Total Pageviews

Saturday 14 March 2020

ಅನಭಿಷಕ್ತ ಕೊರೊನಾ...

ಅನಭಿಷಕ್ತ ಕೊರೊನಾ...

ನಿನಗಿಲ್ಲ ದೇಶ ಮತ ಭೇದಗಳ ಸುಳಿ
ಮಾನವ ದೇಹವೇ ನೀ‌ ಬದುಕುವ ಕುಳಿ
ಕುಳಿತು ಹರಿಸುತ್ತಿರುವೆ ರಕ್ತಪಾತದ ಹೊಳಿ
ಅರಸಿ ಸಮಾಧಿ ಮಾಡುವ ನಿನ್ನದೆಂತಹ ಕಳಕಳಿ!

ಜೀವಗಳೇ ನೀನಾಡುವ ಚದುರಂಗದ ಕಾಯಿ
ಅದೆಷ್ಟು ಆಳ ಜಗ ನುಂಗುವ ನಿನ್ನ ಬಾಯಿ
ವಿಶ್ವವನೇ ಬೆಚ್ಚಿಸಿದ ನೀನಲ್ಲವೆ ಮಹಾಮಾಯಿ
ಲೆಕ್ಕಕೂ ಸಿಗುತಿಲ್ಲ ನಿನಗೆ ಯಾರು ಉತ್ತರದಾಯಿ!

ಬಹಿರಂಗದಿ ನಿರ್ಜೀವ ನೀರವ ನೀ ಶೂನ್ಯ 
ಅಂತರಂಗದಿ ನಿನ್ನಾಟ ಜೀವಂತಿಕೆ ಧನ್ಯ
ಅಸ್ಮಿತೆಯೇ ನಿನ್ನದು ಒಳಹೊಗುವ ಜೀವಜನ್ಯ
ರೋಗಾಣುಗಳಲ್ಲೇ ಭಯಂಕರ ನೀ ಅನನ್ಯ!

ಹಾದಿ ಬೀದಿ ಸಂತೆ ಜಾತ್ರೆಗಳೆಲ್ಲವೂ ಖಾಲಿ 
ನೋವು ಪ್ರಾಣ ಹರಣ ನೀ ಕೇಳುವ ದಿನದ ಕೂಲಿ
ಉಡುಗಿ ಹೋಯಿತಲ್ಲ‌‌ ಮೆರೆವ ಮಾನವನ ಡೌಲಿ
ಬೆಳೆಯಿತಲ್ಲ ರಸ್ತೆ ತುಂಬ ಸ್ಮಶಾನ ಮುಳ್ಳುಗಳ ಜಾಲಿ!

ಅಧ್ಯಕ್ಷ ಪ್ರಧಾನ ಅಮಾತ್ಯರ ಕೋಟೆ ಗಡಗಡ
ಭುವನದಲ್ಲಿ ನಿನ್ನದೇ ಮೆರವಣಿಗೆಯ ಜಂಜಡ
ಮೆರೆಯಲಿಷ್ಟು ನೀನು ಯಾರಿರುವರು ಸಂಗಡ
ಮನುಜರನ್ನೇ ನಡುಗಿಸುವ ನೀನಲ್ಲವೇ ನಿಜಸದೃಢ!


11 comments:

  1. This comment has been removed by the author.

    ReplyDelete
  2. ನಿಮ್ಮ ಪದಪುಂಜಗಳ ಜೊಡನೆಗೆ ಶರಣು ಶರಣಾರ್ಥಿಗಳು. ಮಹಾಮಾರಿ ಕರೋನಾ ಮುಂದೆ ಎಲ್ಲರೂ ಸಮನಾರು. ಜಾತಿ ಧರ್ಮ ಅಂತಸ್ತಿನ ಬೇದಬಾವ ಇಲ್ಲಾ.ಆದರೆ ಇದರ ಉತ್ತಾರಾದಿ ಸಿಗಲೇಬೇಕು..ಹಲವು ವಿಷಯಗಳಲ್ಲಿ ಉತ್ತರಾದಿ ಇದ್ದೆ ಇರುತ್ತಾನೆ ..

    ReplyDelete
  3. ಕೋವಿಡ್೧೯ ಬಗ್ಗೆ ಮಾಹಿತಿ ಒಳಗೊಂಡ ಶಬ್ದ ಲಾಲಿತ್ಯ ಸುಂದರವಾಗಿದೆ

    ReplyDelete
  4. Nimm e Sandesh korena emba mahamari viruse nindaguv samshebage tumba Changi helidira.... Sir innu hechechu sogasad article nimm baravanige inda mudi barali embuvadu nanna abhipraya.... Once again thanks for sending information......

    ReplyDelete
  5. ಗಡಗಡ ಕೊಟೆಕೊತ್ತಲಗಳೆಲ್ಲ ಗಡಗಡ ....ನಿಮ್ಮ ಪದ ಪುಂಜದಲ್ಲಿ ಮುಡಿಬಂದ ಮಾರಿಯ ಕತೆ.ಅದೊಂತರ ಗಡಗಡ.

    ReplyDelete
  6. ತುಂಬಾ ಚೆನ್ನಾಗಿದೆ ಸರ್

    ReplyDelete

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...