ಬಯಸಿದುದನೆಲ್ಲಾ ಬಾಚಿಕೊಂಡು
ಋಣ ಮುಗಿದವರ ಕೈಹಿಡಿದು
ಸಮಯವಾಯಿತೆಂದು ಕರೆದುಕೊಂಡು
ಮರಣವೇ ಮಹಾನವಮಿ
ಎಂದವರದೋ ಮಹದಾನಂದದಿ
ಕಳೆಗಟ್ಟಿದ ಮೆರವಣಿಗೆ
ಹಿಂಜರಿದು ಹೆದರಿ
ಬಚ್ಚಿಟ್ಟುಕೊಂಡವರ ಜಾಣ
ಮರೆವಿನಲ್ಲಿ ಅದೆಂತಹ ಉರುವಣಿಗೆ
ಅಳಿವಿದೆ ಹೆಸರಿಲ್ಲದೆ ನಡೆದು
ಸದ್ದಿಲ್ಲದೇ ಮರೆಯಾಗುವ ಜಂಗಮಕೆ
ಉಳಿವೆಲ್ಲಾ ಹೆಸರಿನಲ್ಲಿ ಮೈಮರೆತು
ಕುಣಿವ ಜಡ ಸ್ಥಾವರಕೆ
ಉರುಳಿ ಹೋದ ಶತ-ಶತಮಾನಗಳ
ಮರೆಯಲಾಗದ ಕೊಡುಗೆ
ಬೆಡಗಿನಲ್ಲಿ ಬೆತ್ತಲಾಗಿ ಹೆಜ್ಜೆ
ಹಾಕುತಿರುವ ಬದಲಾವಣೆಯ ಉಡುಗೆ
ನಿಸ್ವಾರ್ಥದ ಹೆಗಲ ಮೇಲೆ
ಕೈಹಾಕಿ ನಡೆಯುತ್ತಾ ಶ್ರದ್ಧೆ
ಕಾಯಕದಿ ಸಾಗುವವರ ಸಂತೆ
ಬೇಕಿಲ್ಲ ನವಯುಗಕೆ ಅವರದೇ
ಮೂಲೆಗೊಟ್ಟಿ ಮತ್ತೆಂದೂ ಚಿಗುರದಂತೆ
ಸಮಾಧಿ ಮಾಡುವ ಚಿಂತೆ
ಬಯಸಿ ಹುಡುಕಿ ಹೋಗುವ
ವಿಷಾದ ಸಂಭ್ರಮಗಳೆರಡೂ ಒಂದೇ
ಧಿಮಾಕಿನ ಒಡೆಯನಂತೆ ಕೈಕೋಲು
ಕುಟ್ಟಿ ಹೆಜ್ಜೆ ಹಾಕುವ ಕಾಲನ ಮುಂದೆ
ಆದರೂ ಪಕ್ಷಪಾತ ಆಳುವವರ
ತನ್ನಂಥವರು ಬೀಗುವುದ ಕಂಡು
ಮುನ್ನಡೆಸಿ ಜಗವಾಳುವ
ವಾರಸುದಾರರಿರಲೆಂಬ ಹೆಬ್ಬಯಕೆಯೋ
ಜಾಲ ಅರಿಯದೆ ಬಲೆಗೆ ಬೀಳುವ
ಅಮಾಯಕರ ಒರೆಸಿಹಾಕುವ ಹವಣಿಕೆಯೋ
ಅಲಿಪ್ತ ಶಾಂತ ನೀರವದ ನಾದ
ಏಕತಾರಿಯ ಸ್ವರವೊಂದೇ
ಆಲಿಸುವ ಬಡಪಾಯಿಗಳ ಮೋದ!
ಮರಣವೇ ಮಹಾನವಮಿ
Super Sir
ReplyDeleteThank u medum
Deletesuper sir
ReplyDeleteಧನ್ಯವಾದಗಳು ತಮಗೆ
Deleteಲಯಬದ್ಧವಾದ ಜೋಡಣೆಯಿಂದ ಕೂಡಿದ ಸುಂದರ ಬರವಣಿಗೆ ಸರ್
ReplyDeleteಅನಂತ ಕೃತಜ್ಞತೆಗಳು ಸರ್
Deletesuper sir.
ReplyDeleteಶಬ್ದ ಜೊಡನೆಗಾಳ ಮಾಂತ್ರಿಕ.
ರಸವತ್ತಾಗಿದೆ ಸರ್
ಪ್ರತಿಕಾಲಮಾನದ ವರ್ತಮಾನಕ್ಕೆ ಹಿಡಿದ ನೈಜತೆ.
ReplyDeleteಶಬ್ದ ಸರಪಳಿಗೆ ಧನ್ಯವಾದಗಳು
ಸೂಪರ್ ಸರ್
ReplyDeleteಸೂಪರ್ ಸರ್
ReplyDeleteಗುಜರ ಗಯೀ ಜಿಂದಗಿ ಗಾಲಿಬಕಾ ಕಸಿದ ಔರ ನಶೆ ಕಾ ಜೂನನಮೆ
ReplyDeleteಕೌನ ಜಾನೆ ಉನಖಿ ದಿಲ ಕಿ ಧಡಕನ ಆಖಿರ ಓ ಭಿ ಖುದಾ ಕಾ ಹಿ ಇನಸಾನ
ಗಾಲಿಬನ ಜೀವನಚರಿತ್ರೆ ಕುರಿತು ಚಿಂತನೆ, ಮಂಥನವಾಗಲಿ ತಮ್ಮಿಂದ ಕಾವ್ಯ ತತಪರತೆ ಪುಂಖಾನು ಪುಂಖವಾಗಿ ಹೊರಬರಲಿ ತಮಿಂದ