Total Pageviews
Sunday 4 March 2018
ಜಾನ್ ಕೀಟ್ಸ್ ನ ಮೌನರಾಗ.....(ಭಾಗ 2)
ಜಾನ್ ಕೀಟ್ಸ್ ನ ಮೌನರಾಗ.....(ಭಾಗ 2)
I was never afraid of failure, for I would sooner fail than not be among the greatest. . ಎಂದು ತನ್ನ ಕವಿ ಸಾಧನೆಯ ಜೀವನವೇ ವಿಫಲವೆಂದು ಬಗೆದು, ಬಾಗಿದ, ಮಾಗಿದ ಮಹಾನುಭಾವ ಜಾನ್ ಕೀಟ್ಸ್.
ಕೀಟ್ಸ್ ನಮ್ಮೊಂದಿಗೆ ಸಂವಾದಿಸುತ್ತ, ಹತ್ತಿರವಾಗುವುದೇ ಈ ಪತ್ರಗಳ ಓದಿನ ಧ್ಯಾನಕ್ಕಿಳಿದಾಗ.ಗೆಳೆಯರು,ಸಹೋದರರು,ಹಿತೈಷಿಗಳು ಸಂಗ್ರಹಿಸಿದ್ದ ಈ ಅಮೂಲ್ಯ ಐತಿಹಾಸಿಕ ದಾಖಲೆಗಳೇ ಕವಿಯ ಶುದ್ಧ ಅಂತರಂಗವನ್ನು ನಮಗೆ ತೆರೆದಿಡುತ್ತವೆ. ಇಲ್ಲದಿದ್ದರೆ ವಿಮರ್ಶಕರಿಂದ ಮೊದಲೇ ನಿರ್ಲಕ್ಷಿತನಾಗಿದ್ದ ಕೀಟ್ಸ್ ಬಹುಶಃ ಇಂದು ಡಾ.ರಾಜಶೇಖರ ಮಠಪತಿಯವರ ಕೃತಿಯ ಮೂಲಕ. ನಮಗೆ ಹೀಗೆ ದಕ್ಕುತ್ತಿರಲಿಲ್ಲ. ಅನಾಮಿಕನಾಗಿಬಿಡುತ್ತಿದ್ದ. ನಾವು ರಾಗಂ ರವರ ಈ ಕೃತಿಯ ಅಂತರಂಗದ ಒಳಹೊಕ್ಕಾಗ, ೨೩ ರ ಕಿರಿಯ ವಯಸ್ಸಿನಲ್ಲಿಯೇ , ಸಮಕಾಲೀನರು ಹಾಗೂ ಹಿರಿಯರೆಲ್ಲಾ ಬೆರಗಾಗುವಂತೆ ಕಾವ್ಯಗಂಗೆಯನ್ನು ಪ್ರವಾಹವಾಗಿ ಧುಮ್ಮಿಕ್ಕುವಂತೆ ಮಾಡಿದ ಅಸಾಮಾನ್ಯ ಕವಿಯ ಅದಮ್ಯ ಉತ್ಸಾಹ, ಎಂದೂ ಬತ್ತದ ಜೀವನ ಪ್ರೀತಿಯನ್ನೇ ನೆಲವಾಗಿಸಿ, ಮೇಲೆ ರಮ್ಯ ಕಾವ್ಯವನ್ನು ಹುಲುಸಾಗಿ ಎಡೆಬಿಡದೆ ಕೃಷಿಗೈದ ಕಾವ್ಯಯೋಗಿಯೊಬ್ಙನ ಶ್ರಧ್ದೆ, ಪರಿಶ್ರಮ, ವಿಲಕ್ಷಣ ಹಂಬಲ, ಪ್ರಾಮಾಣಿಕತೆ, ಜೀವನ ಚೈತನ್ಯ, ಸ್ವಾಭಿಮಾನ, ಗಳು ನಮ್ಮನ್ನು ಬಹುವಾಗಿ ಕಾಡುತ್ತವೆ. ಇಂದು ಆಧುನಿಕ ಮನುಷ್ಯ ಯಂತ್ರನಾಗರಿಕತೆಯಿಂದಾಗಿ ಆಲಸ್ಯ,ದಾರಿದ್ರ್ಯ ದೇವತೆಯ ವಿಷಯಾಸಕ್ತಿಗಳ ತೆಕ್ಕೆಯಲ್ಲಿ ಮೈಮರೆತು, ಅಮೂಲ್ಯ ಜೀವನ ಕ್ಷಣಗಳನ್ನು ಕಳೆದುಕೊಳ್ಳುತ್ತಿರುವಾಗ, ಜಾನ್ ಕೀಟ್ಸ್ ಎಂಬ, ಅರ್ಧಕ್ಕಿಂತಲೂ ಕಡಿಮೆ ಆಯುಷ್ಯದಲ್ಲಿಯೇ ಅಗಾಧವಾದ ಕ್ರಿಯಾಶೀಲತೆ,ಸೃಜನಶೀಲತೆ,ಪ್ರಾಮಾಣಿಕತೆ ಗಳನ್ನು ಮೈಗೂಡಿಸಿಕೊಂಡಿದ್ದ , ರಮ್ಯ ಯುಗದ ಕಾವ್ಯ ತಪಸ್ವಿ ಯೊಬ್ಬನ ಬದುಕು ನಮ್ಮನ್ನು "ಜಡ ದಿಂದ ಜಂಗಮದೆಡೆಗೆ " ಕರೆದೊಯ್ಯುವ ಆದರ್ಶವಾಗಬೇಕಾಗಿದೆ.
Subscribe to:
Post Comments (Atom)
ಉಳುಕು ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು ...
-
ಕುಲದ ನೆಲೆಯನರಸುತ್ತಾ.... ನಮ್ಮ ನಾಡಿನ ಖ್ಯಾತ ಸಾಹಿತಿಗಳು, ಚಿಂತಕರಾದ ಡಾ.ಗುರುಲಿಂಗ ಕಾಪಸೆ ಯವರು " ಪಂಪ ರನ್ನ ರಂತಹ ವ...
-
ಅರ್ಧಾಂಗಿ ಪುರಾಣ! ನಾನು ಎಂದಿನಂತೆ ನಿತ್ಯಕರ್ಮಗಳ ಮುಗಿಸಿ ಕರ್ತವ್ಯಕ್ಕಾಗಿ ಸಿದ್ಧವಾಗುತ್ತಿರುವಾಗ ಕೇಳಿದಳು ಸಾಕಿಯೊಮ್ಮೆ - " ಈ ಹಳೆಯ ಅಂಗಿಯನ್ನ ಹಾಕ್ಕೋ...
-
ಉಳುಕು ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು ಕತ್ತಲೆಯ ಧಿಮಾಕನ್ನೊರೆಯಲು ಸಾಕು ಉಬ್ಬಿದ ಅಸ್ಥಿ ಮಜ್ಜೆಗಳು ಜಾ...
ಆಂಗ್ಲ ಕಾವ್ಯ ಆರಾಧಕ ಕೀಟ್ಸ್ ಹಾಗೂ ಆ ಕವಿಯ ಬಗೆಗೆ ಪುಸ್ತಕ ಬರೆದ ರಾಗಂರವರು, ಅವರ ಪುಸ್ತಕವನ್ನು ವಿಮರ್ಶಾತ್ಮಕ ಪರಿಚಯಿಸಿದ ನೀವೂ ಸೇರಿದಂತೆ ಎಲ್ಲರೂ ಅಭಿನಂದನಾರ್ಹರು.
ReplyDelete