Total Pageviews

Thursday 6 September 2018

ಅಜಾತಶತ್ರು

ಅಜಾತಶತ್ರು
ವಾಗ್ಬಾಣಗಳ ಚತುರ ಕವಿ
ಕಾವ್ಯಶಿಲ್ಪಿ ಶ್ರೀ ವಾಜಪೇಯಿ
ರಾಜಕಾರಣಕೆ ಪಾಠ ಹೇಳಿದ
ಸದನದ ಕಲಿ ಭಾರತ  ಭೀಷ್ಮ

ಅಸ್ತಂಗತ ಮುತ್ಸದ್ದಿಯ ನೇಸರ
ಯುಗನಾಯಕನೀ ಭಾರತ ಭೂಶಿರ
ಮೊಳಗಿಸಿದೆ  ಪಾಂಚಜನ್ಯವ
ಸದ್ದಡಗಿಸಿದೆ ಶತ್ರುಪುಂಜವ
ಬೆಳಗಿದೆ ದೇಶ ನಿನ್ನಯ ಕಾಂತಿಗೆ
ಹೆಮ್ಮೆಯ ಪುತ್ರ ಭಾರತ ಮಾತೆಗೆ
ಬೆರಗಾಗಿದೆ ಜಗವು ನಿನ್ನಾರ್ಭಟಕೆ
ವಿಸ್ಮಯಗೊಂಡಿದೆ ನಿನ್ನಯ ಶಾಂತಿಗೆ

ಶಕ್ತಿ ಯುಕ್ತಿಗಳ ಸಮನ್ವಯದಾತ
ಚತುರಮತಿಯ ಆಡಳಿತದೂತ
ರಾಜತಂತ್ರದ ವಿಕಾಸಪುರುಷ
ರಾಜಕಾರಣಿಗಳ ಮಣಿಪರುಷ
ಪ್ರಧಾನಿಯ ಪದಕೆ ನೀ ಅನ್ವರ್ಥ
ಸಂಸತ್ ಪಟುವಿಗೆ ನೀನೇ ಪಾರ್ಥ
ಅನ್ಯರು ಹೊಗಳುವ ಅಜಾತಶತ್ರು
ಕಂಡ ಕನಸಿನ ವಿಕಾಸದ ಕರ್ತೃ

ಜನಸೇವೆಯೇ ಜನಾರ್ಧನ ಸೇವೆ
ತೋರಿದೆ ನೀನು ಓ ಕವಿಹೃದಯಿ
ಭಾರತಮಾತೆಯ ಕೀರ್ತಿ ಪತಾಕೆ
ವಿಶ್ವಕೆ ತೋರಿದ ಮಹಾಮಾತೃಕೆ




No comments:

Post a Comment

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...