Total Pageviews
Thursday 12 September 2019
ಜಗದ್ವಂದ್ಯ ಭಾರತ
ಭಾರತ ವೈವಿಧ್ಯಮಯ ಧರ್ಮ ಜಾತಿ ಮತ ಪಂಥಗಳೆಂಬ ಅನನ್ಯವಾದ ಫಲಪುಷ್ಪಗಳ ನಂದನವನ. ಅಖಂಡತೆ ಹಾಗೂ ಏಕತೆಯ ಸೌಂದರ್ಯದಲ್ಲಿ ನಳನಳಿಸುತ್ತಿರುವ ಇಲ್ಲಿಯ ಅಭೂತಪೂರ್ವ ವಿಭಿನ್ನ ಸಂಸ್ಕೃತಿಮಣಿಗಳ ಸಮ್ಮಿಲನ ಒಂದು ಮಹಾಬೆರಗು ಹಾಗೂ ಬೆಳಕನ್ನು ಸೃಷ್ಟಿಸಿದೆ." ಅಹಿಂಸೆಯೇ ಪರಮೋಧರ್ಮ" ಎಂದು ಸಾರಿದ ಜೈನ ಧರ್ಮದ ಉದ್ಯಾನವನವಾಗಿ, ಪ್ರೀತಿ,ಅನುಕಂಪ, ದಯೆ,ಮಾನವೀಯತೆ, ಅಂತಃಕರಣ, ಜ್ಞಾನಗಳನ್ನೇ ತನ್ನ ಕೊರಳ ಕುಸುಮಗಳನ್ನಾಗಿ ಧರಿಸಿ ಜಗತ್ತಿನೆಲ್ಲೆಡೆ ಪರಿಮಳವನ್ನೇ ಪಸರಿಸಿದ ಬುದ್ಧನ ಪವಿತ್ರ ನೆಲವಾಗಿ ; ಶೌರ್ಯ, ತ್ಯಾಗ, ಸೇವೆ, ಆಧ್ಯಾತ್ಮದ ದಾರ್ಶನಿಕ ಗುರುನಾನಕರು ಮೆಟ್ಟಿದ ಧರೆಯಾಗಿ, ಸಮಾನತೆ, ಆಧ್ಯಾತ್ಮ ಸಾಧನೆ,ಸಮಾಜ ಸುಧಾರಣೆಯ ಹೆಮ್ಮರವನ್ನು ಬೆಳೆಸಿ ಎಳೆಹೂಟೆಗೆ ಕೊರಳು ಕೊಟ್ಟ ಸಹಸ್ರಾರು ಶರಣರ ಪುಣ್ಯಭೂಮಿಯಾಗಿ ; ಈ ದೇಶದ ಆತ್ಮವಾಗಿದ್ದು, ಮಹಾತ್ಮನಾದ ಗಾಂಧೀಜಿ ನಡೆದಾಡಿದ ನೆಲವಾಗಿ, ಮೀರಾಬಾಯಿಯ, ಜಗನ್ನಾಟಕ ಸೂತ್ರಧಾರ ಮಾಧವ ನಲಿದಾಡಿದ ಬೃಂದಾವನವಾಗಿ, ಶಿವನ ತಾಂಡವ ನೃತ್ಯಕ್ಕೆ ಹಿಮಾಲಯವಾಗಿ, ನಿರ್ವಯಲ ನೀಲವನೇ ತೋರಿದ ಸೂಫಿಗಳ ತಾಣವಾಗಿ, ಜೀವಸಂಕುಲಕ್ಕೆಲ್ಲಾ ಹಸಿರುಸಿರನ್ನು ನೀಡಿದ ಯಮುನೆ ಗಂಗೆಯರನ್ನು ತಬ್ಬಿಕೊಂಡ ಮಾತೆಯಾಗಿ, ಭರತಭೂಮಿಯ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ಆಧ್ಯಾತ್ಮಿಕ ಹಿರಿಮೆ ಅವರ್ಣನೀಯ ಹಾಗೂ ಅನನ್ಯ. ಜಗತ್ತಿನ ಧರ್ಮಗಳೆಲ್ಲಾ ತಮ್ಮ ತಮ್ಮ ಅಸ್ಮಿತೆಗಾಗಿ ಏಕಾಂಗಿಯಾಗಿ ಹೋರಾಡುತ್ತಿರುವ ಸಮಕಾಲೀನ ಸಂದಿಗ್ಧ ಸಂದರ್ಭದಲ್ಲಿ ಅಗಣಿತ ಜಾತಿ, ಧರ್ಮ, ಮತ, ಪಂಗಡಗಳನ್ನು ಶಿಶುಗಳಂತೆ ತನ್ನೊಡಲಲ್ಲಿಟ್ಟುಕೊಂಡು, ಅತ್ತು ಹಠವಿಡಿದಾಗ ಸಮಾಧಾನದಿಂದ ತೂಗಿ ಪೋಷಿಸಿ ಭಾವೈಕ್ಯತೆಯ ತಪಸ್ಸನ್ನಾಚರಿಸುತ್ತಿರುವ ಭಾರತಿ ನಮ್ಮ ಹೆಮ್ಮೆ ಹಾಗೂ ಸ್ವಾಭಿಮಾನದ ದಿವ್ಯ ಪ್ರತಿರೂಪ. ಹಿಂದೂ ಮುಸಲ್ಮಾನರೆನ್ನದೇ ಐಕ್ಯತೆಯ ಸದ್ಭಾವದಲ್ಲಿ ಮಿಂದು ಮೊನ್ನೆ ತಾನೆ ಆಚರಿಸಿದ ಮೊಹರಂ ಹಬ್ಬ ನಮ್ಮ ದೇಶದ ಇಂತಹ ಐಕ್ಯತೆಯ ಸರ್ವಧರ್ಮ ಸಮಭಾವದ ಪರಂಪರೆಯಲ್ಲಿ ಹರಿಯುತ್ತಿರುವ ಒಂದು ಅನುಪಮ ಪರ್ವನದಿ. ಅವರಿವರೆನ್ನದೇ ಸಕಲರಿಗೂ ಸಕ್ಕರೆಯ ಸಿಹಿಯನ್ನು ಹಂಚಿ ಲೇಸನೇ ಬಯಸುವ ಜಾತ್ರೆ, ಉರುಸ್, ಮೊಹರಂ, ಗಣೇಶ ಚತುರ್ಥಿಯಂತಹ ಹಬ್ಬಗಳು ನಮ್ಮ ವಸುಧೈವ ಕುಟುಂಬಕಂ ಎಂಬ ಮಹಾಪರಂಪರೆಯ ರೂಪಕಗಳಲ್ಲಿ ಅನನ್ಯವಾದವುಗಳು. ಈ ಎಲ್ಲ ಸಂಗತಿಗಳಿಗೆ ಅಲಂಕಾರ ಸ್ವರೂಪವನ್ನು ನೀಡುವ ಹಾಗೆ ಇತ್ತೀಚೆಗೆ ಬಿಡುಗಡೆಯಾದ ಒಂದು ಕೃತಿ ನನ್ನ ಗಮನವನ್ನು ಅತೀವವಾಗಿ ಸೆಳೆಯಿತು.
Subscribe to:
Post Comments (Atom)
ಉಳುಕು ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು ...
-
ಕುಲದ ನೆಲೆಯನರಸುತ್ತಾ.... ನಮ್ಮ ನಾಡಿನ ಖ್ಯಾತ ಸಾಹಿತಿಗಳು, ಚಿಂತಕರಾದ ಡಾ.ಗುರುಲಿಂಗ ಕಾಪಸೆ ಯವರು " ಪಂಪ ರನ್ನ ರಂತಹ ವ...
-
ಅರ್ಧಾಂಗಿ ಪುರಾಣ! ನಾನು ಎಂದಿನಂತೆ ನಿತ್ಯಕರ್ಮಗಳ ಮುಗಿಸಿ ಕರ್ತವ್ಯಕ್ಕಾಗಿ ಸಿದ್ಧವಾಗುತ್ತಿರುವಾಗ ಕೇಳಿದಳು ಸಾಕಿಯೊಮ್ಮೆ - " ಈ ಹಳೆಯ ಅಂಗಿಯನ್ನ ಹಾಕ್ಕೋ...
-
ಉಳುಕು ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು ಕತ್ತಲೆಯ ಧಿಮಾಕನ್ನೊರೆಯಲು ಸಾಕು ಉಬ್ಬಿದ ಅಸ್ಥಿ ಮಜ್ಜೆಗಳು ಜಾ...
No comments:
Post a Comment