Total Pageviews
Saturday 9 March 2019
ಚಂದ್ರಗಿರಿಯ ತೀರದಲ್ಲಿ ಮಹಿಳೆ...
ಚಂದ್ರಗಿರಿಯ ತೀರದಲ್ಲಿ ಮಹಿಳೆ...
ವಿಶ್ವ ಮಹಿಳಾ ದಿನಾಚರಣೆಯ ಸಂದರ್ಭ. ಅಂತಿಮ ವರ್ಷದ ಬಿ ಎ ತರಗತಿಯಲ್ಲಿ ( ಐಚ್ಛಿಕ ಕನ್ನಡ ವಿಷಯ) ಸ್ತ್ರೀ ಸಂವೇದನೆಯ, ಬಂಡಾಯ ಲೇಖಕಿಯರಾದ ಸಾ.ರಾ.ಅಬೂಬಕ್ಕರ್ ರವರ " ಚಂದ್ರಗಿರಿಯ ತೀರದಲ್ಲಿ " ಕಾದಂಬರಿಯ ಕಥಾವಸ್ತುವನ್ನು ಕುರಿತು ಚರ್ಚಿಸುತ್ತಿದ್ದೆ. ಸ್ತ್ರೀ ಶೋಷಣೆಯ ಕರಾಳ ಮುಖವನ್ನು ಬಯಲು ಮಾಡುವ ಕಾದಂಬರಿ ಧರ್ಮ, ಸಂಪ್ರದಾಯ, ಸಾಮಾಜಿಕ ವ್ಯವಸ್ಥೆ ಎಂಬ ಸ್ಥಾಪಿತ ಕಟ್ಟಳೆಗಳ ಮಧ್ಯೆ ನರಳುವ ಸ್ತ್ರೀಯ ದುಸ್ಥಿತಿಯನ್ನು ಇನ್ನಿಲ್ಲದಂತೆ ಕಟ್ಟಿಕೊಡುತ್ತದೆ. ಮಹಮ್ಮದ್ ಖಾನ್ ಎಂಬ ಒರಟು ಧರ್ಮಬೀರುವಿನ ಕೈಯ್ಯಲ್ಲಿ ಸಂಪ್ರದಾಯದ ಸಂಕೋಲೆಗೆ ಸಿಲುಕಿ ನಲುಗುವ ಫಾತೀಮಾಳ ಜೀವ ಮನೆಯ ಮುಂದೆ ನಿಶಾಂತವಾಗಿ ಹರಿಯುತ್ತಿದ್ದ ಚಂದ್ರಗಿರಿಯ ನದಿಗೆ ಅರ್ಪಣೆಯಾಗಬಾರದಿತ್ತೆ ಎಂದು ಹಂಬಲಿಸುವುದನ್ನು ನೆನೆದರೆ ಎಂಥವರ ಹೃದಯವೂ ಕರಗಿಹೋಗುತ್ತದೆ. ವಿಶ್ವ ಮಹಿಳಾ ದಿನದಂದು ನನ್ನ ತರಗತಿಯಲ್ಲಿ ನಡೆಸಿದ ಈ ಚರ್ಚೆ ಒಂದು ಬಗೆಯಲ್ಲಿ ಔಚಿತ್ಯಪೂರ್ಣ ಹಾಗೂ ಅರ್ಥಪೂರ್ಣತೆಗೆ ಕಾರಣವಾದರೂ ಪಟ್ಟಭದ್ರ ಧಾರ್ಮಿಕ ಸಮಾಜದಲ್ಲಿ ನಡೆಯುವ ಮಹಿಳಾ ಶೋಷಣೆ ಯನ್ನು ಕುರಿತು ಗಂಭೀರವಾಗಿ ಚಿಂತಿಸುವಂತೆ ಮಾಡಿತು.೨೮ ವರ್ಷದ ದೈತ್ಯ ಅಜಾನುಬಾಹು ಒರಟು ಸ್ವಭಾವದ ಮಹಮ್ಮದ್ ಖಾನ್ ನೊಂದಿಗೆ ಮದುವೆಯಾದಾಗ ಕುಸುಮದಂತಿದ್ದ ಫಾತೀಮಾಳ ವಯಸ್ಸು ಕೇವಲ ೧೧ ವರ್ಷ ಎಂದಾಕ್ಷಣವೇ ಹಲ್ಲಿಯಂತೆ ಲೊಚಗುಟ್ಟಿ ಮರುಗಿದ ನನ್ನ ತರಗತಿಯ ವಿದ್ಯಾರ್ಥಿಗಳಲ್ಲಿರುವ ಮಾನವೀಯ ಅನುಕಂಪದ ಸಂವೇದನೆ ಈ ಸಂಪ್ರದಾಯವಾದಿಗಳಲ್ಲೇಕಿಲ್ಲ ಎಂಬುದು ನನಗೆ ಈಗಲೂ ಅಚ್ಚರಿಯಾಗಿ ಕಾಡುತ್ತದೆ.
ಇದು ಯಾವುದೇ ಒಂದು ಧರ್ಮ, ಜಾತಿ, ಮತಕ್ಕೆ ಸಂಬಂಧಿಸಿದ ಸಂಗತಿಯೆಂದು ನಾನು ಚರ್ಚಿಸಲು ಬಯಸುವುದಿಲ್ಲ. ಬಹುತ್ವದ ಸಂಸ್ಕೃತಿಯನ್ನು ಮಡಿಲಲ್ಲಿಟ್ಟುಕೊಂಡು ತೂಗುತ್ತಿರುವ ಭಾರತೀಯ ಸಮಾಜದಲ್ಲಿ ಅಲ್ಲಲ್ಲಿ ಬಾಲ್ಯವಿವಾಹಗಳು ಘಟಿಸುತ್ತಲೇ ಇವೆ.ನಿಷೇಧದ ಕಾನೂನಿದ್ದರೂ ಲೆಕ್ಕಿಸದೇ ಜವಾಬ್ದಾರಿಯುತವೆಂದು ಕೊಚ್ಚಿಕೊಳ್ಳುವ ತಂದೆ ತಾಯಿಗಳೇ ಮುಂದೆ ನಿಂತು ಗುಪ್ತವಾಗಿ ನಡೆಸುವ ಬಾಲ್ಯವಿವಾಹಗಳು ಸ್ತ್ರೀಸಮಾಜವನ್ನು ಶೋಷಿಸುವ ಮತ್ತೊಂದು ಪರಿಯನ್ನು ಬಣ್ಣಿಸುತ್ತವೆ.ಇದು ಸಂಪ್ರದಾಯ ಪರಂಪರೆಯ ಹೆಸರಿನಲ್ಲಿ ಎಲ್ಲ ಮತ ಧರ್ಮಗಳಲ್ಲಿಯೂ ಅನೂಚಾನವಾಗಿ ನಡೆದುಕೊಂಡು ಬಂದಿದೆ.ಜಗತ್ತಿನ ಮನುಕುಲದ ಕಲ್ಮಶಗಳನ್ನೆಲ್ಲಾ ತೊಳೆದು ನುಂಗಿ ವಿಷಕಂಠೆಯಾದ ಚಂದ್ರಗಿರಿಯ ನದಿಯಂತೆ, ಫಾತೀಮಾ ತನ್ನ ಗಂಡನ ಪಾಪಕರ್ಮಗಳನ್ನೆಲ್ಲಾ ಮೌನಿಯಾಗಿ ಸಹಿಸುತ್ತಲೇ ಅನುಭವಿಸಿ ಸಂಸಾರದ ಅನುಭಾವಿಯಾಗಿ ಹರಿದವಳು.ನದಿಯ ಒಂದು ಕಡವಿನಲ್ಲಿ ,ಹೆಂಡತಿ ಫಾತೀಮಾಳನ್ನೇ ಕ್ರೂರವಾಗಿ ಬೆತ್ತದೇಟಿನಿಂದ ಹಿಂಸಿಸುವ ಧರ್ಮಬೀರುವಾಗಿ, ಕಟ್ಟಾ ಸಂಪ್ರದಾಯವಾದಿಯಾಗಿದ್ದ ಕಠಿಣ ಹೃದಯದ ಮಹಮ್ಮದ್ ಖಾನ್, ಬದಲಾವಣೆಯನ್ನು ಕನಸಿನಲ್ಲಿಯೂ ಬಯಸದ, ನಿಂತಲ್ಲಿಯೇ ನಿಂತ ಕೊಳದ ಜಲಧಿಯಂತೆ ಮಲೆತ ಧರ್ಮವೆಂಬ ಸ್ಥಾವರದ ಸಂಕೇತವಾದರೆ, ಅದೇ ನದಿಯ ಮತ್ತೊಂದು ದಂಡೆಯಲ್ಲಿ ಧಾರ್ಮಿಕ ಸಂಪ್ರದಾಯದ ಆವರಣದಲ್ಲಿದ್ದೂ ನವೋದಯದ ಕಡೆಗೆ ತುಡಿಯುವ ಪ್ರಗತಿಪರ ಚಿಂತನೆಯ ಜಂಗಮದ ಪ್ರತಿನಿಧಿಯಾಗಿ ಮಹಮ್ಮದ್ ಖಾನ್ ರ ಮಗಳು "ನಾದಿರಾ"ಳ ಗಂಡ ರಶೀದ್ ನೆಲೆ ನಿಲ್ಲುತ್ತಾನೆ ಎಂದು ಚರ್ಚಿಸುತ್ತಲೇ ಪಾಠದ ಮಧ್ಯೆ " ರಶೀದ್ ಹಾಗೂ ಮಹಮ್ಮದ್ ಖಾನ್ ಪಾತ್ರಗಲ್ಲಿ ನಿಮಗಿಷ್ಟವಾದ ಪಾತ್ರ ಯಾವುದು?" ಎಂಬ ಒಂದು ಪ್ರಶ್ನೆಯನ್ನೆಸೆದಾಗ ಬಂದ ಉತ್ತರ ನಿರೀಕ್ಷಿತವಾಗಿತ್ತು.
Subscribe to:
Post Comments (Atom)
ಉಳುಕು ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು ...
-
ಕುಲದ ನೆಲೆಯನರಸುತ್ತಾ.... ನಮ್ಮ ನಾಡಿನ ಖ್ಯಾತ ಸಾಹಿತಿಗಳು, ಚಿಂತಕರಾದ ಡಾ.ಗುರುಲಿಂಗ ಕಾಪಸೆ ಯವರು " ಪಂಪ ರನ್ನ ರಂತಹ ವ...
-
ಅರ್ಧಾಂಗಿ ಪುರಾಣ! ನಾನು ಎಂದಿನಂತೆ ನಿತ್ಯಕರ್ಮಗಳ ಮುಗಿಸಿ ಕರ್ತವ್ಯಕ್ಕಾಗಿ ಸಿದ್ಧವಾಗುತ್ತಿರುವಾಗ ಕೇಳಿದಳು ಸಾಕಿಯೊಮ್ಮೆ - " ಈ ಹಳೆಯ ಅಂಗಿಯನ್ನ ಹಾಕ್ಕೋ...
-
ಉಳುಕು ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು ಕತ್ತಲೆಯ ಧಿಮಾಕನ್ನೊರೆಯಲು ಸಾಕು ಉಬ್ಬಿದ ಅಸ್ಥಿ ಮಜ್ಜೆಗಳು ಜಾ...
ಸೂಪರ್ ಸರ್ .. ..ಅದ್ಭುತ ..
ReplyDeleteThank u sir
ReplyDeleteThank u sir
ReplyDeleteReally very nice sir.
ReplyDeleteಧನ್ಯವಾದಗಳು
Deleteತುಂಬಾ ಚೆನ್ನಾಗಿ ಮೂಡಿ ಬಂದಿದೆ ಗುರೂಜಿ
ReplyDeleteತಮಗೆ ಧನ್ಯವಾದಗಳು
Deleteಚಂದ್ರಗಿರಿಯ ತೀರದಲ್ಲಿ ಇಡೀ ಕಾದಂಬರಿ ಕುರಿತು ಒಂದು ವಿಮರ್ಶಾತ್ಮಕ ಲೇಖನ ಪ್ರಕಟಿಸಿ ನಿಮ್ಮ ತರಗತಿಯಲ್ಲಾದ ಅನುಭವವೇ ನನಗೂ ಉಂಟಾಗಿದೆ ತುಂಬಾ ಚೆನ್ನಾಗಿ ಬರೆದಿರುವಿರಿ ಸರ್
ReplyDeleteಬರೆಯುತ್ತೇನೆ ಸರ್ ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು
Deleteಚೆನ್ನಾಗಿ ಬರೆದಿರುವಿರಿ. ಸಾಮಾನ್ಯವಾಗಿ ಸಾರಾ ರವರ ಕೃತಿಗಳು ಜೀವಸಂವೇದನೆ, ಭ್ರಷ್ಟ ಹಾಗೂ ಪಟ್ಟಭದ್ರ ಹಿತಾಸಕ್ತಿಗಳನ್ನು ತಣ್ಣಗೆ ಖಂಡಿಸುವ ಕೆಲಸ ಮಾಡಿವೆ.
ReplyDeleteಸಸಾಧ್ಯವಾದರೆ ಅವರ ತಳ ಒಡೆದ ದೋಣಿಯಲ್ಲಿ ಕೃತಿ ಓದಿ
Thank u sir
Deleteಸೂಪರ್ ಸರ್
ReplyDeleteThank u
Deleteಅದ್ಬುತವಾದ ಬರವಣಿಗೆ ಗುರೂಜಿ......👏👏
ReplyDeleteThank u
DeleteThis comment has been removed by the author.
Deleteಅರ್ಥಪೂರ್ಣ ಲೇಖನ ಸರ್...
ReplyDeleteThank u sir
Deleteಅರ್ಥಪೂರ್ಣ ಮಾತು ಗುರುಗಳೆ
ReplyDeleteಧನ್ಯವಾದಗಳು ತಮಗೆ
DeleteSuper sir
DeleteSuper sir
DeleteSuper sir
ReplyDelete