸರಂತೆ ಗ್ರಾಹ್ಯನಾದರೂ ಪಾಪಪ್ರಜ್ಞೆಯಿಂದಾಗಿ ಆ ಸದವಕಾಶವನ್ನು ಕಳೆದುಕೊಂಡ ನತದೃಷ್ಟನಾಗುತ್ತಾನೆ. ತುಘಲಕ್ ಒಬ್ಬ ವೃತ್ತಿಪರ ಅರಸನಂತೆ ಸಮರ್ಥ ಆಡಳಿತಗಾರನಾಗಿದ್ದ ಪ್ರಜಾಪರಿಪಾಲಕನಾಗಿದ್ದ ಎಂಬುದಕ್ಕೆ ನಾಟಕ ನಿದರ್ಶನಗಳನ್ನೊದಗಿಸುತ್ತದೆ. ರಾಜ್ಯಾಡಳಿತಕ್ಕಿಂತಲೂ ತುಘಲಕ್ ನ ವೈಯಕ್ತಿಕ ವ್ಯಕ್ತಿತ್ವವನ್ನು ಕುರಿತು ವಿವೇಚಿಸುವ ನಾಟಕ ಚಕ್ರವರ್ತಿಯೊಬ್ಬನ  ಅಂತರಂಗದ  ವ್ಯಾಪಾರವಿಲಾಸವನ್ನು ಮನೋಜ್ಞವಾಗಿ ತೆರೆದಿಡುತ್ತದೆ.
ತುಘಲಕ್ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಪಡೆಮೂಡಿ  ನವ್ಯತೆಯಿಂದ ಕಂಗೊಳಿಸಿದ ಕೃತಿರತ್ನ. ಈ ನಾಟಕದಲ್ಲಿ ತುಘಲಕ್ ಅತ್ಯಂತ ಕ್ರಿಯಾಶೀಲ ಹಾಗೂ ಚಲನಶೀಲವಾಗಿರುವ ಪ್ರಧಾನ ಪಾತ್ರ. ತನ್ನ ಮಾನಸಿಕ ಹಾಗೂ ಭಾವನಾತ್ಮಕ ತೊಳಲಾಟದೊಡನೆಯೂ ಒಬ್ಬ ಅತ್ಯುತ್ತಮ ಸಾಮ್ರಾಜ್ಯಶಾಹಿ ಎಂದು ಕರೆಸಿಕೊಳ್ಳಬಹುದಾದ ಪಾತ್ರವದು.
ರಾಜಕಾರಣದಲ್ಲಿ ಎದುರಾಗುವ ಸವಾಲುಗಳನ್ನೆಲ್ಲಾ ಮೆಟ್ಟಿನಿಂತು ತನ್ನ ಆಳ್ವಿಕೆಯ ಘನೋದ್ಧೇಶಗಳನ್ನು ಈಡೇರಿಸಿಕೊಳ್ಳುವ ತುಘಲಕ್ ಈ ಉದ್ದೇಶಗಳ ಸಫಲತೆಯಿಂದಾಗಿಯೇ ಅಂತಿಮವಾಗಿ ಒಂಟಿತನದ ಜಟಿಲವಾದ ಕಠಿಣ ಸಂದಿಗ್ಧತೆಗೆ ಒಳಗಾಗುವುದು ವಿಪರ್ಯಾಸವೇ ಸರಿ. ಚಕ್ರವರ್ತಿಯಾಗಿ ರಾಜ್ಯವನ್ನಾಳಬಲ್ಲ ಸರಳ ಚಾರಿತ್ರಿಕ ಪಾತ್ರವೊಂದು ರಾಜಕೀಯ, ಸಾಮಾಜಿಕ, ಧಾರ್ಮಿಕ ಸಮಸ್ಯೆಗಳನ್ನೆದುರಿಸುವ  ಭರದಲ್ಲಿ ಚಲನೆಯಲ್ಲಿರುವಂತೆಯೇ ಹೇಗೆಲ್ಲಾ ತನ್ನನ್ನು ಸಂಕೀರ್ಣತೆಗೊಡ್ಡಿಕೊಳ್ಳುತ್ತದೆ ಎಂಬುದಕ್ಕೆ ತುಘಲಕ್ ಸಾಕ್ಷಿಯಾಗುತ್ತಾನೆ. ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯ ವಿಪ್ಲವಗಳು, ಸಾಂಸ್ಕೃತಿಕ ಹಾಗೂ ಸಾಮಾಜಿಕ ಪಲ್ಲಟಗಳು, ಅಭಿವೃದ್ಧಿಯ ಹೆಸರಿನಲ್ಲಿ ನಡೆದ ನೈತಿಕ ಪತನಗಳು,  ಸಂಕ್ರಮಣ ಕಾಲದ ಸಾಹಿತ್ಯದ ಸ್ಥಿತ್ಯಂತರಗಳು ಕಾರ್ನಾಡರು ಈ ನಾಟಕ ರಚಸುವಂತೆ ಭೂಮಿಕೆಯನ್ನೊದಗಿಸಿರಬೇಕು. ವಸಾಹತೋತ್ತರ ಕಾಲಘಟ್ಟದ ಚಿಂತನೆಯ ದಟ್ಟ  ಪ್ರಭಾವವನ್ನು 'ತುಘಲಕ್' ಅಲ್ಲದೇ ಕಾರ್ನಾಡರ ಇತರೆ ನಾಟಕಗಳಲ್ಲಿಯೂ ಸ್ಪಷ್ಟವಾಗಿ ಕಾಣಬಹುದು.   ಇವರ "ನಾಗಮಂಡಲ" ನಾಟಕದ  ವಸ್ತುವಿನ ಮೇಲೆ ನಮ್ಮ  ಪರಂಪರೆ ಹಾಗೂ ಗ್ರಾಮೀಣ ಸಂಸ್ಕೃತಿಯ ಗಾಢವಾದ ಛಾಯೆಯಿರುವುದನ್ನು ಗುರುತಿಸಬಹುದಾಗಿದೆ. ಜಾನಪದ ಸಂಸ್ಕೃತಿಯನ್ನೇ ಜೀವಾಳವಾಗಿಟ್ಡುಕೊಂಡ 'ನಾಗಮಂಡಲ' ಅವರ ಅನನ್ಯ ರಚನೆಗಳಲ್ಲಿ ವಿಭಿನ್ನ. ಭಾರತೀಯ ಪರಂಪರೆ ಹಾಗೂ ಸಂಸ್ಕೃತಿಯನ್ನು ಗೌರವಿಸುವ ಇವರ  ನಾಗಮಂಡಲ ಚಂದ್ರಶೇಖರ ಕಂಬಾರರವರ ನಾಟಕ ಹಾಗೂ  ಕಾದಂಬರಿಗಳನ್ನು ನೆನಪಿಸುವಂತೆ ಮಾಡುತ್ತದೆ. ತಾವು ಬದುಕಿದ ನೆಲಮೂಲ ಸಂಸ್ಕೃತಿಯ ಪ್ರಭಾವಳಿಯಲ್ಲಿ ವಿಶಿಷ್ಟ ರೂಹು ಪಡೆದ ಇವರ ಭಾಷೆಯಂತೂ ಧಾರವಾಡ ಹಾಗೂ ಬೆಳಗಾವಿ ಕನ್ನಡಗಳ ಸಮ್ಮಿಳಿತದಿಂದ ಸವಿಜೇನಿನ ಸಿಹಿಯನ್ನು ಪಡೆದುಕೊಂಡಿದೆ. ಸಾಂಸ್ಕೃತಿಕ ನಗರಿಯಾದ ಧಾರವಾಡ ಹಾಗೂ ಮಲೆನಾಡ ಸೆರಗಿನ ಬೆಳಗಾವಿಯ ಮಣ್ಣಿನ ಸೊಗಡಿನ ಸುಗಂಧವನ್ನು ಬೀರುವ ಇವರ ಭಾಷಾಪ್ರೌಢಿಮೆ ಬೆರಗುಗೊಳಿಸುವಂತಹುದು. ಸಿನೇಮಾ, ನಟನೆ, ನಿರ್ದೇಶನ ಕ್ಷೇತ್ರಗಳು ಕೈಬೀಸಿ ಕರೆದಾಗ  ಕಲಾವಿದನ ಪರಕಾಯ ಪ್ರವೇಶವನ್ನು ಮಾಡಿ ಕಲಾಲೋಕದಲ್ಲಿಯೂ ಸೈ ಎನಿಸಿಕೊಂಡ ಧೀಮಂತ ವ್ಯಕ್ತಿತ್ವ ಕಾರ್ನಾಡರದು. "ಗಾನಯೋಗಿ ಪಂಚಾಕ್ಷರಿ ಗವಾಯಿಗಳು' ಸಿನೆಮಾದಲ್ಲಿನ ಅವರ ಗುರು ಪಾತ್ರವಂತೂ  ಜನಮನಸೂರೆಗೊಂಡ ಬಗೆಯೇ ವರ್ಣಿಸಲಸದಳ.  ಯು. ಆರ್. ಅನಂತಮೂರ್ತಿಯವರ 'ಸಂಸ್ಕಾರ' ಕಾದಂಬರಿ ಆಧಾರಿತ ಚಲನಚಿತ್ರದಲ್ಲಿನ  ಪ್ರಾಣೇಶಾಚಾರ್ಯರ ಪಾತ್ರವು ಕನ್ನಡಕ್ಕೆ ಪ್ರಥಮ ಸ್ವರ್ಣಕಮಲ ಗೌರವವನ್ನು  ತಂದುಕೊಟ್ಟ ಹೆಗ್ಗಳಿಕೆ ಹೊಂದಿದೆ.
ತುಘಲಕ್ ಕನ್ಮಡ ವಾಙ್ಮಯ ಲೋಕದ ಅದ್ವಿತೀಯ ನಾಟಕರತ್ನಗಳಲ್ಲಿ ಅನನ್ಯವಾದುದು.  ವರ್ತಮಾನದ ದೇಶ ದೇಶಗಳ ಮಧ್ಯದ ಜಾಗತಿಕ ವಿವಾದದ ವೈಮನಸ್ಸುಗಳಿಗೂ ಕನ್ನಡಿ ಹಿಡಿದು ಪರಿಹಾರಗಳನ್ನು ಸೂಚಿಸುವಂತಿರುವ ಈ ನಾಟಕದ ಪ್ರಸ್ತುತತೆ ಗಿರೀಶ ಕಾರ್ನಾಡರವರ ಪ್ರತಿಭಾವಿಲಾಸದ ವೈಶಾಲ್ಯತೆಯ ದೂರದೃಷ್ಟಿಗೆ ಸಾಕ್ಷಿಯಾಗಿದೆ. ಇಂತಹ ಅಪೂರ್ವ ಪ್ರತಿಭಾಸಂಪನ್ನರನ್ನು ಕಳೆದುಕೊಂಡ ಭಾರತೀಯ ಸಾಂಸ್ಕೃತಿಕ ಲೋಕ ಬಡವಾಗಿದೆ.ಬಾಲ್ಯದಲ್ಲಿ ಗೆಳೆಯರಿಂದ ಬಣ್ಣಿಸಲ್ಪಟ್ಟ ಕಾರ್ನಾಡರೆಂಬ ಸಿಹಿಯಾದ "ಮಾವಿನ ತಳಿರು" ಇಹದ ಮಾಮರದಿಂದ ಬೇರ್ಪಟ್ಟಿದೆ.  ಕರುನಾಡಿನ ಅಜರಾಮರ ಕಲೋಪಾಸಕ ಕಾರ್ನಾಡರಿಗೆ ಶ್ರದ್ಧಾಂಜಲಿ.


'ತುಘಲಕ್'ನೊಂದಿಗೆ  ಮಾತಿಗಿಳಿದಾಗ...
ಪುರಾಣವನ್ನಾಧರಿಸಿದ 'ಯಯಾತಿ', ಚರಿತ್ರೆಯನ್ನಾಧರಿಸಿದ 'ತುಘಲಕ್' ನಂತಹ ಶ್ರೇಷ್ಠ ನಾಟಕಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ ಗಿರೀಶ ಕಾರ್ನಾಡರು ಕನ್ನಡಕ್ಕೆ ಪ್ರಥಮ ಸ್ವರ್ಣಕಮಲ ಪ್ರಶಸ್ತಿ ತಂದುಕೊಟ್ಟು ಕನ್ನಡ ರಂಗಭೂಮಿ ಹಾಗೂ ಸಿನೇಮಾರಂಗವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಿದ ಅಪ್ರತಿಮ ಸಾಧಕರು. ಅವರ ೨೭ ನೇಯ ವಯಸ್ಸಿನಲ್ಲಿಯೇ ರಚಿತವಾದ ತುಘಲಕ್ ಅವರನ್ನು ಕೀರ್ತಿಯ ಶಿಖರಕ್ಕೇರಿಸಿದ ನಾಟಕ.ನನ್ನ ಹೃನ್ಮನಗಳನ್ನು ಸೆಳೆದ ನಾಟಕಗಳಲ್ಲಿ ತುಘಲಕ್ ಅತ್ಯಂತ ವಿಶಿಷ್ಟವಾದುದು.ಇದರ ರಂಗಪ್ರಯೋಗವಂತೂ ನನ್ನನ್ನು ಗತಕಾಲದ ಚರಿತ್ರೆಯತ್ತ ಹೆಜ್ಜೆ ಹಾಕಿ ಶೋಧನೆಗಿಳಿಯುವಂತೆ ಪ್ರೇರೇಪಿಸಿತು.ಇತಿಹಾಸದೊಂದಿಗಿನ ಅನುಸಂಧಾನವೇ ಈ ನಾಟಕದ ಸೃಷ್ಟಿಯ ರಹಸ್ಯಗಳಲ್ಲೊಂದು. ತುಘಲಕ್  ವಿಶಿಷ್ಟವಾದ  ಚಿಂತನೆಯ ಹೊಸ ಹೊಳವುಗಳನ್ನು ಸ್ಫುರಿಸಬಲ್ಲ ಮಾರ್ಗದರ್ಶಿ ನಾಟಕವಾಗಿದೆ. ದೌಲತಾಬಾದ್ ನಿಂದ ದೆಹಲಿಗೆ ದೆಹಲಿಯಿಂದ ದೌಲತಾಬಾದ್ ಗೆ ರಾಜಧಾನಿಯ ವರ್ಗಾವಣೆ, ಬೆಳ್ಳಿಯ ನಾಣ್ಯಗಳ ಬದಲಾಗಿ ತಾಮ್ರದ ನಾಣ್ಯಗಳನ್ನು ಜಾರಿಗೆ ತರುವಂತಹ  ದುಡುಕಿನ ಜನಪರ ಯೋಜನೆಗಳನ್ನು ಜಾರಿಗೆ ತಂದು ವಿಫಲನಾದ ಮೂರ್ಖ ದೊರೆಯೆಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ  ತುಘಲಕ್ ನನ್ನು ರಂಗದ ಮೇಲೆ ನಿಲ್ಲಿಸಿ ಇತಿಹಾಸದ ಮಣ್ಣಿನಲ್ಲಿ ಹೂತುಹೋಗಿರುವ  ಅಪರೂಪದ ಚಕ್ರವರ್ತಿಯೆಂದು ದೃಶ್ಯೀಕರಿಸಿ ಸಾರುವ ನಾಟಕ ವೆಂದರೆ ಅದು ಗಿರೀಶ ಕಾರ್ನಾಡರ ತುಘಲಕ್. ರಾಜಕೀಯದ ಚದುರಂಗದಾಟವನ್ನು  ಬಲ್ಲವನಾಗಿದ್ದ ಚಾಣಾಕ್ಷ ತುಘಲಕ್ ತನ್ನ ಸಾಮ್ರಾಜ್ಯದ ಉಳಿವಿಗಾಗಿ  ಚಾಣಕ್ಯನ ತಂತ್ರಗಳ ದಾಳಗಳನ್ನುರುಳಿಸಿ ಗೆಲ್ಲುವ ರಾಜತಂತ್ರ ನಿಪುಣನೂ ಆಗಿದ್ದನೆಂಬುದಕ್ಕೆ ನಾಟಕ ನಿದರ್ಶನಗಳನ್ನು ಒದಗಿಸುತ್ತದೆ.ಗಿರೀಶ ಕಾರ್ನಾಡರು "ತುಘಲಕ್ ರಾಜಧಾನಿಯನ್ನು ಪದೇ ಪದೇ ಬದಲಾಯಿಸುವುದರ ಜೊತೆಗೆ ತನ್ನ ಸಾಮ್ರಾಜ್ಯದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಿಷೇಧಿಸಿದ್ದ ಅಚ್ಚರಿಯ ಸಂಗತಿ ಈ ನಾಟಕ ಸೃಷ್ಟಿಸಲೊಂದು ಕಾರಣವಾಯಿತು.ಇತಿಹಾಸದ  ಗರ್ಭದಲ್ಲಡಗಿದ್ದ ಈ ಚಿಕ್ಕ ಎಳೆಯೇ ನನ್ನ ನಾಟಕಕ್ಕೆ ಪ್ರೇರಣೆಯನ್ನೊದಗಿಸಿತು" ಎಂದು ನಾಟಕ ರಚನೆಯಾದ ಸಂದರ್ಭವನ್ನು ಕುರಿತು ವಿವೇಚಿಸುತ್ತಾರೆ.
ನಿಜ.ಕೃತಿಯೊಂದು ಜನ್ಮತಾಳಲು ಮಹತ್ ಸಂಗತಿಗಳೇ ಘಟಿಸಬೇಕೆಂದೇನಿಲ್ಲ,ತನ್ನ ಬಾಣದ ಮರ್ಮಾಘಾತದಿಂದ ತತ್ತರಿಸಿ ನಲುಗುವ ಕ್ರೌಂಚಪಕ್ಷಿಗಳ ನರಳಾಟದಿಂದ ಹೊಮ್ಮಿದ ಮಾನಿಷಾದ ಶ್ಲೋಕವಾಗಿರಬಹುದು,  ಬೀದಿಯ ಪಕ್ಕ ಮೈಯರಳಿಸಿಕೊಂಡು ನಿಂತ  ಹೆಸರಿಲ್ಲದ ಹೂಗಳ ಸೌಂದರ್ಯವಿರಬಹುದು, ಸೂರ್ಯನ ಹೊಂಗಿರಣಗಳಿಗೆ ಮೈಚಾಚಿಕೊಂಡು ಹರಡಿದ ಸರೋವರವರದ ನೋಟವಿರಬಹುದು, ವಸಂತಕ್ಕೊಮ್ಮೆ ಭುವಿಯಲಂಕರಿಸುವ ಶ್ರಾವಣದ ಚಿಗುರಿರಬಹುದು, ಮೂಡಲಮನೆಯ ಬಾಗಿಲು ತೆರೆದು ರವಿ ಚಿಮುಕಿಸುವ ಇಬ್ಬನಿಯ ಹನಿಗಳಾಟದಂತಹ ಚಿಕ್ಕ ಸಂಗತಿಗಳೂ ಬರಹಗಾರನಲ್ಲಿ ಕೃತಿ ಸೃಷ್ಟಿಯ ಸ್ಪೂರ್ತಿಯ ಚಿಲುಮೆಗಳನ್ನು ಚಿಮ್ಮಿಸಬಲ್ಲವು. ಇತಿಹಾಸ ಹಾಗೂ ಪುರಾಣಗಳನ್ನು ತುಸು ಹೆಚ್ಚಾಗಿಯೇ ಪ್ರೀತಿಸುವ ಗಿರೀಶ ಕಾರ್ನಾಡರನ್ನು ವಿಲಕ್ಷಣ ವ್ಯಕ್ತಿತ್ವದ ತುಘಲಕ್ ಸೆಳೆದದ್ದರಲ್ಲಿ ಅಚ್ಚರಿಯೇನಲ್ಲ.
:ತುಘಲಕ್' ನಾಟಕ ಸಮಕಾಲೀನ ರಾಜಕೀಯ, ಸಾಮಾಜಿಕ ಸಂದರ್ಭಗಳ ಅವಲೋಕನಕ್ಕೆ ಮುನ್ನುಡಿ ಬರೆಯುವಂತಿದೆ.  ವ್ಯಕ್ತಿಯು ಭಾವತರಂಗಗಳೊಂದಿಗೆ  ಮುಖಾಮುಖಿಯಾಗುವ ಬಗೆಯನ್ನು ತುಘಲಕ್ ನ ಮುಖೇನ ತೆರೆದಿಡುವ ನಾಟಕವು ಚರಿತ್ರೆಯ ಕೇಂದ್ರವಾದ ವ್ಯಕ್ತಿಯನ್ನು ಮರುವ್ಯಾಖ್ಯಾನಿಸುತ್ತದೆ. ೧೪ ನೇ ಶತಮಾನದಲ್ಲಿಯೇ  ಪ್ರಜಾಪರ ಭಾವೈಕ್ಯತೆಯ ಶಾಂತಿಯ ಬನವನ್ನಾಗಿ ತನ್ನ ಸಾಮ್ರಾಜ್ಯವನ್ನು  ಸೃಷ್ಟಿಸಬೇಕೆಂಬ ಹಂಬಲದ ಈ ಸರ್ವಾಧಿಕಾರಿ,ತನಗೆ ಎದುರಾದ ಧರ್ಮ ಹಾಗೂ ರಾಜಕೀಯದೊಂದಿಗಿನ  ಸಂಘರ್ಷಗಳನ್ನು ಚಾಣಾಕ್ಷತನದಿಂದ  ಮೆಟ್ಟಿನಿಂತರೂ ಕೊನೆಗೆ ಜೊತೆಗಾರರಿಲ್ಲದ ಒಂಟಿತನಕ್ಕೆ ಬಲಿಯಾಗುವ ದುರಂತನಾಯಕನಾಗುವುದು ವಿಪರ್ಯಾಸವೇ ಸರಿ. ಇತಿಹಾಸ ತಜ್ಞರಿಂದ, ರಾಜಪಂಡಿತರಿಂದ  'ಹುಚ್ಚುದೊರೆ' ಎಂದು ಪಟ್ಟಗಟ್ಟಿಸಿಕೊಂಡವನ ರಾಜತಂತ್ರ ನೈಪುಣ್ಯತೆಯ ಹತ್ತಾರು ಮುಖಗಳನ್ನು ಪ್ರತ್ಯೇಕ ಅಂಕಪರದೆಯಿಲ್ಲದೇ  ಅನಾವರಣಗೊಳಿಸುವ ಈ ತುಘಲಕ್ ನಾಟಕ ನಮ್ಮ ಪೂರ್ವಾಗ್ರಹಗಳನ್ನು ಕಳಚಿಕೊಂಡು ಇತಿಹಾಸದೊಂದಿಗೆ ಮರು ಅನುಸಂಧಾನಕ್ಕಿಳಿಯುವ ಅಗತ್ಯವನ್ನು ಪ್ರತಿಪಾದಿಸುತ್ತದೆ.ಚರಿತ್ರೆ ಪುರಾಣಗಳ ಮೂಲಕ  ಭಾರತೀಯ ಸಂಸ್ಕೃತಿಯ ಅನನ್ಯತೆಯನ್ನು ಎತ್ತಿಹಿಡಿಯುವ ಕಾರ್ನಾಡರು ತಮ್ಮ ಪ್ರಥಮ ನಾಟಕ "ಯಯಾತಿ"ಗೆ ದೊರೆತ ಮನ್ನಣೆಯಿಂದಾಗಿ ಕನ್ನಡಕ್ಕೆ ದಕ್ಕುವಂತಾಗಿದ್ದು ಕನ್ನಡಿಗರ ಭಾಗ್ಯವೆಂದೇ ಹೇಳಬೇಕು. ಚಾರಿತ್ರಿಕ ಸತ್ಯಗಳಿಗೆ ನಿಷ್ಠವಾಗಿರುವ ವಸ್ತುವೊಂದನ್ನು ತಮ್ಮ ಸೃಜನಶೀಲತೆಯ ಮೂಸೆಯಲ್ಲಿ ಕರಗಿಸಿ ಒಪ್ಪವಿಟ್ಟು, ಪ್ರಮಾಣಬದ್ಧ ಸುಂದರ ಪುತ್ಥಳಿಯನ್ನಾಗಿ ನಿರ್ಮಿಸಿದ ಹೆಗ್ಗಳಿಕೆ ಕಾರ್ನಾಡರದು.
ಸರ್ವಾಧಿಕಾರದ ದರ್ಪವೋ, ಪ್ರಜಾರಕ್ಷಣೆಯ ಕಂಕಣಬದ್ಧತೆಯೊ,ರಾಜಕಾರಣದ ಚದುರಂಗದಾಟವೋ, ಧರ್ಮನಿರಪೇಕ್ಷತೆಯ ಒತ್ತಡವೋ, ಪರಿಸ್ಥಿತಿಯ ಸುಳಿಗೆ ಸಿಲುಕಿ ಸಾಮ್ರಾಜ್ಯವನ್ನಾಳುವ ರಾಜತಂತ್ರ ಪಾಂಡಿತ್ಯವೋ, ಪ್ರತಿಕ್ಷಣವೂ ಎಚ್ಚರವಾಗಿದ್ದು ತನ್ನನ್ನು ಮುನ್ನಡೆಸುತ್ತಿದ್ದ ತನ್ನೊಳಗಿನ ಆತ್ಮಸಾಕ್ಷಿಗೆ ಉತ್ತರವನ್ನು ಹುಡುಕುವ ಮಹತ್ವಾಕಾಂಕ್ಷೆಯೋ ಅಥವಾ ವಿಜ್ಞಾನದ ಸಂಯುಕ್ತವಸ್ತುವಿನಂತೆ ಇವೆಲ್ಲ ಗುಣಗಳನ್ನು  ಸಂಯೋಜಿಸಿಕೊಂಡು ವಿಭಿನ್ನವಾಗಿ ರೂಪುತಳೆದ ಚತುರ ಆಡಳಿತಗಾರನೊಬ್ಬನ ಲಕ್ಷಣವೋ ಗೊತ್ತಿಲ್ಲ, ಕಾರ್ನಾಡರು ಸೃಜಿಸಿದ ತುಘಲಕ್ ನ ಬಹುಮುಖ ವಿಸ್ತಾರದ ಅರ್ಥವ್ಯಾಪ್ತಿಯಂತೂ ಅನಂತವಾದುದು; ಮುಕ್ತವಾದುದು; ಅನನ್ಯವಾದುದು.
ಧರ್ಮಪಾಲನೆಯ ಕಾರಣಕ್ಕಾಗಿ ತನ್ನನ್ನು ಟೀಕಿಸಿದ ಧರ್ಮಗುರು ಶೇಖ್ ಇಮಾಮುದ್ದೀನ್ ನನ್ನು ತನ್ನೊಂದಿಗೆ ಹಗೆತನವಿಟ್ಟುಕೊಂಡಿದ್ದ ಸಾಮಂತ ಅರಸನೊಬ್ಬನೊಂದಿಗೆ ಸಂಧಾನಕ್ಕೆ ಕಳುಹಿಸಿ ರಣರಂಗದಲ್ಲಿ ಕೊಲ್ಲಿಸಿ ಟೀಕೆಯನ್ನು,ಟೀಕಾಕಾರನನ್ನೂ ಮಣ್ಣೊಳಗೆ ಹೂತುಹಾಕುವ  ತುಘಲಕ್ ನ ಪ್ರಯತ್ನ ಯಶಸ್ವಿಯಾಗುತ್ತದೆ. ತನ್ನ ಸಿಂಹಾಸನಕ್ಕೆ ಕುತ್ತಾಗುವರೆಂದು ತಂದೆ ಹಾಗೂ ತಮ್ಮನನ್ನು ಅಲ್ಲದೇ ತನ್ನ ಹಿತಚಿಂತಕ ನಜೀಬ್ ನನ್ನು ವಿಷವಿಕ್ಕಿ ಕೊಲ್ಲಿಸಿದ ಹೆತ್ತತಾಯಿಯನ್ನೂ ಅರಮನೆಯಿಂದ ಸಾವಿನ ಮನೆಗೆ ದೂಡುವ  ಸರ್ವಾಧಿಕಾರಿಯಾಗಿಯೂ ತುಘಲಕ್ ಗೋಚರಿಸುವ ಪರಿ ಈ ನಾಟಕದಲ್ಲಿ ವಿಲಕ್ಷಣವಾಗಿ ಮೂಡಿಬಂದಿದೆ. 
ತಾನು ಪ್ರಾರ್ಥನೆಯಲ್ಲಿರುವಾಗ   ಧರ್ಮಾಂಧ ಅಮೀರರು ಹಾಗೂ ಪ್ರಾಣಸ್ನೇಹಿತ ಶಹಾಬುದ್ದೀನ್ ಹೂಡುವ ಕೊಲೆಯ ಸಂಚಿನಿಂದ ಪಾರಾಗುವ ದೊರೆ ಕೊಲೆಗಡುಕರನ್ನು  ಬೇಟೆಯಾಡುತ್ತಾನೆ.ಕರುಳುಬಳ್ಳಿಯೊಂದಿಗೆ ತಳುಕು ಹಾಕಿಕೊಂಡಿರುವ ಮಾನವ ಸಂಬಂಧಗಳನ್ನೇ ಬಲಿಕೊಡುವ ತುಘಲಕ್, ಒಂದು ಹಂತದಲ್ಲಿ ತಾನು ಆರಾಧಿಸುವ ಸಾಮ್ರಾಜ್ಯದ ನಂಟಿನಿಂದ,  ಏಕಾಂತದ ಪರದತ್ತ ಪಯಣಿಸಲು ಬೇಕಾದ ಪೂರ್ವಸಿದ್ಧತೆಗಳನ್ನು ಕೈಗೊಳ್ಳುವ ದಾಸರಂತೆ ಗ್ರಾಹ್ಯನಾದರೂ ಪಾಪಪ್ರಜ್ಞೆಯಿಂದಾಗಿ ಆ ಸದವಕಾಶವನ್ನು ಕಳೆದುಕೊಂಡ ನತದೃಷ್ಟನಾಗುತ್ತಾನೆ. ತುಘಲಕ್ ಒಬ್ಬ ವೃತ್ತಿಪರ ಅರಸನಂತೆ ಸಮರ್ಥ ಆಡಳಿತಗಾರನಾಗಿದ್ದ ಪ್ರಜಾಪರಿಪಾಲಕನಾಗಿದ್ದ ಎಂಬುದಕ್ಕೆ ನಾಟಕ ನಿದರ್ಶನಗಳನ್ನೊದಗಿಸುತ್ತದೆ. ರಾಜ್ಯಾಡಳಿತಕ್ಕಿಂತಲೂ ತುಘಲಕ್ ನ ವೈಯಕ್ತಿಕ ವ್ಯಕ್ತಿತ್ವವನ್ನು ಕುರಿತು ವಿವೇಚಿಸುವ ನಾಟಕ ಚಕ್ರವರ್ತಿಯೊಬ್ಬನ  ಅಂತರಂಗದ  ವ್ಯಾಪಾರವಿಲಾಸವನ್ನು ಮನೋಜ್ಞವಾಗಿ ತೆರೆದಿಡುತ್ತದೆ.
ತುಘಲಕ್ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಪಡೆಮೂಡಿ  ನವ್ಯತೆಯಿಂದ ಕಂಗೊಳಿಸಿದ ಕೃತಿರತ್ನ. ಈ ನಾಟಕದಲ್ಲಿ ತುಘಲಕ್ ಅತ್ಯಂತ ಕ್ರಿಯಾಶೀಲ ಹಾಗೂ ಚಲನಶೀಲವಾಗಿರುವ ಪ್ರಧಾನ ಪಾತ್ರ. ತನ್ನ ಮಾನಸಿಕ ಹಾಗೂ ಭಾವನಾತ್ಮಕ ತೊಳಲಾಟದೊಡನೆಯೂ ಒಬ್ಬ ಅತ್ಯುತ್ತಮ ಸಾಮ್ರಾಜ್ಯಶಾಹಿ ಎಂದು ಕರೆಸಿಕೊಳ್ಳಬಹುದಾದ ಪಾತ್ರವದು.
ರಾಜಕಾರಣದಲ್ಲಿ ಎದುರಾಗುವ ಸವಾಲುಗಳನ್ನೆಲ್ಲಾ ಮೆಟ್ಟಿನಿಂತು ತನ್ನ ಆಳ್ವಿಕೆಯ ಘನೋದ್ಧೇಶಗಳನ್ನು ಈಡೇರಿಸಿಕೊಳ್ಳುವ ತುಘಲಕ್ ಈ ಉದ್ದೇಶಗಳ ಸಫಲತೆಯಿಂದಾಗಿಯೇ ಅಂತಿಮವಾಗಿ ಒಂಟಿತನದ ಜಟಿಲವಾದ ಕಠಿಣ ಸಂದಿಗ್ಧತೆಗೆ ಒಳಗಾಗುವುದು ವಿಪರ್ಯಾಸವೇ ಸರಿ. ಚಕ್ರವರ್ತಿಯಾಗಿ ರಾಜ್ಯವನ್ನಾಳಬಲ್ಲ ಸರಳ ಚಾರಿತ್ರಿಕ ಪಾತ್ರವೊಂದು ರಾಜಕೀಯ, ಸಾಮಾಜಿಕ, ಧಾರ್ಮಿಕ ಸಮಸ್ಯೆಗಳನ್ನೆದುರಿಸುವ  ಭರದಲ್ಲಿ ಚಲನೆಯಲ್ಲಿರುವಂತೆಯೇ ಹೇಗೆಲ್ಲಾ ತನ್ನನ್ನು ಸಂಕೀರ್ಣತೆಗೊಡ್ಡಿಕೊಳ್ಳುತ್ತದೆ ಎಂಬುದಕ್ಕೆ ತುಘಲಕ್ ಸಾಕ್ಷಿಯಾಗುತ್ತಾನೆ. ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯ ವಿಪ್ಲವಗಳು, ಸಾಂಸ್ಕೃತಿಕ ಹಾಗೂ ಸಾಮಾಜಿಕ ಪಲ್ಲಟಗಳು,ಅಭಿವೃದ್ಧಿಯ ಹೆಸರಿನಲ್ಲಿ ನಡೆದ ನೈತಿಕ ಪತನಗಳು,  ಸಂಕ್ರಮಣ ಕಾಲದ ಸಾಹಿತ್ಯದ ಸ್ಥಿತ್ಯಂತರಗಳು ಕಾರ್ನಾಡರು ಈ ನಾಟಕ ರಚಸುವಂತೆ ಭೂಮಿಕೆಯನ್ನೊದಗಿಸಿರಬೇಕು. 'ತುಘಲಕ್' ಅಲ್ಲದೇ ವಸಾಹತೋತ್ತರ ಕಾಲಘಟ್ಟದ ಚಿಂತನೆಯ ದಟ್ಟ  ಪ್ರಭಾವವನ್ನು 'ತುಘಲಕ್' ಅಲ್ಲದೇ ಕಾರ್ನಾಡರ ಇತರೆ ನಾಟಕಗಳಲ್ಲಿಯೂ ಸ್ಪಷ್ಟವಾಗಿ ಕಾಣಬಹುದು.   ಇವರ "ನಾಗಮಂಡಲ" ನಾಟಕದ  ವಸ್ತುವಿನ ಮೇಲೆ ನಮ್ಮ  ಪರಂಪರೆ ಹಾಗೂ ಗ್ರಾಮೀಣ ಸಂಸ್ಕೃತಿಯ ಗಾಢವಾದ ಛಾಯೆಯಿರುವುದನ್ನು ಗುರುತಿಸಬಹುದಾಗಿದೆ. ಜಾನಪದ ಸಂಸ್ಕೃತಿಯನ್ನೇ ಜೀವಾಳವಾಗಿಟ್ಡುಕೊಂಡ 'ನಾಗಮಂಡಲ' ಅವರ ಅನನ್ಯ ರಚನೆಗಳಲ್ಲಿ ವಿಭಿನ್ನ. ಭಾರತೀಯ ಪರಂಪರೆ ಹಾಗೂ ಸಂಸ್ಕೃತಿಯನ್ನು ಗೌರವಿಸುವ ಇವರ  ನಾಗಮಂಡಲ ಚಂದ್ರಶೇಖರ ಕಂಬಾರರವರ ನಾಟಕ ಹಾಗೂ  ಕಾದಂಬರಿಗಳನ್ನು ನೆನಪಿಸುವಂತೆ ಮಾಡುತ್ತದೆ. ತಾವು ಬದುಕಿದ ನೆಲಮೂಲ ಸಂಸ್ಕೃತಿಯ ಪ್ರಭಾವಳಿಯಲ್ಲಿ ವಿಶಿಷ್ಟ ರೂಹು ಪಡೆದ ಇವರ ಭಾಷೆಯಂತೂ ಧಾರವಾಡ ಹಾಗೂ ಬೆಳಗಾವಿ ಕನ್ನಡಗಳ ಸಮ್ಮಿಳಿತದಿಂದ ಸವಿಜೇನಿನ ಸಿಹಿಯನ್ನು ಪಡೆದುಕೊಂಡಿದೆ. ಸಾಂಸ್ಕೃತಿಕ ನಗರಿಯಾದ ಧಾರವಾಡ ಹಾಗೂ ಮಲೆನಾಡ ಸೆರಗಿನ ಬೆಳಗಾವಿಯ ಮಣ್ಣಿನ ಸೊಗಡಿನ ಸುಗಂಧವನ್ನು ಬೀರುವ ಇವರ ಭಾಷಾಪ್ರೌಢಿಮೆ ಬೆರಗುಗೊಳಿಸುವಂತಹುದು. ಸಿನೇಮಾ, ನಟನೆ, ನಿರ್ದೇಶನ ಕ್ಷೇತ್ರಗಳು ಕೈಬೀಸಿ ಕರೆದಾಗ  ಕಲಾವಿದನ ಪರಕಾಯ ಪ್ರವೇಶವನ್ನು ಮಾಡಿ ಕಲಾಲೋಕದಲ್ಲಿಯೂ ಸೈ ಎನಿಸಿಕೊಂಡ ಧೀಮಂತ ವ್ಯಕ್ತಿತ್ವ ಕಾರ್ನಾಡರದು. "ಗಾನಯೋಗಿ ಪಂಚಾಕ್ಷರಿ ಗವಾಯಿಗಳು' ಸಿನೆಮಾದಲ್ಲಿನ ಅವರ ಪಾತ್ರವಂತೂ  ಜನಮನಸೂರೆಗೊಂಡ ಬಗೆಯೇ ವರ್ಣಿಸಲಸದಳ.  ಯು. ಆರ್. ಅನಂತಮೂರ್ತಿಯವರ 'ಸಂಸ್ಕಾರ' ಕಾದಂಬರಿ ಆಧಾರಿತ ಚಲನಚಿತ್ರದಲ್ಲಿನ  ಪ್ರಾಣೇಶಾಚಾರ್ಯರ ಪಾತ್ರವಂತೂ ಕನ್ನಡಕ್ಕೆ ಪ್ರಥಮ ಸ್ವರ್ಣಕಮಲ ಗೌರವವನ್ನು  ತಂದುಕೊಟ್ಟ ಹೆಗ್ಗಳಿಕೆ ಹೊಂದಿದೆ.
ತುಘಲಕ್ ಕನ್ಮಡ ವಾಙ್ಮಯ ಲೋಕದ ಅದ್ವಿತೀಯ ನಾಟಕರತ್ನಗಳಲ್ಲಿ ಅನನ್ಯವಾದುದು. ದೇಶ ದೇಶಗಳ ಮಧ್ಯದ ಜಾಗತಿಕ ವಿವಾದದ ವೈಮನಸ್ಸುಗಳಿಗೂ ಕನ್ನಡಿ ಹಿಡಿಯುವಂತಿರುವ ಈ ನಾಟಕದ ಪ್ರಸ್ತುತತೆ ಗಿರೀಶ ಕಾರ್ನಾಡರವರ ಪ್ರತಿಭಾವಿಲಾಸದ ವೈಶಾಲ್ಯತೆಯ ದೂರದೃಷ್ಟಿಗೆ ಸಾಕ್ಷಿಯಾಗಿದೆ. ಇಂತಹ ಅಪೂರ್ವ ಪ್ರತಿಭಾಸಂಪನ್ನರನ್ನು ಕಳೆದುಕೊಂಡ ಭಾರತೀಯ ಸಾಂಸ್ಕೃತಿಕ ಲೋಕ ಬಡವಾಗಿದೆ.ಬಾಲ್ಯದಲ್ಲಿ ಗೆಳೆಯರಿಂದ ಬಣ್ಣಿಸಲ್ಪಟ್ಟ ಕಾರ್ನಾಡರೆಂಬ "ಮಾವಿನ ತಳಿರು" ಇಹದ ಮರದಿಂದ ಬೇರ್ಪಟ್ಟಿದೆ.  ಕರುನಾಡಿನ ಅಜರಾಮರ ಕಲೋಪಾಸಕ ಕಾರ್ನಾಡರಿಗೆ ಶ್ರದ್ಧಾಂಜಲಿ.
x

Tuesday 11 June 2019

"ತುಘಲಕ್" ನೊಂದಿಗೆ ಮಾತಿಗಿಳಿದಾಗ...
ಪುರಾಣವನ್ನಾಧರಿಸಿದ 'ಯಯಾತಿ', ಚರಿತ್ರೆಯನ್ನಾಧರಿಸಿದ 'ತುಘಲಕ್' ನಂತಹ ಶ್ರೇಷ್ಠ ನಾಟಕಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ ಗಿರೀಶ ಕಾರ್ನಾಡರು ಕನ್ನಡಕ್ಕೆ ಪ್ರಥಮ ಸ್ವರ್ಣಕಮಲ ಪ್ರಶಸ್ತಿ ತಂದುಕೊಟ್ಟು ಕನ್ನಡ ರಂಗಭೂಮಿ ಹಾಗೂ ಸಿನೇಮಾರಂಗವನ್ನು ಅಂತಾರಾಷ್ಟ್ರೀಯ ಮಟ್ಡಕ್ಕೇರಿಸಿದ ಅಪ್ರತಿಮ ಸಾಧಕರು. ಅವರ ೨೭ ನೇಯ ವಯಸ್ಸಿನಲ್ಲಿಯೇ ರಚಿತವಾದ ತುಘಲಕ್ ಅವರನ್ನು ಕೀರ್ತಿಯ ಶಿಖರಕ್ಕೇರಿಸಿದ ನಾಟಕ.ನನ್ನ ಹೃನ್ಮನಗಳನ್ನು ಸೆಳೆದ ನಾಟಕಗಳಲ್ಲಿ ತುಘಲಕ್ ಅತ್ಯಂತ ವಿಶಿಷ್ಟವಾದುದು.ಇದರ ರಂಗಪ್ರಯೋಗವಂತೂ ನನ್ನನ್ನು ಗತಕಾಲದ ಚರಿತ್ರೆಯತ್ತ ಹೆಜ್ಜೆ ಹಾಕಿ ಶೋಧನೆಗಿಳಿಯುವಂತೆ ಪ್ರೇರೇಪಿಸಿತು.ಇತಿಹಾಸದೊಂದಿಗಿನ ಅನುಸಂಧಾನವೇ ಈ ನಾಟಕದ ಸೃಷ್ಟಿಯ ರಹಸ್ಯಗಳಲ್ಲೊಂದು. ತುಘಲಕ್  ವಿಶಿಷ್ಟವಾದ  ಚಿಂತನೆಯ ಹೊಸ ಹೊಳವುಗಳನ್ನು ಸ್ಫುರಿಸಬಲ್ಲ ಮಾರ್ಗದರ್ಶಿ ನಾಟಕವಾಗಿದೆ. ದೌಲತಾಬಾದ್ ನಿಂದ ದೆಹಲಿಗೆ ದೆಹಲಿಯಿಂದ ದೌಲತಾಬಾದ್ ಗೆ ರಾಜಧಾನಿಯ ವರ್ಗಾವಣೆ, ಬೆಳ್ಳಿಯ ನಾಣ್ಯಗಳ ಬದಲಾಗಿ ತಾಮ್ರದ ನಾಣ್ಯಗಳನ್ನು ಜಾರಿಗೆ ತರುವಂತಹ  ದುಡುಕಿನ ಜನಪರ ಯೋಜನೆಗಳನ್ನು ಜಾರಿಗೆ ತಂದು ವಿಫಲನಾದ ಮೂರ್ಖ ದೊರೆಯೆಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ  ತುಘಲಕ್ ನನ್ನು ರಂಗದ ಮೇಲೆ ನಿಲ್ಲಿಸಿ ಇತಿಹಾಸದ ಮಣ್ಣಿನಲ್ಲಿ ಹೂತುಹೋಗಿರುವ  ಅಪರೂಪದ ಚಕ್ರವರ್ತಿಯೆಂದು ದೃಶ್ಯೀಕರಿಸಿ ಸಾರುವ ನಾಟಕ ವೆಂದರೆ ಅದು ಗಿರೀಶ ಕಾರ್ನಾಡರ ತುಘಲಕ್. ರಾಜಕೀಯದ ಚದುರಂಗದಾಟವನ್ನು  ಬಲ್ಲವನಾಗಿದ್ದ ಚಾಣಾಕ್ಷ ತುಘಲಕ್ ತನ್ನ ಸಾಮ್ರಾಜ್ಯದ ಉಳಿವಿಗಾಗಿ  ಚಾಣಕ್ಯನ ತಂತ್ರಗಳ ದಾಳಗಳನ್ನುರುಳಿಸಿ ಗೆಲ್ಲುವ ರಾಜತಂತ್ರ ನಿಪುಣನೂ ಆಗಿದ್ದನೆಂಬುದಕ್ಕೆ ನಾಟಕ ನಿದರ್ಶನಗಳನ್ನು ಒದಗಿಸುತ್ತದೆ.ಗಿರೀಶ ಕಾರ್ನಾಡರು "ತುಘಲಕ್ ರಾಜಧಾನಿಯನ್ನು ಪದೇ ಪದೇ ಬದಲಾಯಿಸುವುದರ ಜೊತೆಗೆ ತನ್ನ ಸಾಮ್ರಾಜ್ಯದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಿಷೇಧಿಸಿದ್ದ ಅಚ್ಚರಿಯ ಸಂಗತಿ ಈ ನಾಟಕ ಸೃಷ್ಟಿಸಲೊಂದು ಕಾರಣವಾಯಿತು.ಇತಿಹಾಸದ  ಗರ್ಭದಲ್ಲಡಗಿದ್ದ ಈ ಚಿಕ್ಕ ಎಳೆಯೇ ನನ್ನ ನಾಟಕಕ್ಕೆ ಪ್ರೇರಣೆಯನ್ನೊದಗಿಸಿತು" ಎಂದು ನಾಟಕ ರಚನೆಯಾದ ಸಂದರ್ಭವನ್ನು ಕುರಿತು ವಿವೇಚಿಸುತ್ತಾರೆ.
ನಿಜ.ಕೃತಿಯೊಂದು ಜನ್ಮತಾಳಲು ಮಹತ್ ಸಂಗತಿಗಳೇ ಘಟಿಸಬೇಕೆಂದೇನಿಲ್ಲ,ತನ್ನ ಬಾಣದ ಮರ್ಮಾಘಾತದಿಂದ ತತ್ತರಿಸಿ ನಲುಗುವ ಕ್ರೌಂಚಪಕ್ಷಿಗಳ ನರಳಾಟದಿಂದ ಹೊಮ್ಮಿದ ಮಾನಿಷಾದ ಶ್ಲೋಕವಾಗಿರಬಹುದು,  ಬೀದಿಯ ಪಕ್ಕ ಮೈಯರಳಿಸಿಕೊಂಡು ನಿಂತ  ಹೆಸರಿಲ್ಲದ ಹೂಗಳ ಸೌಂದರ್ಯವಿರಬಹುದು, ಸೂರ್ಯನ ಹೊಂಗಿರಣಗಳಿಗೆ ಮೈಚಾಚಿಕೊಂಡು ಹರಡಿದ ಸರೋವರವರದ ನೋಟವಿರಬಹುದು, ವಸಂತಕ್ಕೊಮ್ಮೆ ಭುವಿಯಲಂಕರಿಸುವ ಶ್ರಾವಣದ ಚಿಗುರಿರಬಹುದು, ಮೂಡಲಮನೆಯ ಬಾಗಿಲು ತೆರೆದು ರವಿ ಚಿಮುಕಿಸುವ ಇಬ್ಬನಿಯ ಹನಿಗಳಾಟದಂತಹ ಚಿಕ್ಕ ಸಂಗತಿಗಳೂ ಬರಹಗಾರನಲ್ಲಿ ಕೃತಿ ಸೃಷ್ಟಿಯ ಸ್ಪೂರ್ತಿಯ ಚಿಲುಮೆಗಳನ್ನು ಚಿಮ್ಮಿಸಬಲ್ಲವು.ತುಘಲಕ್' ನಾಟಕ ಸಮಕಾಲೀನ ರಾಜಕೀಯ, ಸಾಮಾಜಿಕ ಸಂದರ್ಭಗಳ ಅವಲೋಕನಕ್ಕೆ ಮುನ್ನುಡಿ ಬರೆಯುವಂತಿದೆ.  ವ್ಯಕ್ತಿಯು ಭಾವತರಂಗಗಳೊಂದಿಗೆ  ಮುಖಾಮುಖಿಯಾಗುವ ಬಗೆಯನ್ನು ತುಘಲಕ್ ನ ಮುಖೇನ ತೆರೆದಿಡುವ ನಾಟಕವು ಚರಿತ್ರೆಯ ಕೇಂದ್ರವಾದ ವ್ಯಕ್ತಿಯನ್ನು ಮರುವ್ಯಾಖ್ಯಾನಿಸುತ್ತದೆ. ೧೪ ನೇ ಶತಮಾನದಲ್ಲಿಯೇ  ಪ್ರಜಾಪರ ಭಾವೈಕ್ಯತೆಯ ಶಾಂತಿಯ ಬನವನ್ನಾಗಿ ತನ್ನ ಸಾಮ್ರಾಜ್ಯವನ್ನು  ಸೃಷ್ಟಿಸಬೇಕೆಂಬ ಹಂಬಲದ ಈ ಸರ್ವಾಧಿಕಾರಿ,ತನಗೆ ಎದುರಾದ ಧರ್ಮ ಹಾಗೂ ರಾಜಕೀಯದೊಂದಿಗಿನ  ಸಂಘರ್ಷಗಳನ್ನು ಚಾಣಾಕ್ಷತನದಿಂದ  ಮೆಟ್ಟಿನಿಂತರೂ ಕೊನೆಗೆ ಜೊತೆಗಾರರಿಲ್ಲದ ಒಂಟಿತನಕ್ಕೆ ಬಲಿಯಾಗುವ ದುರಂತನಾಯಕನಾಗುವುದು ವಿಪರ್ಯಾಸವೇ ಸರಿ. ಇತಿಹಾಸ ತಜ್ಞರಿಂದ, ರಾಜಪಂಡಿತರಿಂದ  'ಹುಚ್ಚುದೊರೆ' ಎಂದು ಪಟ್ಟಗಟ್ಟಿಸಿಕೊಂಡವನ ರಾಜತಂತ್ರ ನೈಪುಣ್ಯತೆಯ ಹತ್ತಾರು ಮುಖಗಳನ್ನು ಪ್ರತ್ಯೇಕ ಅಂಕಪರದೆಯಿಲ್ಲದೇ  ಅನಾವರಣಗೊಳಿಸುವ ಈ ತುಘಲಕ್ ನಾಟಕ ನಮ್ಮ ಪೂರ್ವಾಗ್ರಹಗಳನ್ನು ಕಳಚಿಕೊಂಡು ಇತಿಹಾಸದೊಂದಿಗೆ ಮರು ಅನುಸಂಧಾನಕ್ಕಿಳಿಯುವ ಅಗತ್ಯವನ್ನು ಪ್ರತಿಪಾದಿಸುತ್ತದೆ.ಚರಿತ್ರೆ ಪುರಾಣಗಳ ಮೂಲಕ  ಭಾರತೀಯ ಸಂಸ್ಕೃತಿಯ ಅನನ್ಯತೆಯನ್ನು ಎತ್ತಿಹಿಡಿಯುವ ಕಾರ್ನಾಡರು ತಮ್ಮ ಪ್ರಥಮ ನಾಟಕ "ಯಯಾತಿ"ಗೆ ದೊರೆತ ಮನ್ನಣೆಯಿಂದಾಗಿ ಕನ್ನಡಕ್ಕೆ ದಕ್ಕುವಂತಾಗಿದ್ದು ಕನ್ನಡಿಗರ ಭಾಗ್ಯವೆಂದೇ ಹೇಳಬೇಕು.
ಚಾರಿತ್ರಿಕ ಸತ್ಯಗಳಿಗೆ ನಿಷ್ಠವಾಗಿರುವ ವಸ್ತುವೊಂದನ್ನು ತಮ್ಮ ಸೃಜನಶೀಲತೆಯ ಮೂಸೆಯಲ್ಲಿ ಕರಗಿಸಿ ಒಪ್ಪವಿಟ್ಟು, ಪ್ರಮಾಣಬದ್ಧ ಸುಂದರ ಪುತ್ಥಳಿಯನ್ನಾಗಿ ನಿರ್ಮಿಸಿದ ಹೆಗ್ಗಳಿಕೆ ಕಾರ್ನಾಡರದು. ಸರ್ವಾಧಿಕಾರದ ದರ್ಪವೋ, ಪ್ರಜಾರಕ್ಷಣೆಯ ಕಂಕಣಬದ್ಧತೆಯೊ,ರಾಜಕಾರಣದ ಚದುರಂಗದಾಟವೋ, ಧರ್ಮನಿರಪೇಕ್ಷತೆಯ ಒತ್ತಡವೋ, ಪರಿಸ್ಥಿತಿಯ ಸುಳಿಗೆ ಸಿಲುಕಿ ಸಾಮ್ರಾಜ್ಯವನ್ನಾಳುವ ರಾಜತಂತ್ರ ಪಾಂಡಿತ್ಯವೋ, ಪ್ರತಿಕ್ಷಣವೂ ಎಚ್ಚರವಾಗಿದ್ದು ತನ್ನನ್ನು ಮುನ್ನಡೆಸುತ್ತಿದ್ದ ತನ್ನೊಳಗಿನ ಆತ್ಮಸಾಕ್ಷಿಗೆ ಉತ್ತರವನ್ನು ಹುಡುಕುವ ಮಹತ್ವಾಕಾಂಕ್ಷೆಯೋ ಅಥವಾ ವಿಜ್ಞಾನದ ಸಂಯುಕ್ತವಸ್ತುವಿನಂತೆ ಇವೆಲ್ಲ ಗುಣಗಳನ್ನು  ಸಂಯೋಜಿಸಿಕೊಂಡು ವಿಭಿನ್ನವಾಗಿ ರೂಪುತಳೆದ ಚತುರ ಆಡಳಿತಗಾರನೊಬ್ಬನ ಲಕ್ಷಣವೋ ಗೊತ್ತಿಲ್ಲ, ಕಾರ್ನಾಡರು ಸೃಜಿಸಿದ ಬಹುಮುಖ ವಿಸ್ತಾರದ ಅರ್ಥವ್ಯಾಪ್ತಿಯಂತೂ ಅನಂತವಾದುದು; ಮುಕ್ತವಾದುದು; ಅನನ್ಯವಾದುದು.ಧರ್ಮಪಾಲನೆಯ ಕಾರಣಕ್ಕಾಗಿ ತನ್ನನ್ನು ಟೀಕಿಸಿದ ಧರ್ಮಗುರು ಶೇಖ್ ಇಮಾಮುದ್ದೀನ್ ನನ್ನು ತನ್ನೊಂದಿಗೆ ಹಗೆತನವಿಟ್ಟುಕೊಂಡಿದ್ದ ಸಾಮಂತ ಅರಸನೊಬ್ಬನೊಂದಿಗೆ ಸಂಧಾನಕ್ಕೆ ಕಳುಹಿಸಿ ರಣರಂಗದಲ್ಲಿ ಕೊಲ್ಲಿಸಿ ಟೀಕೆಯನ್ನು,ಟೀಕಾಕಾರನನ್ನೂ ಮಣ್ಣೊಳಗೆ ಹೂತುಹಾಕುವ  ತುಘಲಕ್ ನ ಪ್ರಯತ್ನ ಯಶಸ್ವಿಯಾಗುತ್ತದೆ. ತನ್ನ ಸಿಂಹಾಸನಕ್ಕೆ ಕುತ್ತಾಗುವರೆಂದು ತಂದೆ ಹಾಗೂ ತಮ್ಮನನ್ನು ಅಲ್ಲದೇ ತನ್ನ ಹಿತಚಿಂತಕ ನಜೀಬ್ ನನ್ನು ವಿಷವಿಕ್ಕಿ ಕೊಲ್ಲಿಸಿದ ಹೆತ್ತತಾಯಿಯನ್ನೂ ಅರಮನೆಯಿಂದ ಸಾವಿನ ಮನೆಗೆ ದೂಡುವ  ಸರ್ವಾಧಿಕಾರಿಯಾಗಿಯೂ ತುಘಲಕ್ ಗೋಚರಿಸುವ ಪರಿ ಈ ನಾಟಕದಲ್ಲಿ ವಿಲಕ್ಷಣವಾಗಿ ಮೂಡಿಬಂದಿದೆ.
ತಾನು ಪ್ರಾರ್ಥನೆಯಲ್ಲಿರುವಾಗ   ಧರ್ಮಾಂಧ ಅಮೀರರು ಹಾಗೂ ಪ್ರಾಣಸ್ನೇಹಿತ ಶಹಾಬುದ್ದೀನ್ ಹೂಡುವ ಕೊಲೆಯ ಸಂಚಿನಿಂದ ಪಾರಾಗುವ ದೊರೆ ಕೊಲೆಗಡುಕರನ್ನು  ಬೇಟೆಯಾಡುತ್ತಾನೆ. ತುಘಲಕ್ ಒಬ್ಬ ವೃತ್ತಿಪರ ಅರಸನಂತೆ ಸಮರ್ಥ ಆಡಳಿತಗಾರನಾಗಿದ್ದ ಪ್ರಜಾಪರಿಪಾಲಕನಾಗಿದ್ದ ಎಂಬುದಕ್ಕೆ ನಾಟಕ ನಿದರ್ಶನಗಳನ್ನೊದಗಿಸುತ್ತದೆ. ರಾಜ್ಯಾಡಳಿತಕ್ಕಿಂತಲೂ ತುಘಲಕ್ ನ ವೈಯಕ್ತಿಕ ವ್ಯಕ್ತಿತ್ವವನ್ನು ಕುರಿತು ವಿವೇಚಿಸುವ ನಾಟಕ ಚಕ್ರವರ್ತಿಯೊಬ್ಬನ  ಅಂತರಂಗದ  ವ್ಯಾಪಾರವಿಲಾಸವನ್ನು ಮನೋಜ್ಞವಾಗಿ ತೆರೆದಿಡುತ್ತದೆ. ಸಮುದಾಯ ರಂಗತಂಡ ವ್ಯಕ್ತಿಗಳನ್ನೇ ಕಾಯಿಗಳನ್ನಾಗಿ ಮಾಡಿಕೊಂಡು ರೂಪಿಸಿದ ಚದುರಂಗದಾಟದ ರೂಪಕ  ತುಘಲಕ್ ನಾಟಕದ ರಂಗಪ್ರಯೋಗಕ್ಕೆ ವಿನೂತನ ಕಳೆಯನ್ನು ತಂದುಕೊಟ್ಟಿದೆ.ತುಘಲಕ್ ಕನ್ಮಡ ವಾಙ್ಮಯ ಲೋಕದ ಅದ್ವಿತೀಯ ನಾಟಕರತ್ನಗಳಲ್ಲಿ ಅನನ್ಯವಾದುದು.

ದೇಶ ದೇಶಗಳ ಮಧ್ಯದ ಜಾಗತಿಕ ವಿವಾದದ ವೈಮನಸ್ಸುಗಳಿಗೂ ಕನ್ನಡಿ ಹಿಡಿಯುವಂತಿರುವ ಈ ನಾಟಕದ ಪ್ರಸ್ತುತತೆ ಗಿರೀಶ ಕಾರ್ನಾಡರವರ ಪ್ರತಿಭಾವಿಲಾಸದ ವೈಶಾಲ್ಯತೆಗೆ ಸಾಕ್ಷಿಯಾಗಿದೆ. ಇಂತಹ ಅಪೂರ್ವ ಪ್ರತಿಭಾಸಂಪನ್ನರನ್ನು ಕಳೆದುಕೊಂಡ ಭಾರತೀಯ ಸಾಂಸ್ಕೃತಿಕ ಲೋಕ ಬಡವಾಗಿದೆ.ಬಾಲ್ಯದಲ್ಲಿ ಗೆಳೆಯರಿಂದ ಬಣ್ಣಿಸಲ್ಪಟ್ಟ ಕಾರ್ನಾಡರೆಂಬ "ಮಾವಿನ ತಳಿರು" ಇಹದ ಮರದಿಂದ ಬೇರ್ಪಟ್ಟಿದೆ.  ಕರುನಾಡಿನ ಅಜರಾಮರ ಕಲೋಪಾಸಕ ಕಾರ್ನಾಡರಿಗೆ ಶ್ರದ್ಧಾಂಜಲಿ.



 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...