Total Pageviews
Thursday 27 June 2019
ಕಾವ್ಯೋದ್ಯಾನವನದಲ್ಲೊಂದು ವಿಹಾರ ಭಾಗ 2
ಶಬ್ದಸೂತಕದಿಂದ ಕಾವ್ಯವನ್ನು ಕಟ್ಟಿಕೊಡಲು ಸಾಧ್ಯವಿಲ್ಲ. ಹಾಗೆಯೇ ಬದುಕನ್ನೂ ಕೂಡ. ಶಬ್ದಗಳ ಬಂಧನದಲ್ಲಿಟ್ಟಷ್ಟೂ ಮುಕ್ತವಾಗುತ್ತಲೇ ಹೋಗುವುದು ಕಾವ್ಯದ ಜಾಯಮಾನ; ನಿಗೂಢವಾಗುತ್ತಲೇ ಹೋಗುವುದು ಕಾವ್ಯದ ಗುಣ.ಕಾವ್ಯದ ಪಯಣವೆಂದಿಗೂ ಅನಂತತೆಯ ಕಡೆಗೆ.ದಕ್ಕಿದೆ ಎನ್ನುವಾಗಲೇ ದಕ್ಕದೇ ಹೋಗುವುದೂ ಕೂಡ ಕಾವ್ಯರಾಣಿಯ ಚಂಚಲತೆಯ ಲಕ್ಷಣ.ಇಂತಹ ಚಂಚಲ ಹಾಗೂ ಅಷ್ಟೇ ಅಮಲಿನ ಕಾವ್ಯವನ್ನು ಸಾರ್ಥಕವಾಗಿ ದಕ್ಕಿಸಿಕೊಂಡ ಜಗತ್ತಿನ ದಾರ್ಶನಿಕರನ್ನು ದರ್ಶಿಸುವ ಮಹತ್ವದ ಕೃತಿಯಾಗಿ "ಜಾಡಮಾಲಿಯ ಜೀವ......." ಗಮನಸೆಳೆಯುತ್ತದೆ. ತನ್ನ ಪರಮಶಿಷ್ಯ ಜಲಾಲುದ್ದೀನ್ ರೂಮಿಯ ಅನುಯಾಯಿಗಳಿಂದಲೇ ಕೊಲೆಯಾಗಿ ರೂಮಿಯ ಮಗನಿಂದ ಸಮಾಧಿಯನ್ನಲಂಕರಿಸಿಕೊಂಡ,"ವಕಾಲತ್- ಎ-ಶಾಮ್ಸ -ಎ-ತಬ್ರೀಝಿ" ಎಂಬ ಏಕೈಕ ಪರ್ಶಿಯನ್ ಕೃತಿಯ ನೇಕಾರ, ಜಗತ್ಪ್ರಸಿದ್ಧ ಚಿಂತಕ ಶಾಮ್-ಎ-ತಬ್ರೀಝಿಯಾಗಿರಬಹುದು,ಸೌಂದರ್ಯವನ್ನೇ ಆರಾಧಿಸಿ,ಕಾಲು ಕಳೆದುಕೊಂಡ ಭಗ್ನ ಶಿಲ್ಪವಾಗಿ ಬದುಕನ್ನು ಸಾವಿನೊಂದಿಗೆ ಸವೆಸಿದ ಮೆಕ್ಸಿಕನ್ ಕಾವ್ಯಾರಾಧಕಿ ಫ್ರಿದಾ ಕಾಹಲೊವಾ ಆಗಿರಬಹದು,ಕಾವ್ಯ ಮತ್ತು ಖಡ್ಗಗಳ ಸಾಂಗತ್ಯದಲ್ಲಿ ಕ್ರಾಂತಿಯ ಬೀಜ ಬಿತ್ತಿ ಸೋವಿಯತ್ ಸರ್ಕಾರದಿಂದ ಗಲ್ಲಿಗೇರಿಸಲ್ಪಟ್ಟ ಅಹಮದ್ ಜಾವೇದ್ ಇರಬಹುದು,"ಸಾಂಗ್ಸ ಆಫ್ ದಿ ಆರ್ಮಿ "ಯನ್ನು ರಚಿಸಿ ಇಂಗ್ಲೆಂಡಿನ ಕಾರ್ಮಿಕರ ದನಿಯಾಗಿ ಕೊನೆಗೆ ಆತ್ಮಹತ್ಯೆಯಂತಹ ದುರಂತ ಸಾವನ್ನು ಕಂಡ ಕಾದಂಬರಿಕಾರ ಫ್ರಾನ್ಸಿಸ್ ಆ್ಯಡಮ್ಸ್ ಆಗಿರಬಹದು, ಸೇವೆಯನ್ನು ಸೈತಾನನಿಂದ ಕಲಿಯಬೇಕು ಎಂದು ಪ್ರತಿಪಾದಿಸಿ ಔರಂಗಜೇಬನಿಂದ ತಲೆದಂಡಕ್ಕೊಳಗಾದ ನಗ್ನತೆಯ ಆರಾಧಕ ಮೊಹಮ್ಮದ ಸಯೀದ್ ಸರ್ಮದ್ ಖಶಾನಿಯಾಗಿರಬಹುದು ,ಧರ್ಮಸುಧಾರಣೆಗಾಗಿ ತುಡಿದ ಮಾರ್ಟಿನ್ ಲೂಥರ್ ಕಿಂಗ್ ನನ್ನು ನೆನಪಿಸುವ, ಬಸವಣ್ಣನವರ ಆಚಾರವೇ ಸ್ವರ್ಗ ಅನಾಚಾರವೇ ನರಕ ವೆಂಬ ಚಿಂತನೆಗಳಿಗೆ ಹತ್ತಿರವಾಗಿ, ಅಕ್ಕಮಹಾದೇವಿಯಂತೆ ಸಾವಿಲ್ಲದ ಗಂಡನನ್ನು ಹುಡುಕುತ್ತಲೇ ಲೀನವಾದ ರಾಬಿಯಾ ಆಗಿರಬಹದು,ಪ್ರೇಯಸಿಯಿಂದ ಪ್ರೀತಿಯಿಂದ ಹೊಡೆಸಿಕೊಳ್ಳದವನು,ಶೆರೆ ಕುಡಿಯದವನು ಎಂದಿಗೂ ಕವಿಯಾಗಲಾರ ಎಂಬ ವಿಲಕ್ಷಣವಾದ ಸತ್ಯವನ್ನು ಪ್ರತಿಪಾದಿಸಿ ಕವಿತೆಯಾಗಿ ಮಾತ್ರ ಈ ಜಗಕೆ ದಕ್ಕಿದ ಗಾಲಿಬನಾಗಿರಬಹದು ಹೀಗೆ ಈ ಕೃತಿಗೆ ಮುನ್ನುಡಿಯಾದವರೆಲ್ಲರೂ ಒಂದಲ್ಲ ಒಂದು ಬಗೆಯಲ್ಲಿ ಬದುಕೆಂಬ ದುರಂತ ನಾಟಕದ ನತದೃಷ್ಟ ನಾಯಕರುಗಳೆ;
ಸಮಾಜೋದ್ಧಾರಕ್ಕಾಗಿ ಪ್ರಭುತ್ವದ ವಿರುದ್ದ ಕಾವ್ಯಖಡ್ಗವನ್ನು ಹಿಡಿದು ಝಳಪಿಸಿದವರೇ ; ಕ್ರಾಂತಿಯ ಮೂಲಕ ಮಾನವತೆಗಾಗಿ ಪ್ರತಿಭಟಿಸಿದವರೇ.ಈ ಜಗದ ಸಾಂಸ್ಕೃತಿಕ ಲೋಕವನ್ನು ತಮ್ಮೊಳಗಿನ ಆಂತರ್ಯದ ಒಳನೋಟದ ಮೂಲಕ ನಿರ್ಭೀತಿಯಿಂದ ಎಚ್ಚರಗೊಳಿಸಿದವರೇ. ಮನುಷ್ಯನೊಳಗಣ ಮನುಷ್ಯತ್ವವನ್ನು ತೆರೆದು ತೋರಿಸುವ ಇಲ್ಲಿಯ ಕವಿತೆಗಳು ಮಹಾಮಾನವೀಯತೆಯ ಗಿಡದಲ್ಲರಳಿದ ಪುಷ್ಪಗಳು. ಮಾನವ ಆಚರಿಸಬೇಕಾದ ತತ್ವಜ್ಞಾನದ ಸಾಲುಗಳನ್ನು ಸರಳ ಸಾಲುಗಳ ಪರಿಮಳದ ಮೂಲಕ ಜನಮನಕೆ ತಲುಪಿಸಿದ ದಾಸಯ್ಯರು ಇಲ್ಲಿಯ ಕವಿಸೂರಿಗಳು. ಮೂಲ ಭಾವ, ಅರ್ಥ, ಆಶಯಗಳಿಗೆ ಕಿಂಚಿತ್ತೂ ಧಕ್ಕೆಯೊದಗದಂತೆ ರಾಗಂರವರ ಲೇಖನಿಯಲ್ಲಿ ಇಲ್ಲಿಯ ಕವಿತೆಗಳು ಮರುಹುಟ್ಟು ಪಡೆದಿವೆ. ರಾಗಂರವರೇ ಹೇಳುವಂತೆ ಇಲ್ಲಿಯ ಕವನಗಳು ಬರಿ ಶುಷ್ಕವಾದ ಭಾಷಾಂತರವಲ್ಲ ಬದಲಾಗಿ ಭಾವಶುದ್ಧತೆಯೊಂದಿಗೆ ಪುನರ್ ಸೃಷ್ಠಿಗೊಳಗಾಗಿವೆ. ನಿಜ. ನೀರಸ ಅನುವಾದ ಮೌಲಿಕವಾದುದನ್ನು ಹೊರಗಿಡುತ್ತದೆ. ಈ ಕವಿತೆಗಳನ್ನು ಪುನರ್ ಸೃಷ್ಟಿಸುವ ರಾಗಂರವರ ಪರಿಯೇ ಮನೋಜ್ಞವಾಗಿದೆ -
Subscribe to:
Post Comments (Atom)
ಉಳುಕು ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು ...
-
ಕುಲದ ನೆಲೆಯನರಸುತ್ತಾ.... ನಮ್ಮ ನಾಡಿನ ಖ್ಯಾತ ಸಾಹಿತಿಗಳು, ಚಿಂತಕರಾದ ಡಾ.ಗುರುಲಿಂಗ ಕಾಪಸೆ ಯವರು " ಪಂಪ ರನ್ನ ರಂತಹ ವ...
-
ಅರ್ಧಾಂಗಿ ಪುರಾಣ! ನಾನು ಎಂದಿನಂತೆ ನಿತ್ಯಕರ್ಮಗಳ ಮುಗಿಸಿ ಕರ್ತವ್ಯಕ್ಕಾಗಿ ಸಿದ್ಧವಾಗುತ್ತಿರುವಾಗ ಕೇಳಿದಳು ಸಾಕಿಯೊಮ್ಮೆ - " ಈ ಹಳೆಯ ಅಂಗಿಯನ್ನ ಹಾಕ್ಕೋ...
-
ಉಳುಕು ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು ಕತ್ತಲೆಯ ಧಿಮಾಕನ್ನೊರೆಯಲು ಸಾಕು ಉಬ್ಬಿದ ಅಸ್ಥಿ ಮಜ್ಜೆಗಳು ಜಾ...
super writing sir.....
ReplyDeleteLovely
ReplyDeleteThank u sir
ReplyDeleteThank u sir
ReplyDeleteSuperb
ReplyDeleteಇಷ್ಟವಾಯಿತು. ಚಂದ ಬರೆದಿದ್ದೀರಿ
ReplyDeleteತುಂಬ ಚೆನ್ನಾಗಿ ಬರೆದಿರುವಿರಿ ಸರ್.
ReplyDeleteಕವಿತೆಯ ಮುಖವನ್ನು ನೋಡುವ ಅರ್ಥೈಸುವ ದೃಷ್ಟಿಕೋನ ಸುಂದರವಾಗಿದೆ.ಸರ್
ReplyDeleteಪದ ಬಳಕೆ ತುಂಬಾ ಚೆನ್ನಾಗಿದೆ ಸರ್
ReplyDelete