Total Pageviews
Thursday 1 November 2018
ಮಧುರಾಪುರ ನಗರ ವರ್ಣನೆಯ ಸಂದರ್ಭವೊಂದು ಹೀಗಿದೆ"ಮಧುರಾಪುರ ಭೋಗ ಭಾಗ್ಯಗಳಿಂದ ಕೂಡಿದೆ.ಆ ನಗರದ ರಾಜರಲ್ಲದೇ ಸಾಮಾನ್ಯರು ಸಹ ಮರಕತ ಮಾಣಿಕ್ಯದ ಆಭರಣಗಳನ್ನು ಧರಿಸುತ್ತಾರೆ......ಅವರ ಮನೆಗಳ ದ್ವಾರಗಳು, ಹೊಸ್ತಿಲುಗಳು, ಮಕರಸ್ತಂಭಗಳು ಬೆಳ್ಳಿ ಬಂಗಾರದಿಂದ ಅಮೂಲ್ಯ ರತ್ನಗಳ ಅಲಂಕಾರದಿಂದ ಕುಬೇರನ ಭವನವನ್ನು ನೆನಪಿಗೆ ತರುವಂತಿದೆ. ಅತಿ ಎತ್ತರದ ಕೋಟೆ ಬುರುಜುಗಳು ಆಗಸದಲ್ಲಿನ ಸಂಪಿಗೆಯ ಹೂವಿನ ಮಾಲೆಯಂತೆ ಕಂಗೊಳಿಸುತ್ತಿವೆ! ಆ ಕೋಟೆಯ ಸುತ್ತಲೂ ತುಂಬ ಆಳವಾದ ಕಂದಕಗಳು ನೀರಿನಿಂದ ತುಂಬಿ ಮಂದಾಕಿನಿಯನ್ನು ನೆನಪಿಗೆ ತರುತ್ತದೆ. ಪೌರಕಾಂತೆಯರ ಸುಕುಮಾರ ದೇಹದ ಮೇಲೆ ಗಂಧ, ಕಸ್ತೂರಿ,ಕುಂಕುಮ,ಅಗರುಚಂದನಗಳನ್ನು ಲೇಪಿಸುವಾಗ ಇವುಗಳಲ್ಲಿ ಬೆರೆತಿದ್ದರಿಂದ ಆ ಕಂದಕಕ್ಕೆ 'ಭೋಗವತಿ' ಎಂದು ಹೆಸರು ಬಂತು....." ಇಲ್ಲಿ ಮಧುರಾಪುರ ದ ಹೆಸರಿನಲ್ಲಿ ಕೃಷ್ಣದೇವರಾಯ ಬಣ್ಣಿಸಿರುವುದೆಲ್ಲ ತನ್ನ ಸಾಮ್ರಾಜ್ಯದ ಭೋಗವಿಲಾಸವನ್ನೇ ಎಂದೆನಿಸುತ್ತದೆ. ಈ ಕಾವ್ಯದ ಆರಂಭದ ಭಾಗವಂತೂ ಇದೊಂದು ಶೃಂಗಾರ ಕಾವ್ಯವೆನ್ನುವಷ್ಟರ ಮಟ್ಟಿಗೆ ರಸಮಯವಾಗಿದೆ.
Subscribe to:
Post Comments (Atom)
ಉಳುಕು ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು ...
-
ಕುಲದ ನೆಲೆಯನರಸುತ್ತಾ.... ನಮ್ಮ ನಾಡಿನ ಖ್ಯಾತ ಸಾಹಿತಿಗಳು, ಚಿಂತಕರಾದ ಡಾ.ಗುರುಲಿಂಗ ಕಾಪಸೆ ಯವರು " ಪಂಪ ರನ್ನ ರಂತಹ ವ...
-
ಅರ್ಧಾಂಗಿ ಪುರಾಣ! ನಾನು ಎಂದಿನಂತೆ ನಿತ್ಯಕರ್ಮಗಳ ಮುಗಿಸಿ ಕರ್ತವ್ಯಕ್ಕಾಗಿ ಸಿದ್ಧವಾಗುತ್ತಿರುವಾಗ ಕೇಳಿದಳು ಸಾಕಿಯೊಮ್ಮೆ - " ಈ ಹಳೆಯ ಅಂಗಿಯನ್ನ ಹಾಕ್ಕೋ...
-
ಉಳುಕು ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು ಕತ್ತಲೆಯ ಧಿಮಾಕನ್ನೊರೆಯಲು ಸಾಕು ಉಬ್ಬಿದ ಅಸ್ಥಿ ಮಜ್ಜೆಗಳು ಜಾ...
ಪದಗಳೊಡನೆ ನಿಮ್ಮ ಒಡನಾಟ ಅದ್ಬುತ, ಅನಂತ,ಅಮೋಘ, ಚೈತನ್ಯ ತೋರುತ್ತಿದೆ,ಗುರುವೆ
ReplyDeleteವಿಷಯದ ಅಭಿವ್ಯಕ್ತಿಗೆ ಅಭಿನಂದನೆಗಳು, ವಂದನೆಗಳು ಸರ್
ಸುಂದರವಾಗಿದೆ ಅತೀ ಮಧುರವಾಗಿದೆ
ReplyDeleteಸುಂದರವಾಗಿದೆ ಅತೀ ಮಧುರವಾಗಿದೆ
ReplyDeleteಅನಂತ ಧನ್ಯವಾದಗಳು ತಮಗೆ
ReplyDeleteಅನಂತ ಧನ್ಯವಾದಗಳು ತಮಗೆ
ReplyDeleteನಿಮ್ಮ ಶಬ್ದ ಸಂಪತ್ತು ಬರವಣಿಗೆಯ ಶೈಲಿ ಮತ್ತೆ ಮತ್ತೆ ಓದಬೇಕನಸುತ್ತದೆ ಅದ್ಭುತ ಸರ್
ReplyDeleteThank u sir
Delete