Total Pageviews

Tuesday 17 April 2018

ಅಹಲ್ಯೆ

                                              ಅಹಲ್ಯೆ
'ಕಡಲಾಚೆಗಿನ ಮಾಯಾಲೋಕ
ತೋರಿತೊಂದು ಬೆಳ್ಳಿಬೆಳಕ
ದೂತೆಯೊಬ್ಬಳು ಪ್ರತ್ಯಕ್ಷ
ಕೇಳಿದೆ
"ಎಲ್ಲಿರುವಳು, ಹೇಗಿರುವಳು 
ನನ್ನ ದೇವತೆ ?
ಕಾದಿರುವಳೇ ನನಗಾಗಿ
ಹಂಬಲಿಸಿರುವೆ ನೆನೆ ನೆನೆದು 
ಎದೆಯ ನೆನಪುಗಳ 
ಚಿತ್ರ ಚಿತ್ತಾರ
ಕಾಣುವ ತವಕ ಅವಳ
ಮೊಲ್ಲೆ ಮೊಗದ ಮಂದಹಾಸ
ಕಾಡುತಿವೆ ಒಲುಮೆ ತೇರ 
ರಂಗು ರಂಗಿನ ಕಲಾಕೃತಿ
ತೇರನೆಳೆಯುವ ಬಯಕೆ
ಒಂದಾಗಿ ಕುಣಿ ಕುಣಿದು
ಸಂಭ್ರಮಿಸಿ ಕಳೆದು ಹೋಗುವ ಹವಣಿಕೆ
ಬರಹೇಳಿದಳೆ ನನ್ನನ್ನು ?"
ಪರಿತಪಿಸಿದರೆ, 
 ಧೂತೆಯೆಂದಳು
"ಆಕೆಯೀಗ ಶಿಲೆಯಾದ ಅಹಲ್ಯೆ
ಬೆಂದಿರುವಳು ದ್ವೇಷ ಅಸಹನೆ 
ತರತಮಗಳ ಬಿಸಿಲ ಬೇಗೆಗೆ ಸಿಲುಕಿ
ನಡುಗಿರುವಳು ಮರಗಟ್ಟುವ 
ಮಾತುಗಳ ಚಳಿಗೆ ನಲುಗಿ
ಮುಕ್ತಿ ಅಂದು ,
ಎಂದು ನಿನ್ನ ಪ್ರೇಮ ಸ್ಪರ್ಶ"
"ಅಯ್ಯೋ ಘೋರವೆ
ನಡೆ ಬೇಗ
ಆದರೆ... ನಾನು ರಾಮನಲ್ಲ"
ಅಂದರೂ ಏರಿತು ಪುಷ್ಪಕ ವಿಮಾನ
ಹುಡುಕುತ
"ಅಹಲ್ಯೆ  ಅಹಲ್ಯೆ
ಹ್ಞಾ ! ಇದೆಂತಹ ಕೋಟೆ
ಜಾತಿ ವರ್ಣ ದ್ವೇಷದ 
ಕಬಂಧ ಬಾಹು ಚಾಚಿವೆಯಲ್ಲ
ಶಿಲೆಯಂತೆ 
ಮುಕ್ತಗೊಳಿಸುವುದೆಂತು ನನ್ನ 
ಪ್ರೇಮ ದೇವತೆಯನ್ನು ಈ ಶಿಲಾಬಂಧನದಿಂದ .....?
ಓ ಪ್ರೇಮವೇ  
ನೀ ಮಂತ್ರದಂಡವಾಗು
 ದಾರಿದೀಪವಾಗು ಬಾಳ ಜ್ಯೋತಿಯಾಗು
ಮುಕ್ತಿ ನೀಡು ಬಾ 
ನಾನು ಬೈಚಿಟ್ಟ ಬಯಕೆಗಳಿಗೆ 
ಸ್ಪರ್ಶಿಸು ,ಛಿದ್ರವಾಗಲಿ  ಭದ್ರಕೋಟೆ
ಅಹಲ್ಯೆ! ಅಹಲ್ಯೆ! ನನ್ನ ದೇವತೆ
ನಾವಿನ್ನು ಮುಕ್ತ ,ಬಂಧಮುಕ್ತ 
 
ಆಹಾ !ನೀನೆಂತಹ ಮಾಯಾವಿ 
ಕರುಣಾಳು ,ಶಿಲೆಯನ್ನೇ ಕರಗಿಸಿ
ಅಹಲ್ಯೆಯನ್ನಾಗಿಸಿದೆ
ಕಟ್ಟಿದೆ ಹೃದಯಗಳ 
ಶುಧ್ಧ ಪ್ರೇಮದ ಸೇತುವೆ"
     
                                  








1 comment:

  1. ಅಹಲ್ಯೆಯ ಕಲ್ಪನಾ ಲೋಕದಲ್ಲಿ ತೇಲಿದಹಾಗಿದೆ
    ಮನ ಮುಟ್ಟಿತು ಬರಹ ದೇವರು

    ReplyDelete

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...