Total Pageviews

Friday 15 June 2018

'ಅಕಾಡೆಮಿ' ಯೆಂಬ ಜ್ಞಾನದೇಗುಲದಲ್ಲಿ....(ಭಾಗ 1)

ನಮ್ಮ ತಂಡ

             ಹೊಸದಾಗಿ ನೇಮಕವಾಗಿರುವ ಕನ್ನಡ ಸಹಾಯಕ ಪ್ರಾಧ್ಯಾಪಕರುಗಳಿಗೆ   ಉನ್ನತ ಶಿಕ್ಷಣ ಅಕಾಡೆಮಿ ಧಾರವಾಡ ದ ವತಿಯಿಂದ ದಿನಾಂಕ ೨೧-೫-೨೦೧೮ ರಿಂದ ದಿನಾಂಕ ೧೦-೬-೨೦೧೮ ರವರೆಗೆ  ಹಮ್ಮಿಕೊಂಡ ೨೧ ದಿನಗಳ ವೃತ್ತಿ ಬುನಾದಿ ತರಬೇತಿ ನಮ್ಮ ವೃತ್ತಿಸಾಮರ್ಥ್ಯ ಹಾಗೂ ಬೋಧನಾ ಕೌಶಲಗಳನ್ನು ವೃದ್ಧಿಸಿಕೊಳ್ಳಲು  ಪ್ರೇರಣಾತ್ಮಕವಾಗಿತ್ತು.ನಮ್ಮ ನಾಡಿನ ಸಹೃದಯಿ ಖ್ಯಾತ ಸಾಹಿತಿಗಳಾದ ದಿವಂಗತ ಡಾ.ವೃಷಭೆಂದ್ರ ಸ್ವಾಮಿಯವರ ಸುಪುತ್ರರಾಗಿರುವ ಡಾ.ಎಸ್ ಎಂ ಶಿವಪ್ರಸಾದ ರವರು ಈ ಉನ್ನತ ಶಿಕ್ಷಣ ಅಕಾಡೆಮಿ ಧಾರವಾಡ ದ ನಿರ್ದೇಶಕರಾಗಿದ್ದಾರೆ.

                      ಅಂತಾರಾಷ್ಟ್ರೀಯ ಮಟ್ಟದ' ಎ' ದರ್ಜೆ ವಿಜ್ಞಾನಿಗಳೂ ಆಗಿರುವ ಶ್ರೀಯುತ ಡಾ.ಶಿವಪ್ರಸಾದ ರವರು  ಅಕಾಡೆಮಿಯ ನೇತೃತ್ವ ವಹಿಸಿರುವುದು ನಮ್ಮ ಭಾಗ್ಯವೇ ಸರಿ. ಇವರು ತಮ್ಮ  ಕಂಗಳಲ್ಲಿ ನವಭಾರತ, ನವಕರ್ನಾಟಕ ನಿರ್ಮಾಣದ ದೂರದೃಷ್ಟಿಯನ್ನು ಹೊಂದಿದ್ದಾರೆ.ಹೆಸರಿಗೆ ತಕ್ಕಂತೆ ಗುಣದಲ್ಲಿ, ಜ್ಞಾನದಲ್ಲಿ, ಆಚಾರದಲ್ಲಿ,ವಿಚಾರಗಳಲ್ಲಿ ,ಬದ್ಧತೆಯಲ್ಲಿ, ಶಿವನ ವರ ಪ್ರಸಾದವೇ ಆಗಿರುವ ಶ್ರೀ ಶಿವಪ್ರಸಾದರವರು ನಮ್ಮಲ್ಲಿರುವ ಸಾಂಪ್ರದಾಯಿಕ ಶಿಕ್ಷಣದ ಬೋಧನಾ ಪದ್ಧತಿಗಳಿಗಿಂತ ವಿಭಿನ್ನವಾಗಿ ವಿಶಿಷ್ಟವಾಗಿ ಪರಿಣಾಮಕಾರಿಯಾಗಿ,ಕ್ರಾಂತಿಸ್ವರೂಪದ ತರಗತಿ ಬೋಧನಾ ಕೌಶಲ್ಯಗಳ ಮಾದರಿ ವಿನ್ಯಾಸವನ್ನು ರೂಪಿಸಬೇಕೆಂಬ ಹಂಬಲವುಳ್ಳವರಾಗಿದ್ದಾರೆ.

ನಿರ್ದೇಶಕರಾದ ಡಾ.ಶಿವಪ್ರಸಾದರವರೊಂದಿಗೆ...

               ತಾವು ಕಂಡ ಉನ್ನತ ಶಿಕ್ಷಣದ ತರಗತಿ ಬೋಧನಾ ಸುಧಾರಣೆಯ ಕನಸುಗಳನ್ನು  ಪ್ರಾಧ್ಯಾಪಕರಿಗಾಗಿ ನಡೆಯುತ್ತಿರುವ ವಿಭಿನ್ನ ರೀತಿಯ "ವೃತ್ತಿಬುನಾದಿ ತರಬೇತಿಯ" ಮೂಲಕ ಸಾಕಾರಗೊಳಿಸಲು ಕಂಕಣಬದ್ಧರಾಗಿದ್ದಾರೆ.

"ನಮ್ಮ ದೇಶದ ಭವಿಷ್ಯ ನಮ್ಮ ತರಗತಿ ಕೋಣೆಗಳಲ್ಲಿ ನಿರ್ಮಾಣವಾಗುತ್ತದೆ "ಎಂಬ ಮಹಾತ್ಮಾ ಗಾಂಧೀಜಿಯವರ ನುಡಿಯಂತೆ ಕಾರ್ಯತತ್ಪರರಾಗಿ ನಮ್ಮ ಕರ್ನಾಟಕದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಶ್ರೇಷ್ಠ ಸಂಪನ್ಮೂಲ ಪ್ರಾಧ್ಯಾಪಕರನ್ನು ನಿರ್ಮಾಣ ಮಾಡುವ ಅವರ ಮಹತ್ವಾಕಾಂಕ್ಷೆ ಅದಮ್ಯವಾದದ್ದು.ಸಮಾಜದಲ್ಲಿ  ಅತ್ಯಂತ ಪವಿತ್ರ ಹಾಗೂ ಶ್ರೇಷ್ಠ ಸ್ಥಾನವನ್ನು ಪಡೆದಿರುವ ಶಿಕ್ಷಕ ರಿಂದ ಮಾತ್ರ ದೇಶ ಮಹೋನ್ನತವಾದ ಜ್ಞಾನಸಂಪನ್ನೂಲವನ್ನು ಸೃಷ್ಟಿಸಬಹುದಾಗಿದೆ,ಅಲ್ಲದೇ ದೇಶವನ್ನು ಸುಸ್ಥಿರ ಅಭಿವೃದ್ಧಿಯತ್ತ ಕೊಂಡೊಯ್ಯಬಹುದು  ಎಂಬ ಶ್ರೀ ಶಿವಪ್ರಸಾದ ಗುರುಗಳ ಅಚಲ ವಿಶ್ವಾಸ ,ಶಿಕ್ಷಣ ಹಾಗೂ ಶಿಕ್ಷಕರ ಬಗ್ಗೆ ಅವರಲ್ಲಿರುವ ಪವಿತ್ರ ದೃಷ್ಟಿಕೋನವನ್ನು ಬಿಂಬಿಸುತ್ತದೆ.
      "ಗುರು ಬ್ರಹ್ಮ ಗುರು ವಿಷ್ಣು 

     ಗುರುದೇವೋ ಮಹೇಶ್ವರ

    ಗುರು ಸಾಕ್ಷಾತ್ ಪರಬ್ರಹ್ಮ
        ತಸ್ಮೈ ಶ್ರೀ ಗುರುವೇನಮಃ"
ಶ್ಲೋಕದಂತೆ 'ಗುರು' ದೇವರಿಗಿಂತ ಮಹತ್ವದ ಸ್ಥಾನವನ್ನು ಹೊಂದಿದ್ದು, ಆತ ಇಂದಿನ  ಆಧುನಿಕ ಲೋಕವನ್ನು ಮಾರ್ಗದರ್ಶಿಸುವ, ಉದ್ಧರಿಸುವ ಶಕ್ತಿ ಯಿಂದ ಮುನ್ನುಗ್ಗಬೇಕಾದ ಅಗತ್ಯವಿದೆ.ಕ್ಷಣ ಕ್ಷಣ ಕ್ಕೂ ಬದಲಾಗುತ್ತಿರುವ ಜಗತ್ತಿನ ಸವಾಲುಗಳಿಗೆ ಶಿಕ್ಷಣದ ಮೂಲಕ ಉತ್ತರಗಳನ್ನು ಕಂಡುಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ.ಅದಕ್ಕೆ ತಕ್ಕಂತೆ ನಮ್ಮ ಶಿಕ್ಷಣ ಪದ್ಧತಿಗಳಲ್ಲಿಯೂ ಪರಿವರ್ತನೆಗಳನ್ನು ಅಳವಡಿಸಿಕೊಂಡು ನವಪೀಳಿಗೆಯನ್ನು ಮುನ್ನಡೆಸಬೇಕಾದ ಜವಾಬ್ದಾರಿ ಗುರುಗಳ ಮೇಲಿದೆ. ಇಂತಹ ನ್ಯಾನೊ ಜಗತ್ತಿನ  ಸಂದಿಗ್ಧ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಲು ನಮ್ಮನ್ನು ಸಕಲ ರೀತಿಯಿಂದ ಸಜ್ಜುಗೊಳಿಸುವ ಕಾರ್ಯದಲ್ಲಿ ಡಾ ಶಿವಪ್ರಸಾದರವರು ಶ್ರದ್ಧೆಯಿಂದ ನಿರತರಾಗಿದ್ದಾರೆ ಹಾಗೂ ಅವರ ಕನಸಿನ ಯೋಜನೆಯಲ್ಲಿ ನಾವು ಭಾಗಿಗಳಾಗುತ್ತಿದ್ದೇವೆ   ಎಂಬುದೇ ನಮಗೆ ಹೆಮ್ಮೆಯ ಸಂಗತಿಯಾಗಿದೆ.

ಜ್ಞಾನಸಾಗರ ಕೆ.ಸಾಗರ್ ರವರೊಂದಿಗೆ.....

ಅವರು ನಮಗೆ ನೀಡಿದ ತರಬೇತಿಯ ನವ ವಿಧಾನ, ತರಗತಿಯ  ಬೋಧನಾ ನವ ವಿನ್ಯಾಸ,೨೧ ಅಂಶಗಳ ಬೋಧನೆಯ ವೈವಿಧ್ಯತೆ,ಡಾ.ರಹಮತ್ ತರೀಕೆರೆ,ಡಾ.ರಾಜೇಂದ್ರ ಚೆನ್ನಿ,ಡಾ.ನಟರಾಜ ಬೂದಾಳು,ಡಾ.ನಟರಾಜ ಹುಳಿಯಾರು,ಡಾ.ವಿನಯಾ ಒಕ್ಕುಂದ, ಡಾ ಎಂ ಡಿ ಒಕ್ಕುಂದ,ಡಾ ಅಣ್ಬನ್, ಡಾ.ವಿ. ಎಸ್. ಮಾಳಿ ಮುಂತಾದ ಸಾಹಿತಿಗಳು ಹಾಗೂ ಶ್ರೇಷ್ಠ ವಿದ್ವಾಂಸರ ಮಾರ್ಗದರ್ಶನ,ಚರ್ಚೆ, ಸಂವಾದಗಳು ನಮ್ಮ ಜ್ಞಾನದ,ಅರಿವಿನ ಪರಿಧಿಯನ್ನು ವಿಸ್ತರಿಸಿದವು.ನಮ್ಮ ನಾಡಿನ  ಪ್ರಸಿದ್ಧ ಸಾಹಿತಿ ಚಿಂತಕರಾಗಿರುವ  ಡಾ. ರಹಮತ್ ತರೀಕೆರೆ ಯವರ ಪಠ್ಯದ ಮರು ವ್ಯಾಖ್ಯಾನ, ಅಂತರ್ ಪಠ್ಯೀಯತೆ ಹಾಗೂ ಸಂಶೋಧನೆಯ ಸ್ವರೂಪ,ವಿಧಾನ ಕುರಿತು ಪರಿಣಾಮಕಾರಿ ಉಪನ್ಯಾಸ,ಚರ್ಚೆಗಳು ನಮ್ಮನ್ನು ಪಠ್ಯದ ವಿಶಾಲವಾದ ಮರು ಓದಿಗೆ ತೊಡಗಿಕೊಳ್ಳುವಂತೆ ಪ್ರೇರೇಪಿಸಿತು.ಡಾ.ಶ್ರೀಮತಿ ವಿನಯಾ ಒಕ್ಕುಂದ ರವರ "ಜನ್ನನ ಯಶೋಧರ ಚರಿತೆ ; ಒಂದು  ಸ್ತ್ರೀವಾದಿ ಅಧ್ಯಯನ "ವಿಷಯದ ಉಪನ್ಯಾಸ  ಸ್ತ್ರೀವಾದದ ಸೂಕ್ಷ್ಮ ಒಳನೋಟಗಳನ್ನು, ಸಾಹಿತ್ಯದ ಬಹುಶಿಸ್ತೀಯ ಆಧ್ಯಯನದ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟಿತು.'ರವಿ ಕಾಣದ್ದನ್ನು ಕವಿ ಕಂಡ ಕವಿಯೂ ಕಾಣದ್ದನ್ನು ಒಬ್ಬ ಸ್ತ್ರೀ ಕಾಣುವ ಜಗತ್ತು ನಮ್ಮ ಕಣ್ಣ ಮುಂದಿದೆ ಎಂಬ ಸತ್ಯವನ್ನು ಅರಿಯುವಂತೆ ಮಾಡಿತು.
                               ಮತ್ತೊಬ್ಬ ವಿದ್ವಾಂಸರಾದ ಶ್ರೀ ಡಾ. ವಿ ಎಸ್ ಮಾಳಿ ಯವರ "ಪ್ರಾಚೀನ ಹಾಗೂ ಮಧ್ಯಕಾಲೀನ ಕನ್ನಡ ಸಾಹಿತ್ಯ ಗಳ ತೌಲನಿಕ ಅಧ್ಯಯನ"ದ ಉಪನ್ಯಾಸ ನಮ್ಮದೇ ಸಾಹಿತ್ಯದಲ್ಲಿರುವ ಅನನ್ಯತೆಗಳನ್ನು ಕುರಿತು ಅಧ್ಯಯನ ಮಾಡಲು ನಮ್ಮನ್ನು ಪ್ರೇರೇಪಿಸಿತು.ಹೀಗೆ ಪ್ರತಿ ದಿನದ ತರಬೇತಿಯಲ್ಲಿಯೂ ಕನ್ನಡದ ಮಹತ್ವದ ಚಿಂತಕರೊಂದಿಗೆ ಅನುಸಂಧಾನಿಸುವ ಯೋಗ ನಮ್ಮನ್ನುನವನವೋನ್ಮೇಶಶಾಲಿಗಳನ್ನಾಗಿ ಮಾಡಿದೆ.
ರಾಜ್ಯಮಟ್ಟದ ಅಕಾಡೆಮಿಯೊಂದರ  'ನಿರ್ದೇಶಕರು' ಎಂಬ ಉನ್ನತ ಹುದ್ದೆಯಲ್ಲಿದ್ದರೂ,ಸ್ವತಃ ವಿಜ್ಞಾನಿ ಗಳಾಗಿದ್ದರೂ, ಡಾ.ಶಿವಪ್ರಸಾದ ರವರಲ್ಲಿನ  ಬಸವಣ್ಣನವರ ಸುಜ್ಞಾನ,ಸುಗುಣಶೀಲತೆ,ಅಲ್ಲಮನ  ನಿಗರ್ವ,ನಿರಹಂಕಾರ,ಗಾಂಧೀಜಿಯವರ ಸಹನೆ,ಶಾಂತಿ, ಸಜ್ಜನಿಕೆ,ಭುಜದ ಮೇಲೆ ಕೈಹಾಕಿ ಮಾತನಾಡಿಸುವ ಸರಳತೆ,ಅಬ್ದುಲ್ ಕಲಾಂ ರವರ ದೂರದೃಷ್ಟಿಯ ಕಾಯಕ ನಿಷ್ಠತೆ,ವಿಜ್ಞಾನಿ  ಸಿ ಎನ್ ಆರ್ ರಾವ್ ರವರ ಸಂಶೋಧನಾ ಮನೋಭಾವ, ಯಾವುದೇ ಸಮಸ್ಯೆಯನ್ನು ಸಮಚಿತ್ತದಿಂದ ಪರಿಹರಿಸುವ ಅವರ ಸಮಸ್ಯೆಗಳನ್ನು ಪರಿಹಾರ ಕೌಶಲ,ತರಬೇತಿಯ ಕಾರ್ಯಕ್ರಮದಲ್ಲಾಗುವ ಸಣ್ಣ ವ್ಯತ್ಯಾಸಗಳಿಗೂ ನಿರ್ದಾಕ್ಷಿಣ್ಯವಾಗಿ ಕ್ಷಮೆ ಕೇಳುವ ಅವರ ಸಹೃದಯ ವೈಶಾಲ್ಯತೆ , ಔದಾರ್ಯಗಳು,ಯಾವುದೇ ಕಾರ್ಯವನ್ನು ಅಚ್ಚುಕಟ್ಟಾಗಿ ಆಯೋಜಿಸುವ ವೈಜ್ಞಾನಿಕ ಮನೋಭಾವ, ಇಂದಿನ ಮಡಿವಂತಿಕೆಯ ಬೌದ್ಧಿಕ ಜಗತ್ತಿಗೆ ಮಾದರಿಯಾಗಿವೆ.
              ಅವರಲ್ಲಿನ ವಿಜ್ಞಾನಿ ಶೈಕ್ಷಣಿಕ ತತ್ವಜ್ಞಾನದ ಆಧಾರದ ಮೇಲೆ  ಉನ್ನತ ಶಿಕ್ಷಣದ ಹೊಸ  ಜಗತ್ತಿನ ನಿರ್ಮಾಣಕ್ಕೆ ಹಾತೊರೆಯುತ್ತಿದ್ದಾನೆ.ಡಾ. ಶಿವಪ್ರಸಾದರವರು  ಸತ್ಯ , ಶಿವ  ತತ್ವಗಳ ಸುಂದರರೂ ಆಗಿದ್ದಾರೆ.  ಶಿಕ್ಷಣದ ಮುಖ್ಯವಾಹಿನಿಯ ಸ್ವರೂಪ ಇಂದು ಬದಲಾಗಿದೆ.ಅಂಗೈಯಲ್ಲಿನ ಸ್ಮಾರ್ಟ್ ಫೋನ್ ಗಳಿಂದಾಗಿ  'ವಿಶ್ವರೂಪ'ದ ದರ್ಶನ ಸಾಧ್ಯವಾಗಿದೆ. ಮನೆಯಲ್ಲಿ ಸ್ಮಾರ್ಟ ಕಂಪ್ಯೂಟರ್ ಗಳು ಬಂದು ಕುಳಿತಿವೆ. ಡಿಜಿಟಲ್  ಮಾಧ್ಯಮಗಳ ಆಧುನಿಕ ತಂತ್ರಜ್ಞಾನ ಅಬಾಲವೃದ್ದರಾದಿಯಾಗಿ ಎಲ್ಲರನ್ನೂ ಸಮ್ಮೋಹನಗೊಳಿಸಿದೆ.

              ನಮ್ಮ ಪೌರಾಣಿಕ ಕಾಲದ ದೇವಾನುದೇವತೆಗಳು ಕುಳಿತಲ್ಲಿಯೇ ತ್ರಿಲೋಕಗಳನ್ನು ಜಾಲಾಡುತ್ತಿದ್ದ ,ನಮಗೆ ಸಿನಿಮಾಗಳಲ್ಲಿ ಮಾತ್ರ ಕಾಣಸಿಗುತ್ತಿದ್ದ  'ಮಾಯಾದರ್ಪಣ' ಇಂದು ಬದಲಾದ ಕಾಲಘಟ್ಟದಲ್ಲಿ  'ಅಂತರ್ಜಾಲ' ವೆಂಬ ತಾಂತ್ರಿಕ ಶಕ್ತಿಯಾಗಿ ಹೆಸರು ಪಡೆದು ವಿಶ್ವದ ರಹಸ್ಯಗಳನ್ನೆಲ್ಲಾ ಬಚ್ಚಿಟ್ಟುಕೊಂಡಿರುವ  'ಮಾಯಾಲೋಕ'ವಾಗಿ ನಮ್ಮನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.ವಿದ್ಯಾಲಯಗಳಲ್ಲಿ ಸ್ಮಾರ್ಟ್ ಕ್ಲಾಸ್ ಗಳು ನಿರ್ಮಾಣವಾಗುತ್ತಿವೆ.ಇಂತಹ ಸಂದರ್ಭದ ಈ ತರಬೇತಿ ನಮ್ಮಗೆ ನವಪೀಳಿಗೆಯನ್ನು ಮುನ್ನಡೆಸುವ ಕೈದೀವಿಗೆಯಾಯಿತು ಎಂಬುದರಲ್ಲಿ ಸಂದೇಹವಿಲ್ಲ .


2 comments:

  1. ತಮ್ಮ ತರಬೇತಿಯ ಅನುಭವಗಳನ್ನು ಎಳೆಎಳೆಯಾಗಿ ಬಿಡಿಸಿದ್ದಿರಿ,ಒಬ್ಬ ಶ್ರೇಷ್ಠ ವಿಜ್ಞಾನಿ ಯನ್ನು ನಮಗೆ ಪರಿಚಯ ಮಾಡಿದ್ದಿರಿ.....ಧನ್ಯವಾದಗಳು ತಮಗೆ

    ReplyDelete
  2. very nice.
    let it motivate you to achieve more in coming days.

    ReplyDelete

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...