Total Pageviews

Saturday 8 February 2020

ಬರೆಯಲಾಗಲಿಲ್ಲ ನಿನ್ನನ್ನು
ಓ ಸಖಿಯೇ ಮರೆಯಲಾಗಲಿಲ್ಲ
ತಡಕಾಡಿದೆ ಶಬ್ದಸೂತಕದೊಳಗೆ
ಇಳಿದೆ ಅರ್ಥಗಳ ಗುಹೆಯೊಳಗೆ
ಕಳೆದೆ ಅನರ್ಥಗಳ ಸೆರೆಯೊಳಗೆ
ದಕ್ಕಲಿಲ್ಲವಲ್ಲ ಯಾಕೆ ಗೆಳತಿ
ಹೃದಯವಾಳುವ ಮನೆಯೊಡತಿ
ಹುಡುಕಿದೆ ಸುಧೆಯ ಪಾತ್ರೆಯೊಳಗೆ
ಮುಳುಗಿದೆ ಕಡಲ ಆಳದೊಳಗೆ
ಒಳಹೊಕ್ಕ ಜೇನ ಗೂಡೆನಗೆ
ನೀನಿಲ್ಲದ ಜಾತ್ರೆ ಸಂಭ್ರಮಿಸಲಿ ಹೇಗೆ
ಕಾಯುವೆನು ನಿನ್ನ ಹೃದಯದ ಹೊರಗೆ
ಬದುಕೆಂದುಕೊಂಡೆ ಒಲವ ಮೆರವಣಿಗೆ
ಕಾವ್ಯವಾಗದಿದ್ದಾಗ ನೀನು ಹೀಗೆ
ಕಳೆದುಕೊಂಡೆ ಜೀವನದ ಬಗೆ
ಚಡಪಡಿಸಿದೆ ಕಾವ್ಯಾಕ್ಷಿ ನಿನಗಾಗಿ
ಶಬ್ದಮಣಿಗಳ ಹೊತ್ತು ಮಾರಹೋಗಿ
ಬೆಂದ ನಾನು ಕೊಂಡೆ ಕೆಂಡಸಂಪಿಗೆ
ಗೀಚಿದೆ ಕಲಾಕೃತಿಯ ಮಧು ಹೀರುವ ರಸನಿಮಿಷದ ಹೊತ್ತಿಗೆ
ಆದರೂ ಕಾಣಲಿಲ್ಲ ಗೆರೆಗಳ ಮಧ್ಯೆ
ನಿನ್ನ ಮಂದಹಾಸದ ಮುತ್ತಿಗೆ
ಶೋಧಿಸಿದೆ ಇಬ್ಬನಿಯ ಮಾಯೆಯೊಳಗೆ
ಇಣುಕಿ ಇಬ್ಬಗೆಯ ದ್ವೈತದೊಳಗೆ
ಕೊರಳು ಚಾಚಿದ ಹಕ್ಕಿಯಿಂಚರದೊಳಗೆ
ಎಲ್ಲಿರುವೆ ಕವನ ರಮಣಿ
ದಕ್ಕಿಬಿಡು ಒಮ್ಮೆ ನಾನೆಂದಿಗೂ ನಿನಗೆ ಋಣಿ
x

No comments:

Post a Comment

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...